ಬೇಸಾಯಕ್ಕೆ ಸಗಣಿ ಗೊಬ್ಬರ ಬಳಸುವ ಮನಸು ಮಾಡಿ | ಹಸುಗಳು ಸ್ವಾಭಿಮಾನದಿಂದ ಉಳಿಯಲು ಸಾಧ್ಯ |

December 14, 2023
12:41 PM
ಕೊಟ್ಟಿಗೆ ಗೊಬ್ಬರ ಬಳಸಲು ಹಾಗೂ ಸೂಕ್ತ ದರ ನೀಡಿ ಎಲ್ಲರೂ ಖರೀದಿ ಮಾಡಿದರೆ ಗೋವು ಸಾಕಾಣಿಕೆ ಹೊರೆಯಾಗದು.

ಪ್ರತಿ ಒಂದು ಲಕ್ಷ ಎಕರೆಗೆ ಕೊಟ್ಟಿಗೆ ಗೊಬ್ಬರ(cow dung manure) ಸಿಗುವುದು ಕೇವಲ ಹತ್ತು ಸಾವಿರ ಎಕರೆಗಿಂತ ಕಡಿಮೆ ಕೃಷಿ ಪ್ರದೇಶಕ್ಕೆ(Agricultural Field) ಮಾತ್ರ. ಉಳಿದ ತೊಂಬತ್ತು ಸಾವಿರ ಎಕರೆಗೆ ಕೊಟ್ಟಿಗೆ ಗೊಬ್ಬರ ಇಲ್ಲ. ರೈತರು(Farmer) ನ್ಯಾಯಯುತ ಬೆಲೆಗೆ ಕೊಟ್ಟಿಗೆ ಗೊಬ್ಬರ ಬಳಸುವ ಮನಸು ಮಾಡಿದರೆ ಗೊಬ್ಬರನ ವಿದೇಶದಿಂದ( abroad) ಆಮದು(Import) ಮಾಡಿಕೊಳ್ಳಬೇಕು. ಅಷ್ಟು ಅವಶ್ಯಕವಾಗಬಹುದು.

Advertisement
Advertisement

ಆದರೆ ರೈತರು ಈಗೀಗ ಕೊಟ್ಟಿಗೆ ಗೊಬ್ಬರವನ್ನು ಬಳಸೋದು ಕಡಿಮೆ ಮಾಡಿದಾರೆ. ಈಗ ಗೋವು ಹಾಲಿಗಾಗಿ ಮಾತ್ರ ಸಾಕಣೆ ಎನ್ನುವಂತಾಗಿದೆ. ಸಗಣಿ ಬೇಡಿಕೆ ಇಲ್ಲವಾದರೆ ಹಾಲು ಕೊಡದ ಹಸು ಮತ್ತು ಹೋರಿ ಇನ್ಯಾತಕ್ಕೆ ಸಾಕ್ತಾರೆ..?
ಇದು ವಾಸ್ತವ…

ಸಗಣಿ ಗೊಬ್ಬರ ಬಳಸದು ಬಿಟ್ಟ ಮೇಲೆ ನಮ್ಮ ಭಾಗದ ಪ್ರಮುಖ ಬೆಳೆ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೇ ಬರ್ತಿಲ್ಲ. ಈಗ ಬಹಳಷ್ಟು ಅಡಿಕೆ ಬೆಳೆಗಾರರು ಅಡಿಕೆ ಬೇಸಾಯಕ್ಕೆ ಸಗಣಿ ಗೊಬ್ಬರ ಬಳಸುವ ಮನಸು ಮಾಡ್ತಿದ್ದಾರೆ. ಕೊಟ್ಟಿಗೆ ಗೊಬ್ಬರ ಬಳಸುವ ರೈತರು ಹೆಚ್ಚಾದರೆ ಖಂಡಿತವಾಗಿಯೂ ಎಲ್ಲಾ ಹಸುಗಳು ಸ್ವಾಭಿಮಾನದಿಂದ ಉಳಿಯಲು ಸಾದ್ಯ. ಕೃಷಿಗೆ ಸಗಣಿ ಗೊಬ್ಬರ ವ್ಯಾಪಕವಾಗಿ ಬಳಕೆಯಾಗುವುದು ಹಸುಗಳ ಉಳಿಯಲು ಪೂರಕವಾದ ವಾತಾವರಣ ಸೃಷ್ಟಿಸುತ್ತದೆ.

ರೈತರು ಕೊಟ್ಟಿಗೆ ಗೊಬ್ಬರ ಕೃಷಿ ಗೆ ಬಳಸಲು ಸರ್ಕಾರವೂ ಪ್ರೋತ್ಸಾಹ ನೀಡಬೇಕು. ಸಮಾಜ ರೈತರು ಗೋವುಗಳು ಉಳಿಸುವ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವ ಮನಸು ಮಾಡಿದರೆ ಗೋವುಳಿಯುತ್ತದೆ. ಗೋವು ಹೊರೆಯಲ್ಲ…

 

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ವಿಶ್ವಪರಿಸರ ದಿನ | ತಾಯಿಯ ಹೆಸರಲ್ಲಿ ಒಂದು ಮರ -2.0 ಅಭಿಯಾನ
June 5, 2025
7:47 AM
by: The Rural Mirror ಸುದ್ದಿಜಾಲ
ಮದುವೆಯ ವಿಳಂಬಕ್ಕೆ ಈ ಕಾರಣವೂ ಇರಬಹುದು..! ಪರಿಹಾರ ಕ್ರಮಗಳು ಇಲ್ಲಿದೆ ನೋಡಿ
June 5, 2025
7:17 AM
by: ದ ರೂರಲ್ ಮಿರರ್.ಕಾಂ
ಅಡುಗೆಯ ಕಚ್ಚಾ ಎಣ್ಣೆಯ ಮೇಲಿನ ಆಮದು ಸುಂಕ ಕಡಿತ | ತೆಂಗಿಗಿಲ್ಲ ಆತಂಕ.. | ಧಾರಣೆ ಇಳಿಕೆಯ ಆತಂಕವಿಲ್ಲ |
June 4, 2025
11:06 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಅರಣ್ಯದ ಬಗ್ಗೆ ಹೊಸ ಪ್ರಜ್ಞೆಯನ್ನು ಜನರು ಜಾಗೃತಗೊಳಿಸಬೇಕು
June 4, 2025
7:27 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group