ಉತ್ತರಾಖಂಡದ ಉತ್ತರಕಾಶಿಯ ಮೇಘಸ್ಫೋಟದಿಂದ ದಿಡೀರ್ ಭಾರೀ ಪ್ರವಾಹಕ್ಕೆ ತುತ್ತಾದ ದರಾಲಿ, ಮತ್ತು ಹರ್ಸಿಲ್ ನಲ್ಲಿ ಶೋಧ ಮತ್ತುರಕ್ಷಣಾ ಕಾರ್ಯಗಳು ಮುಂದುವರಿದಿವೆ. ನಿನ್ನೆ 400ಕ್ಕೂ ಹೆಚ್ಚು ಜನರನ್ನು ಸ್ಧಳಾಂತರಗೊಳಿಸಲಾಗಿದ್ದು, ಇಂದೂ ಸಹ ಈ ಕಾರ್ಯಾಚರಣೆ ಮುಂದುವರಿದಿದ್ದು, ಸುರಕ್ಷಿತ ಸ್ಧಳಗಳಿಗೆ ಸಂತ್ರಸ್ತರ ಸ್ಧಳಾಂತರಕ್ಕೆ ಸೇನಾ ಹೆಲಿಕ್ಯಾಪ್ಟರ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ರಕ್ಷಣಾ ಮತ್ತು ಶೋಧ ಕಾರ್ಯಗಳಲ್ಲಿ ಎನ್ ಡಿಆರ್ ಎಫ್ ,ಎಸ್ ಡಿಆರ್ ಎಫ್ , ಆಗ್ನಿಶಾಮಕ ಸೇರಿದಂತೆ ವಿವಿಧ ತಂಡಗಳು ತೊಡಗಿವೆ. ಇದುವರೆಗೆ 566 ಯಾತ್ರಿಕರನ್ನು ರಕ್ಷಿಸಲಾಗಿದೆ. ಶೋಧಕಾರ್ಯಕ್ಕೆ ಶ್ವಾನಗಳು ಮತ್ತು ಅತ್ಯಾಧುನಿಕ ಸಾಧನಗಳನ್ನು ಬಳಸಿಕೊಳ್ಳಲಾಗುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




