ಕೊಕೋ ಕಹಿ | ಬೇಡಿಕೆ ಇದ್ದರೂ ಬೆಲೆ ಇಳಿಕೆ.. ರೈತರು ಸಂಕಷ್ಟದಲ್ಲಿ

January 22, 2026
7:33 AM

ಕೊಕೋಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವಂತೆಯೇ ಕಂಡರೂ, ಧಾರಣೆ ತೀವ್ರವಾಗಿ ಕುಸಿದಿರುವುದು ಕೊಕೋ ಬೆಳೆಗಾರರಿಗೆ ಸಂಕಷ್ಟ ತಂದಿದೆ. ಕೊರೋನಾ ಹಾಗೂ ಆ ಬಳಿಕ ವರ್ಷದಲ್ಲೂ ಉತ್ತಮ ಧಾರಣೆ ಇತ್ತು. ಕಳೆದ ವರ್ಷ ಕೂಡಾ ಉತ್ತಮ ಬೆಲೆ ಕಂಡಿದ್ದ ಕೊಕೋ, ಈ ಬಾರಿ ಕೊಯ್ಲು ಹಂತದಲ್ಲೇ ನಿರೀಕ್ಷಿತ ದರ ಪಡೆಯಲು ವಿಫಲವಾಗಿದೆ. ಈ ನಡುವೆ ಕೊಕೋ ಇಳುವರಿಯಲ್ಲೂ ಉತ್ತಮ ನಿರೀಕ್ಷೆ ಇದೆ. ಅಡಿಕೆ ಜೊತೆಗೆ ಉಪಬೆಳೆಯೂ ಅಗತ್ಯ ಹೌದು. ಆದರೆ ಈಗ ಧಾರಣೆ ಇಳಿಕೆಯೂ ಮತ್ತೆ ಸಂಕಷ್ಟ ತಂದಿದೆ.

2024ರಲ್ಲಿ ಕಿಲೋಗೆ ₹320ರ ತನಕ ವ್ಯಾಪಾರಗೊಂಡಿದ್ದ ಕೊಕೋ, 2025ರ ಆರಂಭಕ್ಕೆ ₹230ರ ಮಟ್ಟಕ್ಕೆ ಇಳಿದಿದೆ. ಕೆಲ ಮಾರುಕಟ್ಟೆಗಳಲ್ಲಿ ಕಡಿಮೆ ಗುಣಮಟ್ಟದ ಕೊಕೋಗೆ ₹80–110ರಷ್ಟೇ ದರ ಸಿಗುತ್ತಿರುವುದು, ಉತ್ಪಾದನಾ ವೆಚ್ಚವೂ ಮರಳದ ಸ್ಥಿತಿಗೆ ರೈತರನ್ನು ತಳ್ಳಿದೆ.

ಸಾಮಾನ್ಯ ಮಾರುಕಟ್ಟೆ ನಿಯಮದಂತೆ ಬೇಡಿಕೆ ಹೆಚ್ಚಿದರೆ ಬೆಲೆ ಏರಬೇಕು. ಆದರೆ, ಕೊಕೋ ಮಾರುಕಟ್ಟೆಯಲ್ಲಿ ಈ ತತ್ವ ಉಲ್ಟಾ ಆಗಿದೆ.
ಈ ವರ್ಷ ಹವಾಮಾನ ಅನುಕೂಲವಾಗಿದ್ದರಿಂದ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಇದೆ. ಈ ನಡುವೆಯೇ ಧಾರಣೆ ಕುಸಿತವು ಕೃಷಿಕರಿಗೆ ನಿರಾಸೆ ಮೂಡಿಸಿದೆ.  ಕೊಕೋ ಬೆಲೆ ಕುಸಿತದಿಂದ ಉತ್ಪಾದನಾ ವೆಚ್ಚವೂ ಮರಳದ ಸ್ಥಿತಿ ಇದೆ. ಕಾರ್ಮಿಕ ಹಾಗೂ ಸಂಸ್ಕರಣಾ ವೆಚ್ಚ ಹಾಗೂ ಮುಂದಿನ ಬೆಳೆ ನಿರ್ವಹಣೆಗೆ ಹಣದ ಕೊರತೆ ಎದುರಾಗಿದೆ ಎಂದು ಬೆಳೆಗಾರರು ಹೇಳುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಉತ್ಪಾದನೆ ಹೆಚ್ಚಾಗಿರುವುದು ಸಾಮಾನ್ಯವಾಗಿ ಬೆಳೆಗಾರರಿಗೆ ಉತ್ತಮ ಸುದ್ದಿ. ಆದರೆ, ಕೊಕೋದಲ್ಲಿ ರೈತರಿಗೆ ಲಾಭವಾಗದೆ, ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಮೌಲ್ಯವರ್ಧನೆ ಇಲ್ಲ, ಸಂಸ್ಕರಣಾ ಘಟಕಗಳ ಕೊರತೆ, ರಫ್ತು ಮಾರ್ಗಗಳ ಸೀಮಿತತೆ ಇದೆಲ್ಲಾ ಪರಿಣಾಮ ಬೀರಿದೆ. ಕೊಕೋ ಧಾರಣೆ ಕುಸಿತ ಬೆಲೆ ಸಮಸ್ಯೆ ಮಾತ್ರವಲ್ಲ.ಇಂದು ಮಲೆನಾಡಿನಲ್ಲಿ ಉಂಟಾಗಿರುವ ಅಡಿಕೆ ಎಲೆಚುಕ್ಕಿ ರೋಗ ಸಹಿತ ಹವಾಮಾನದ ಸಂಕಷ್ಟದ ನಡುವೆ ಕೊಕೋದಂತಹ ಉಪಬೆಳೆ ವರದಾನವಾಗಿತ್ತು.  ಇದು ಗ್ರಾಮೀಣ ಆರ್ಥಿಕತೆಯ ಪುನಶ್ಚೇತನವೂ ಆಗಿತ್ತು. ಆದರೆ ಈಗ ಕೊಕೋ ಧಾರಣೆಯೂ ಕುಸಿತವಾಗಿರುವುದು ಮತ್ತೆ ಸಂಕಷ್ಟಕ್ಕೆ ತಳ್ಳಿದಂತಾಗಿದೆ. ಯಾವುದೇ ಕೃಷಿಯಲ್ಲಿ ಉತ್ಪಾದನೆ ಹೆಚ್ಚಿದಾಗ ಬೆಲೆ ಕುಸಿಯುವುದು ರೈತನ ಹಣೆಬರಹ ಅಲ್ಲ, ಅದು ಸರ್ಕಾರದ, ಸಂಸ್ಥೆಗಳ ನೀತಿಯ ಸೋಲು!

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ
August 16, 2026
7:30 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ
August 15, 2026
2:07 PM
by: ಸಾಯಿಶೇಖರ್ ಕರಿಕಳ
ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ
ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror