Opinion

ನೀವು ಡಿವಿಡೆಂಡ್‌ ಪಡೆದುಕೊಂಡಿದ್ದೀರಾ…?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಹುತೇಕ ಸದಸ್ಯರೂ ಹಳ್ಳಿಗರು. ಸಹಕಾರಿ ಸಂಘಗಳ ನಿಯಮಗಳನ್ನು ಅಷ್ಟೊಂದು ಅಧ್ಯಯನ ಮಾಡಿದವರು ಹೆಚ್ಚಿನ  ಜನರಿಲ್ಲ. ಹಾಗಾಗಿ ಅನೇಕ ನಿಯಮಗಳನ್ನು ಅರ್ಥೈಸಿಕೊಳ್ಳುವುದೂ ಅನೇಕರುಗಳಿಗೆ ಕಷ್ಟವಾಗುತ್ತದೆ. ಸಹಕಾರಿ ಸಂಘ-ಸಾಲ-ಉಳಿತಾಯ ಇಷ್ಟೇ ಆಗಿದೆ.

Advertisement

ಇತ್ತೀಚೆಗೆ ಬಹುತೇಕ ಸಹಕಾರಿ ಸಂಘಗಳೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸಾಕಷ್ಟು ಲಾಭ ಗಳಿಸುತ್ತಿವೆ.ಗಳಿಸಿದ ಲಾಭದಲ್ಲಿ ಒಂದು ಭಾಗವನ್ನು ತನ್ನ ಸದಸ್ಯರಿಗೆ ಡಿವಿಡೆಂಟ್ ಮುಖಾಂತರ ಹಂಚುತ್ತಲೂ ಇವೆ.ಆದರೆ ಸದಸ್ಯರಿಗಾಗಿ ಹಂಚಲು ಮೀಸಲಿಟ್ಟ ಡಿವಿಡೆಂಟ್ ಮೊತ್ತದ ಒಂದು ದೊಡ್ಡ ಭಾಗವನ್ನು ಸದಸ್ಯರು ಪಡೆದುಕೊಳ್ಳದೇ ಇರುವುದೂ ಗೋಚರಿಸುತ್ತಿದೆ.

ಕಾಲಕಾಲಕ್ಕೆ ಮರುನಿಗದಿಸಲಾದ ಸದಸ್ಯತನಾ ಶುಲ್ಕವನ್ನು ಪಾವತಿಸದ ಸದಸ್ಯರುಗಳಿಗೆ,ಸುಸ್ತಿ‌ ಸಾಲ ಹೊಂದಿದ ಸದಸ್ಯರುಗಳಿಗೆ ಮತ್ತು ಇದೇ ಮಾದರಿಯಲ್ಲಿ ನಿಗದಿಸಲಾದ ಕಾರಣಗಳಿಗಾಗಿ ಒಂದಷ್ಟು ಸದಸ್ಯರುಗಳ ಡಿವಿಡೆಂಟ್ ಮೊತ್ತ ಸಂದಾಯ ಮಾಡಲು ಸಹಕಾರ ಸಂಘ ನಿರಾಕರಿಸ ಬಹುದು.ಮೃತ ಸದಸ್ಯರುಗಳ ಹೆಸರಿನಲ್ಲಿ ಸಂದಾಯವಾಗ ಬೇಕಿರುವ ಡಿವಿಡೆಂಟ್ ಮೊತ್ತದ ವಿತರಣೆಯಲ್ಲೂ ಒಂದಷ್ಟು ಅಡೆತಡೆಗಳು ಎದುರಾಗ ಬಹುದು.ಆದರೆ ಈ ವರ್ಗದ ಸದಸ್ಯರ ಹೊರತಾಗಿಯೂ ದೊಡ್ಡ ಸಂಖ್ಯೆಯ ಸದಸ್ಯರುಗಳು ಡಿವಿಡೆಂಟ್ ಪಡೆದುಕೊಳ್ಳುತ್ತಿಲ್ಲ ಎಂಬುದು ಕುತೂಹಲಕಾರಿಯಾಗಿದೆ. ಕಾರಣ ಹುಡುಕುತ್ತಾ ಹೋದಂತೆ ಒಂದಷ್ಟು ವಿಷಯಗಳು ಬೆಳಕಿಗೆ ಬಂದವು.

ಒಂದಷ್ಟು ಸದಸ್ಯರು ಸಹಕಾರ ಸಂಘ ಲಾಭ ಗಳಿಸ ಬಲ್ಲದು ಮತ್ತು ಬಂದ ಲಾಭದಲ್ಲಿ ನಮಗೂ ಒಂದು ಭಾಗ ಕೊಡಬಹುದು ಎಂಬ ಕಲ್ಪನೆಯೂ ಇಲ್ಲದವರು.ಡಿವಿಡೆಂಟ್ ಎಂಬ ಪದದ ಅರ್ಥವೇ ಇವರಿಗಾಗಿಲ್ಲ.ಸಹಕಾರ ಸಂಘದ ಆರ್ಥಿಕ ಪರಿಸ್ಥಿತಿಯ ಬಗ್ಗೆ, ಡಿವಿಡೆಂಟ್ ಬಗ್ಗೆ ತಿಳಿದು ಕೊಳ್ಳದ ಸದಸ್ಯರುಗಳ ಸಂಖ್ಯೆಯೂ ಸಣ್ಣದೇನಲ್ಲ. ಯಾವ ಸದಸ್ಯರುಗಳಿಗೆ ಲಾಭಾಂಶ ಹಂಚಿಕೆಯಾಗ್ತದೆ ಎಂಬುದು ಬಹುತೇಕ ಸದಸ್ಯರುಗಳಿಗೂ ಗೊತ್ತಿಲ್ಲ.ತಾವೇನೂ ವ್ಯವಹಾರ ಮಾಡಿಲ್ಲ ಆದ್ದರಿಂದ ಸದಸ್ಯರಾಗಿದ್ದರೂ ತಮಗೆ ಲಾಭಾಂಶ ಸಿಗದು ಅಂತ ತಮ್ಮಷ್ಟಕ್ಕೆ ತಾವೇ ಊಹಿಸಿಕೊಂಡವರ ಸಂಖ್ಯೆ ಅಗಾಧವಾದದ್ದು.
ತಮಗೆ ವೈಯಕ್ತಿಕವಾಗಿ ಲಾಭಾಂಶ ಹಂಚಿಕೆಯ ಮಾಹಿತಿ ಬಂದಿಲ್ಲ ಎಂಬ ಕಾರಣಕ್ಕಾಗಿಯೂ ಈ ಬಗ್ಗೆ ವಿಚಾರಿಸದ ಸದಸ್ಯರುಗಳೂ ಇದ್ದರು.ತಾವು ಕಚೇರಿಗೆ ಹೋದಾಗ ಸಿಬ್ಬಂದಿಗಳು ಅವರಾಗಿಯೇ ಕರೆದು ಲಾಭಾಂಶದ ಬಗ್ಗೆ ಹೇಳಿಲ್ಲದ ಕಾರಣ ತಾವು ಲಾಭಾಂಶ ಪಡೆದುಕೊಂಡಿಲ್ಲ ಅಂತ ಒಂದಷ್ಟು ಸದಸ್ಯರ ದೂರು.

ಇವೆಲ್ಲದರ ಜೊತೆಗೆ ಹಳ್ಳಿಗರೇ ಬಹುತೇಕ ಸದಸ್ಯರಾಗಿರುವ ,ಆಧುನಿಕ ವ್ಯವಸ್ಥೆಗಳು ಕನಿಷ್ಟ ಮಟ್ಟದಲ್ಲಿರುವ ಸಂಸ್ಥೆಗಳಿಂದ ಅತ್ಯಾಧುನಿಕ ವ್ಯವಸ್ಥೆಯ,ಸೇವೆಯ ಬೇಡಿಕೆ ಮುಂದಿಡುವವರೂ ಇದ್ದಾರೆ. ಕೊನೆಗೆ ಹೀಗೆ ವರ್ಷಾನುಗಟ್ಟಲೆ ಸದಸ್ಯರು ಪಡೆಯಲು ವಿಫಲರಾದ ಲಾಭಾಂಶ ಮೊತ್ತ ಏನಾಗ್ತದೆ ಎಂಬ ಪ್ರಶ್ನೆ ಇದೆ.ಒಂದು ಹಂತದಲ್ಲಿ ಇಂತಹ ಮೊತ್ತವನ್ನು ಸಂಸ್ಥೆಯ ಕ್ಷೇಮನಿಧಿಗೆ ಸಂಸ್ಥೆ ವರ್ಗಾಯಿಸೀತು.

ಬರಹ :
ರಮೇಶ ದೇಲಂಪಾಡಿ
ರಮೇಶ್‌ ದೇಲಂಪಾಡಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬದುಕು ಕಲಿಸುವ ಪಾಠಗಳು

ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ…

5 minutes ago

82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

18 minutes ago

ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ

ಸಕಲಜೀವಿಗಳ ಆಡುಂಬೊಲ ನಮ್ಮೀ  ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ;…

23 minutes ago

ಕೂಡಿಟ್ಟ ಆಸ್ತಿ ಮನೆಯಲ್ಲೇ ನಡೀತು ಕುಸ್ತಿ

ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…

9 hours ago

ಹವಾಮಾನ ವರದಿ | 23-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ | ರಾಜ್ಯದಲ್ಲಿ ಎ.27 ರ ನಂತರ ಮಳೆ ಹೆಚ್ಚಾಗುವ ಲಕ್ಷಣ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…

15 hours ago