ಅನುಕ್ರಮ

ಸ್ವಚ್ಛಂದ ಬದುಕಿಗೆ ಕೊರೋನಾ ಎಂಬ ಬೇಲಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಳೆದ ವರುಷ ಚೀನಾದ ವುಹಾನ್ ಎಂಬ ಪ್ರದೇಶದಲ್ಲಿ ಹುಟ್ಟಿಕೊಂಡ ಈ ಕೊರೋನಾವೆಂಬ ಮಾರಕ ವೈರಸ್ ಮುಂದೆ ವಿಶ್ವವಿಡೀ ವ್ಯಾಪಿಸಿ ಈ ರೀತಿ ಬದಲಾವಣೆಯನ್ನು ಉಂಟು ಮಾಡಬಹುದೆಂಬ ಕಲ್ಪನೆ ಬಹುಶಃ ಯಾರಿಗೂ ಇರಲಿಲ್ಲ. ಕೊರೋನಾ ಎಂಬ ಮಹಾಮಾರಿ ಬಂದ ಮೇಲೆ ಜನರ ಜೀವನ ಶೈಲಿ ಬದಲಾಗಿದ್ದಂತೂ ಸುಳ್ಳಲ್ಲ. ಈ ರೋಗ ಜಗತ್ತಿನ ಆರ್ಥಿಕತೆಯನ್ನೇ ಅಲ್ಲಾಡಿಸಿಬಿಟ್ಟಿತು. ಇದರಿಂದಾಗಿ ವಿಶ್ವದಾದ್ಯಂತ ಎಷ್ಟೋ ಮಹತ್ತರವಾದ ಬದಲಾವಣೆಗಳು ಉಂಟಾದವು. ತಮ್ಮ ಪಾಡಿಗೆ ಕೆಲಸ ಕಾರ್ಯಕ್ಕೆ ತೆರಳಿ ಜೀವನ ಸಾಗಿಸುತ್ತಿದ್ದ ಎಷ್ಟೋ ಮಂದಿ ಉದ್ಯೋಗವನ್ನು ಕಳೆದುಕೊಂಡರು. ಅದೆಷ್ಟೋ ಉದ್ದಿಮೆಗಳು ಹಳ್ಳ ಹಿಡಿದವು. ಕಾರ್ಮಿಕರು ಕೆಲಸ ಕಳೆದುಕೊಂಡು ಬವಣೆ ಅನುಭವಿಸಿದರು. ಪಟ್ಟಣಗಳಿಂದ ಮರಳಿ ಹಳ್ಳಿಯಲ್ಲಿ ಕೃಷಿ ಕಾಯಕವನ್ನು ಹಿಡಿದರು. ವಿದೇಶಿ ಜಾಡು ಹಿಡಿದು ವಿದೇಶಗಳಿಗೆ ತೆರಳಿದ್ದವರು ಸ್ವದೇಶಗಳಿಗೆ ಹಿಂತಿರುಗಿದರು. ಇಷ್ಟೆಲ್ಲಾಒಳಿತು ಕೆಡುಕುಗಳ ನಡುವೆ ಈಗ ಎಲ್ಲವೂ ಹಂತಹಂತವಾಗಿ ಸಹಜಸ್ಥಿತಿಗೆ ಮರಳಿ ಬರುತ್ತಿದೆ.
Advertisement

