Advertisement
ಸುದ್ದಿಗಳು

ಕೊಡಗಿನಲ್ಲಿ ಕಾಫಿ ದಸರಾ ಉತ್ಸವ – ವೈವಿಧ್ಯಮಯ ಕಾಫಿ ಉತ್ಪನ್ನಗಳ ಸವಿ

Share

ನಾಡಿನಾದ್ಯಂತ ದಸರಾ ಸಂಭ್ರಮ ಮನೆಮಾಡಿದ್ದು, ಕಾಫಿನಾಡು ಕೊಡಗಿನಲ್ಲಿ ಕಾಫಿ ದಸರಾ ಎಂಬ ವಿಶೇಷ ಉತ್ಸವ ಜನರನ್ನು ಆಕರ್ಷಿಸುತ್ತಿದೆ. ಕಾಫಿ ಬೀಜದಿಂದ ಕೇವಲ ಕಾಫಿ ಪಾನೀಯವಲ್ಲದೆ, ಇನ್ನಿತರ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಆರ್ಥಿಕ ಲಾಭ ಕಂಡುಕೊಳ್ಳಬಹುದು ಎಂಬ ಕುರಿತು ಉತ್ಸವ ಜನರಿಗೆ ಮಾಹಿತಿ ನೀಡಲು ಸಹಕಾರಿಯಾಗಿದೆ.

ಮಡಿಕೇರಿಯಲ್ಲಿ ನಡೆದ ಕಾಫಿ ದಸರಾದಲ್ಲಿ ವೈವಿಧ್ಯಮಯ ಕಾಫಿ ಹಾಗೂ ಪೂರಕ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಸಾರ್ವಜನಿಕರು, ಕಾಫಿ ಪ್ರಿಯರನ್ನು ಆಕರ್ಷಿಸುತ್ತಿದೆ.  ಕೊಡಗಿನ ಕಾಫಿ ಸಂಸ್ಕೃತಿ ಮತ್ತು ಅದರ ವೈವಿದ್ಯತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಕೊಡಗು ಕಾಫಿ ದಸರಾ ಕಾರ್ಯಕ್ರಮವು ಭಾರೀ ಯಶಸ್ಸು ಕಂಡಿದೆ.

ಕೆಲಸದ ಒತ್ತಡದ ಸಂದರ್ಭದಲ್ಲಿ ಅಥವಾ ಸುದೀರ್ಘ ಪ್ರಯಾಣದಿಂದ ಬಸವಳಿದಾಗ ಒತ್ತಡ ನಿವಾರಣೆಗೆ ಕಾಫಿ ಬಳಕೆ ಸರ್ವೇ ಸಾಮಾನ್ಯ. ಮನೆಯಿಂದ ಹಿಡಿದು ಕಚೇರಿಗಳವರೆಗೆ ಕಾಫಿ ಇಂದು ಜನಜೀವನದ ಅವಿಭಾಜ್ಯ ಅಂಗವಾಗಿದೆ. ಕಾಫಿ  ಇಲ್ಲದ ದಿನವನ್ನು ಊಹಿಸುವುದು ಕಷ್ಟಸಾಧ್ಯ.  ಗ್ರಾಮೀಣ ಪ್ರದೇಶಗಳಿಂದ ಹಿಡಿದು ಮೆಟ್ರೋ ನಗರಗಳಲ್ಲೂ ವೈವಿಧ್ಯಮಯ ಕಾಫಿಗೆ ಜನರು ಮಾರುಹೋಗಿದ್ದಾರೆ.

ಇದುವರೆಗೆ ಕಾಫಿ ಎಂದರೆ ಕೇವಲ ಪಾನೀಯ ಎಂದೇ ಭಾವಿಸಿದ್ದ ಜನರಿಗೆ, ಕಾಫಿಯಿಂದ ತಯಾರಿಸಬಹುದಾದ ವಿವಿಧ ಉತ್ಪನ್ನಗಳನ್ನು ಪರಿಚಯಿಸಿದ್ದು ಈ ಕಾರ್ಯಕ್ರಮದ ವಿಶೇಷವಾಗಿತ್ತು. ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಮಳೆಯ ನಡುವೆಯೂ ನಡೆದ ಕಾಫಿ ದಸರಾದಲ್ಲಿ ಕಾಫಿ ಬೀಜದಿಂದ ತಯಾರಿಸಿದ ಚಾಕ್ಲೇಟ್, ಕೇಕ್, ಐಸ್ ಕ್ರೀಂ, ಜ್ಯೂಸ್ ಇನ್ನಿತರ ಉತ್ಪನ್ನಗಳು ಜನರನ್ನು ಆಕರ್ಷಿಸಿದವು. ಉತ್ಸವದ 45ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕಾಫಿ ಬಿಸ್ಕೆಟ್, ಪೇಸ್ಟ್ರಿ ಸೇರಿದಂತೆ ಹಲವು ವಿಶಿಷ್ಟ ತಿನಿಸುಗಳು ಜನರನ್ನು ಆಕರ್ಷಿಸಿದವು. ಕಾಫಿ ಕುರಿತು ತಜ್ಜರಿಂದ ಉಪನ್ಯಾಸ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.

ಜಿಲ್ಲಾಧಿಕಾರಿ ವೆಂಕಟರಾಜನ್, ಕಾಫಿ ಬೆಳೆಗಾರರು ಎದುರಿಸುತ್ತಿರುವ ಕಾರ್ಮಿಕರ ಕೊರತೆ ಮತ್ತು ವಾತಾವರಣ ಬದಲಾವಣೆ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಕಾಫಿ ಬೆಳೆಗಾರರು ಒಂದೆಡೆ ಸೇರಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಬುಕರ್ ಪ್ರಶಸ್ತಿ ವಿಜೇತೆ ದೀಪಾ ಬಸ್ತಿ, ಕಾಫಿ ದಸರಾದಲ್ಲಿ ಪ್ರದರ್ಶನಕ್ಕಿಟ್ಟಿದ್ದ ವೈವಿದ್ಯಮಯ ಕಾಫಿ ಉತ್ಪನ್ನಗಳನ್ನು ಶ್ಲಾಘಿಸಿದರು. ಮಹಿಳೆಯರು ಈ ಉತ್ಪನ್ನಗಳನ್ನು ತಯಾರಿಸುವುದರ ಮೂಲಕ ಸ್ವಾವಲಂಭಿಗಳಾಗಬಹುದು ಎಂದರು. ಇಡೀ ಕಾರ್ಯಕ್ರಮ ಕಾಫಿಯ ಮಹತ್ವ ಮತ್ತು ಅದರ ಆರ್ಥಿಕ ಲಾಭದ ಬಗ್ಗೆ ಜನರಲ್ಲಿ ಹೊಸ ದೃಷ್ಠಿಕೋನ ಮೂಡುವಂತೆ ಮಾಡಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಮಾರುಕಟ್ಟೆ ಸುದ್ದಿ | ಅಡಿಕೆ ಧಾರಣೆ ಇಳಿಕೆಯಿಂದ ಸ್ಥಿರತೆಯತ್ತ ಮುಂದುವರಿಕೆ

ದಕ್ಷಿಣ ಕನ್ನಡ ಮತ್ತು ಮಲೆನಾಡು ಭಾಗದ ಕೃಷಿ ಮಾರುಕಟ್ಟೆಯಲ್ಲಿ ಸಹಜ ಸ್ಥಿತಿಯಲ್ಲಿ ಕಂಡುಬಂದಿದೆ.…

6 hours ago

2030ರೊಳಗೆ 5 ಟ್ರಿಲಿಯನ್ ಆರ್ಥಿಕತೆ ಮೀರಿದ ರಾಷ್ಟ್ರವಾಗಲಿದೆ ಭಾರತ

2030ರೊಳಗೆ ಭಾರತ 5 ಟ್ರಿಲಿಯನ್ ಆರ್ಥಿಕತೆಯನ್ನು ಮೀರುತ್ತದೆ ಎಂದು ಪ್ರಲ್ಹಾದ ಜೋಶಿ ವಿಶ್ವಾಸ…

11 hours ago

ರೈತರ ಹಿತಕ್ಕಾಗಿ ಎರಡು ಮಹತ್ವದ ಸುಧಾರಣೆಗಳು | ಹೊಸ ಬೀಜ ಕಾಯ್ದೆ, ಪರಿಷ್ಕೃತ ಕೀಟನಾಶಕ ಕಾಯ್ದೆ ಜಾರಿಗೆ ಕೇಂದ್ರ ಸಿದ್ಧತೆ

ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಹೊಸ ಬೀಜ ಕಾಯ್ದೆ ಮತ್ತು ಪರಿಷ್ಕೃತ ಕೀಟನಾಶಕ…

11 hours ago

ಇನ್ನೆರಡು ದಿನಗಳಲ್ಲಿ ತಂಬಾಕು ಬೆಳೆಗಾರರ ಸಮಸ್ಯೆಗೆ ಪರಿಹಾರ : ಕುಮಾರಸ್ವಾಮಿ ಭರವಸೆ

ಮೈಸೂರು ವಿಭಾಗದ ತಂಬಾಕು ರೈತರು ಖರೀದಿ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದು, ಈ ಬಗ್ಗೆ ಕೇಂದ್ರ…

11 hours ago

ಅಡಿಕೆ ತೋಟದ ಹಳದಿ ಎಲೆ ರೋಗ ಚೀನಾದಲ್ಲೂ ಮದ್ದಿಲ್ಲ…! | ಮಣ್ಣಿನೊಳಗಿನ ಡಿಎನ್‌ಎ ನೀಡುತ್ತಿದೆ ಎಚ್ಚರಿಕೆ

ಅಡಿಕೆಯ ಹಳದಿ ಎಲೆ ರೋಗವು(YLD) ಕೇವಲ ಎಲೆಯ ಸಮಸ್ಯೆಯಲ್ಲ, ಮಣ್ಣಿನೊಳಗಿನ ಸೂಕ್ಷ್ಮಜೀವಿಗಳ ಸಮತೋಲನ…

23 hours ago

ಹವಾಮಾನ ವರದಿ | 02-03-2026 | ರಾಜ್ಯದಲ್ಲಿ ಮೋಡ ಕವಿದ ವಾತಾವರಣ… ಆದರೆ, ಮಳೆ ಇದೆಯೋ..? ಇಲ್ವೋ..?!

ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಾರ್ಚ್‌ 3 ರವರೆಗೆ ಮಳೆಯ ಸಾಧ್ಯತೆ…

1 day ago