ಲೋಕಸಭೆಯಲ್ಲಿ ಗದ್ದಲದ ನಡುವೆಯೇ ಕೇಂದ್ರ ನೌಕಾಯಾನ ಸಚಿವ ಸರ್ಬಾನಂದ ಸೋನೋವಾಲ್ ಕರಾವಳಿ ನೌಕಾಯಾನ ಮಸೂದೆ-2024ನ್ನು ಮಂಡಿಸಿದರು.
ಅಪರಾಹ್ನ ಸದನ ಮರು ಸಮಾವೇಶಗೊಂಡಾಗ ಸಚಿವ ಸರ್ಬಾನಂದ ಸೊನೊವಾಲ್, ಕರಾವಳಿ ಹಡಗು ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನನ್ನು ಕ್ರೋಢಿಕರಿಸಲು, ಕರಾವಳಿ ವ್ಯಾಪಾರ, ಭಾರತೀಯ ನಾಗರೀಕರ ಮಾಲೀಕತ್ವದ ಹಡಗುಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಪ್ರಯತ್ನಿಸುವ ಮಸೂದೆಯನ್ನು ಮಂಡಿಸಿದರು. ಕರಾವಳಿ ವ್ಯಾಪಾರದ ನಿಯಂತ್ರಣದಲ್ಲಿ ಉದ್ಭವಿಸುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲು ಶಾಸನವನ್ನು ತರಲಾಗಿದೆ. ಭಾರತೀಯ ಹಡಗುಗಳನ್ನು ಹೊರತು ಪಡಿಸಿ ಇತರ ಹಡಗುಗಳ ಪರವಾನಗಿ ಇಲ್ಲದೆ ಕರಾವಳಿ ನೀರಿನಲ್ಲಿ ವ್ಯಾಪಾರ ನಿಷೇಧಿಸುವ, ಒಳನಾಡು ಹಡಗುಗಳಿಗೆ ಕರಾವಳಿ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಲು ಅನುಮತಿ ನೀಡುವ ನಿಂಬಂಧನೆಗಳನ್ನು ವಿಧೇಯಕ ಒಳಗೊಂಡಿದೆ ಎಂದು ಸಚಿವರು ಹೇಳಿದರು.
2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…
ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…
ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…
ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…
ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…