ಕೊಬ್ಬರಿ ಮಾರುಕಟ್ಟೆ ಕುಸಿತ…! ರೈತರಿಗೆ ಮತ್ತೆ ಸಂಕಷ್ಟ

May 2, 2026
9:55 PM
ಕೊಬ್ಬರಿ ಎಣ್ಣೆ ಮತ್ತು ಕೋಪರಾ ಬೆಲೆಗಳು ಹೆಚ್ಚಿದ ಉತ್ಪಾದನೆ, ಕಡಿಮೆಯಾದ ಬೇಡಿಕೆ ಮತ್ತು ರಫ್ತು ಸಮಸ್ಯೆಯಿಂದ ಕುಸಿದಿವೆ. ಮಳೆಗಾಲದವರೆಗೆ ಬೆಲೆ ಮೇಲೆ ಒತ್ತಡ ಮುಂದುವರಿಯುವ ಸಾಧ್ಯತೆ ಇದೆ.

ಕೆಲವು ತಿಂಗಳ ಹಿಂದೆ ಗರಿಷ್ಠ ಮಟ್ಟ ತಲುಪಿದ್ದ ಕೊಬ್ಬರಿ ಎಣ್ಣೆ ಮತ್ತು ಕೊಬ್ಬರಿ ಬೆಲೆಗಳು ಇದೀಗ ತೀವ್ರ ಕುಸಿತ ಕಂಡು ಮಾರುಕಟ್ಟೆಯಲ್ಲಿ ಹಿನ್ನಡೆಯ ಲಕ್ಷಣ ತೋರಿಸುತ್ತಿವೆ. ಹೆಚ್ಚಿದ ಉತ್ಪಾದನೆ, ಕುಸಿತಗೊಂಡ ಬೇಡಿಕೆ ಹಾಗೂ ಪಶ್ಚಿಮ ಏಷ್ಯಾ ಸಂಕಷ್ಟದ ಪರಿಣಾಮವಾಗಿ ಉಂಟಾದ ರಫ್ತು ಅಡಚಣೆಗಳು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಬ್ಯುಸಿನೆಸ್‌ ಲೈನ್‌ ವರದಿ ಮಾಡಿದೆ.

ಕೋಚಿನ್ ಆಯಿಲ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ತಲಾತ್ ಮಹಮೂದ್ ಅವರ ಪ್ರಕಾರ, ಕೇರಳದಲ್ಲಿ ಕೊಬ್ಬರಿ ಎಣ್ಣೆ ಬೆಲೆ ಪ್ರತಿ ಲೀಟರ್‌ಗೆ ₹266ಕ್ಕೆ ಇಳಿದಿದ್ದು, ಕೊಬ್ಬರಿ ದರ ₹153ಕ್ಕೆ ಕುಸಿದಿದೆ. ಇದು ಕಳೆದ ಜುಲೈನಲ್ಲಿ ದಾಖಲಾಗಿದ್ದ ₹393 (ಎಣ್ಣೆ) ಮತ್ತು ₹259 (ಕೋಪರಾ) ಮಟ್ಟಗಳಿಂದ ಭಾರೀ ಇಳಿಕೆ ಆಗಿದೆ. ಅಲ್ಲದೆ, ತೆಂಗಿನಕಾಯಿ ಬೆಲೆಯೂ ಕಳೆದ ಏಳು ತಿಂಗಳಲ್ಲಿ ಸುಮಾರು ₹36 ಪ್ರತಿ ಕೆ.ಜಿ. ಮಟ್ಟಕ್ಕೆ ಇಳಿಕೆಯಾಗಿದೆ.

 ಕುಸಿತಕ್ಕೆ ಪ್ರಮುಖ ಕಾರಣಗಳು ಹೀಗಿವೆ,

  •  ಹೆಚ್ಚಿದ ಉತ್ಪಾದನೆ ಮತ್ತು ಮಾರುಕಟ್ಟೆಗೆ ಹೆಚ್ಚಿದ ಸರಬರಾಜು
  • ಪಶ್ಚಿಮ ಏಷ್ಯಾ ಸಂಕಷ್ಟದಿಂದ ರಫ್ತು ವ್ಯತ್ಯಯ
  • ಕಾರ್ಪೊರೇಟ್ ಹಾಗೂ ಸ್ಥಳೀಯ ಮಟ್ಟದಲ್ಲಿ ಕಡಿಮೆಯಾದ ಬೇಡಿಕೆ
  •  ತಮಿಳುನಾಡಿನಲ್ಲಿ ವ್ಯಾಪಾರಿಗಳು ಸ್ಟಾಕ್ ಕ್ಲಿಯರೆನ್ಸ್ ಮಾಡುತ್ತಿರುವುದು

ಈ ಎಲ್ಲಾ ಕಾರಣಗಳಿಂದ ಮಾರುಕಟ್ಟೆಯಲ್ಲಿ ಒತ್ತಡ ಹೆಚ್ಚಿದ್ದು, ಬೆಲೆಗಳು ಉತ್ಪಾದನಾ ವೆಚ್ಚದ ಸಮೀಪಕ್ಕೆ ಇಳಿಯುತ್ತಿರುವುದಾಗಿ ವರದಿಯಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಮುಂದಿನ ದಿನಗಳಲ್ಲಿ ಏನಾಗಬಹುದು? : ಮಹಮೂದ್ ಅವರ ಅಭಿಪ್ರಾಯದಂತೆ, ಮಳೆಗಾಲ ಆರಂಭವಾಗಿ ಸರಬರಾಜು ಕಡಿಮೆಯಾಗುವವರೆಗೆ ಬೆಲೆ ಕುಸಿತ ಮುಂದುವರಿಯುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿಯೂ ಹೆಚ್ಚಿದ ಸರಬರಾಜು ಮತ್ತು ದುರ್ಬಲ ರಫ್ತು ಬೇಡಿಕೆ ಬೆಲೆ ಮೇಲೆ ಒತ್ತಡ ತರುತ್ತಿದೆ.

Coconut oil and copra prices have declined sharply in Kerala due to higher production, weak demand, and export disruptions linked to the West Asia crisis. Prices have fallen significantly from last year’s peak and may continue to remain under pressure unless supply tightens during the monsoon.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಕತ್ತರಿಸಿ ಹಲಸು ನೆಟ್ಟ ಕೃಷಿಕ
July 5, 2026
11:19 PM
by: ದ ರೂರಲ್ ಮಿರರ್.ಕಾಂ
ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ
July 5, 2026
5:47 PM
by: ಮಹೇಶ್ ಪುಚ್ಚಪ್ಪಾಡಿ
ಬಾಳ ಮಧ್ಯಾಹ್ನದ ಲಹರಿ
July 5, 2026
3:10 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ
July 5, 2026
2:32 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror