ಅನುಕ್ರಮ

ಸ್ವಚ್ಛಂದ ಬದುಕಿಗೆ ಕೊರೋನಾ ಎಂಬ ಬೇಲಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಳೆದ ವರುಷ ಚೀನಾದ ವುಹಾನ್ ಎಂಬ ಪ್ರದೇಶದಲ್ಲಿ ಹುಟ್ಟಿಕೊಂಡ ಈ ಕೊರೋನಾವೆಂಬ ಮಾರಕ ವೈರಸ್ ಮುಂದೆ ವಿಶ್ವವಿಡೀ ವ್ಯಾಪಿಸಿ ಈ ರೀತಿ ಬದಲಾವಣೆಯನ್ನು ಉಂಟು ಮಾಡಬಹುದೆಂಬ ಕಲ್ಪನೆ ಬಹುಶಃ ಯಾರಿಗೂ ಇರಲಿಲ್ಲ. ಕೊರೋನಾ ಎಂಬ ಮಹಾಮಾರಿ ಬಂದ ಮೇಲೆ ಜನರ ಜೀವನ ಶೈಲಿ ಬದಲಾಗಿದ್ದಂತೂ ಸುಳ್ಳಲ್ಲ. ಈ ರೋಗ ಜಗತ್ತಿನ ಆರ್ಥಿಕತೆಯನ್ನೇ ಅಲ್ಲಾಡಿಸಿಬಿಟ್ಟಿತು. ಇದರಿಂದಾಗಿ ವಿಶ್ವದಾದ್ಯಂತ ಎಷ್ಟೋ ಮಹತ್ತರವಾದ ಬದಲಾವಣೆಗಳು ಉಂಟಾದವು. ತಮ್ಮ ಪಾಡಿಗೆ ಕೆಲಸ ಕಾರ್ಯಕ್ಕೆ ತೆರಳಿ ಜೀವನ ಸಾಗಿಸುತ್ತಿದ್ದ ಎಷ್ಟೋ ಮಂದಿ ಉದ್ಯೋಗವನ್ನು ಕಳೆದುಕೊಂಡರು. ಅದೆಷ್ಟೋ ಉದ್ದಿಮೆಗಳು ಹಳ್ಳ ಹಿಡಿದವು. ಕಾರ್ಮಿಕರು ಕೆಲಸ ಕಳೆದುಕೊಂಡು ಬವಣೆ ಅನುಭವಿಸಿದರು. ಪಟ್ಟಣಗಳಿಂದ ಮರಳಿ ಹಳ್ಳಿಯಲ್ಲಿ ಕೃಷಿ ಕಾಯಕವನ್ನು ಹಿಡಿದರು. ವಿದೇಶಿ ಜಾಡು ಹಿಡಿದು ವಿದೇಶಗಳಿಗೆ ತೆರಳಿದ್ದವರು ಸ್ವದೇಶಗಳಿಗೆ ಹಿಂತಿರುಗಿದರು. ಇಷ್ಟೆಲ್ಲಾಒಳಿತು ಕೆಡುಕುಗಳ ನಡುವೆ ಈಗ ಎಲ್ಲವೂ ಹಂತಹಂತವಾಗಿ ಸಹಜಸ್ಥಿತಿಗೆ ಮರಳಿ ಬರುತ್ತಿದೆ.
Advertisement
Advertisement

ಆದರೂ ಬದುಕು ಮೊದಲಿನಂತಿಲ್ಲ. ಕೊರೋನಾ ಪೂರ್ವದಲ್ಲಿ ನಿರಾಯಾಸವಾಗಿ ಓಡಾಡುತ್ತಿದ್ದ ಮನುಷ್ಯನ ಸ್ವಾತಂತ್ರ್ಯಕ್ಕೆ ಸ್ವಲ್ಪ ಕಡಿವಾಣ ಬಿದ್ದಿದೆ ಎಂದರೆ ತಪ್ಪಾಗಲಾರದು. ಹೊರಗಡೆ ತೆರಳುವಾಗ ಮಾಸ್ಕ್ ಧರಿಸುವುದನ್ನು ಅವನು ಮರೆಯುವಂತಿಲ್ಲ. ಇದರೊಂದಿಗೆ ಹಲವು ನೀತಿನಿಯಮಗಳನ್ನು ಅವನು ಪಾಲಿಸಲೇ ಬೇಕು. ಎಲ್ಲಿಗೆ ತೆರಳುವುದಿದ್ದರೂ ಮನದಲ್ಲಿ ಕೊರೋನಾದ ಆತಂಕ ಇರುವುದಂತೂ ದಿಟ. ಕೊರೋನಾ ಎಂಬ ಪದ ಮಾನವನ ಸಹಜ ಜೀವನಕ್ಕೆ ಅಡ್ಡಿಯಾಗಿದೆ. ಈ ಮಾರಕ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಯಾರೇ ಹೇಳಿದರೂ ಪುನಃ ಹೊಸ ರೂಪದಲ್ಲಿ ಬಂದು ಕಾಡುತ್ತಿದೆ. ಎಲ್ಲೇ ಹೋದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ , ಮಾಸ್ಕ್ ಧರಿಸುವಿಕೆ ಹೀಗೆ ಅನೇಕ ನಿಯಮಗಳು ಮಾನವನ ಸ್ವಚ್ಛಂದ ಬದುಕಿಗೆ ಬೇಲಿ ಹಾಕಿರುವುದಂತೂ ಸುಳ್ಳಲ್ಲ. ಆದರೂ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಇವೆಲ್ಲವನ್ನೂ ನಾವು ಪಾಲಿಸಲೇಬೇಕಾಗಿದೆ. ಕೊರೋನಾ ನಿವಾರಣೆಗೆಂದು ಬಂದಿರುವ ಲಸಿಕೆ ಈ ಕೊರೋನಾ ಶಕೆ ಅಂತ್ಯಗೊಳಿಸಲಿ ಎಂಬುದೇ ಎಲ್ಲರ ಆಶಯ. ಇವೆಲ್ಲಾ ಸರಿಹೋಗಲು ಕಾಲಾವಕಾಶದ ಅಗತ್ಯವಂತೂ ಇದ್ದೇ ಇದೆ. ಹೀಗಾಗಿ ಅಲ್ಲಿಯವರೆಗೂ ಕಾಯುವುದೊಂದೇ ಮಾನವರಿಗೆ ಉಳಿದಿರುವ ದಾರಿ.

 

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಬದುಕು ಪುರಾಣ | ಅಂದು ಒಬ್ಬ ಬಕಾಸುರ.. ಇಂದು?

ಭೋಜನವೆಂದರೆ ಉದರಾಗ್ನಿಯನ್ನು ತಣಿಸುವ ಯಜ್ಞ. ಉದರಾಗ್ನಿಗೆ ಖಾದ್ಯಗಳೇ ಆಜ್ಯಗಳು. ಯಜ್ಞವೆಂದಾಗ ಶ್ರದ್ಧೆ, ಭಕ್ತಿ ಮತ್ತು…

9 hours ago

ಪರಿಘ ಯೋಗ, ಈ 5 ರಾಶಿಗೆ ಅತ್ಯಂತ ಶುಭ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

9 hours ago

ಹವಾಮಾನ ವರದಿ | 07-06-2025 | ಜೂನ್ 11 ರಿಂದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆ

ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದರ ಪ್ರಭಾವದಿಂದ ಜೂನ್ 11 ರಿಂದ…

1 day ago

ಸುಸ್ಥಿರ ಅಭಿವೃದ್ಧಿ ಯಾವಾಗಲೂ ತತ್ವಶಾಸ್ತ್ರ ಮತ್ತು ಸಿದ್ಧಾಂತದ ಮೂಲತತ್ವಾಗಿದೆ

ಇತ್ತೀಚಿನ  ದಿನಗಳಲ್ಲಿ ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ, ಪರಿಸರ ಸಂರಕ್ಷಣೆಯ ಬಗ್ಗೆ ಚಿಂತಿಸುವಂತೆ…

1 day ago

ನಿಮಗೆ ಸಾಡೇಸಾತಿ ಶುರುವಾಗಿದ್ರೆ ಶನಿ ನೀಡ್ತಾನೆ ಈ 6 ಸೂಚನೆ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

1 day ago

ಹೊಸರುಚಿ | ಹಲಸಿನ ಹಣ್ಣಿನ ಮಲ್ಪುರಿ

ಹಲಸಿನ ಹಣ್ಣಿನ ಮಲ್ಪುರಿಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣಿನ ಪಲ್ಪ್ 1/2 ಕಪ್,…

1 day ago