ಆದರೂ ಬದುಕು ಮೊದಲಿನಂತಿಲ್ಲ. ಕೊರೋನಾ ಪೂರ್ವದಲ್ಲಿ ನಿರಾಯಾಸವಾಗಿ ಓಡಾಡುತ್ತಿದ್ದ ಮನುಷ್ಯನ ಸ್ವಾತಂತ್ರ್ಯಕ್ಕೆ ಸ್ವಲ್ಪ ಕಡಿವಾಣ ಬಿದ್ದಿದೆ ಎಂದರೆ ತಪ್ಪಾಗಲಾರದು. ಹೊರಗಡೆ ತೆರಳುವಾಗ ಮಾಸ್ಕ್ ಧರಿಸುವುದನ್ನು ಅವನು ಮರೆಯುವಂತಿಲ್ಲ. ಇದರೊಂದಿಗೆ ಹಲವು ನೀತಿನಿಯಮಗಳನ್ನು ಅವನು ಪಾಲಿಸಲೇ ಬೇಕು. ಎಲ್ಲಿಗೆ ತೆರಳುವುದಿದ್ದರೂ ಮನದಲ್ಲಿ ಕೊರೋನಾದ ಆತಂಕ ಇರುವುದಂತೂ ದಿಟ. ಕೊರೋನಾ ಎಂಬ ಪದ ಮಾನವನ ಸಹಜ ಜೀವನಕ್ಕೆ ಅಡ್ಡಿಯಾಗಿದೆ. ಈ ಮಾರಕ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಯಾರೇ ಹೇಳಿದರೂ ಪುನಃ ಹೊಸ ರೂಪದಲ್ಲಿ ಬಂದು ಕಾಡುತ್ತಿದೆ. ಎಲ್ಲೇ ಹೋದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ , ಮಾಸ್ಕ್ ಧರಿಸುವಿಕೆ ಹೀಗೆ ಅನೇಕ ನಿಯಮಗಳು ಮಾನವನ ಸ್ವಚ್ಛಂದ ಬದುಕಿಗೆ ಬೇಲಿ ಹಾಕಿರುವುದಂತೂ ಸುಳ್ಳಲ್ಲ. ಆದರೂ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಇವೆಲ್ಲವನ್ನೂ ನಾವು ಪಾಲಿಸಲೇಬೇಕಾಗಿದೆ. ಕೊರೋನಾ ನಿವಾರಣೆಗೆಂದು ಬಂದಿರುವ ಲಸಿಕೆ ಈ ಕೊರೋನಾ ಶಕೆ ಅಂತ್ಯಗೊಳಿಸಲಿ ಎಂಬುದೇ ಎಲ್ಲರ ಆಶಯ. ಇವೆಲ್ಲಾ ಸರಿಹೋಗಲು ಕಾಲಾವಕಾಶದ ಅಗತ್ಯವಂತೂ ಇದ್ದೇ ಇದೆ. ಹೀಗಾಗಿ ಅಲ್ಲಿಯವರೆಗೂ ಕಾಯುವುದೊಂದೇ ಮಾನವರಿಗೆ ಉಳಿದಿರುವ ದಾರಿ.

 

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಜೋಯಿಡಾದ ಗ್ರಾಮದಲ್ಲಿ ಸೇತುವೆ ಕುಸಿತ | ತಾತ್ಕಾಲಿಕ ಕಾಲು ಸಂಕ ನಿರ್ಮಾಣ |

ಜೋಯಿಡಾ ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೀಸೈ ಗ್ರಾಮದಲ್ಲಿ ಭಾರೀ ಮಳೆಯಿಂದ…

1 hour ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶಿಖರ್ ಬಿ.ಕೆ.

ಶಿಖರ್ ಬಿ.ಕೆ. 6ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆಸುಬ್ರಹ್ಮಣ್ಯ | - ದ…

4 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕ್ರಿಶನ್ ಎಸ್ ಭಟ್

ಕ್ರಿಶನ್ ಎಸ್ ಭಟ್, ಮೇರಿ ಹಿಲ್, 1ನೇ ತರಗತಿ, ಎಸ್‌ಡಿಎಂ ಶಾಲೆ, ಮಂಗಳೂರು…

5 hours ago

ಕೃಷಿ ವಲಯದಲ್ಲಿ ರೈತ ಕಲ್ಯಾಣಕ್ಕೆ ಒತ್ತು | ರಾಷ್ಟ್ರ ನಿರ್ಮಾಣದಲ್ಲಿ ರೈತರ ಕೊಡುಗೆ ಅಪಾರ

ರೈತರು ಹೊಲಗಳಲ್ಲಿ ಬಳಕೆ ಮಾಡುತ್ತಿರುವ ರಸಗೊಬ್ಬರಗಳು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ವೈಜ್ಞಾನಿಕ…

5 hours ago

ಕೃಷಿಯಲ್ಲಿ ದೂರ ಶಿಕ್ಷಣ ಕುರಿತ ಕಾರ್ಯಗಾರ

ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮತ್ತು ಜ್ಞಾನ ಹೆಚ್ಚಿಸುವ ಉದ್ದೇಶದಿಂದ ದೂರಶಿಕ್ಷಣದ ಮೂಲಕ ತರಬೇತಿ…

5 hours ago