ಹಸುವಿಗೆ ಕೃತಕ ಕಾಲು ಜೋಡಣೆಯ ಮೂಲಕ ಮೂರು ವರ್ಷದ ಹಸುವನ್ನು ರಕ್ಷಣೆ ಮಾಡಿದ ಘಟನೆ ಕೇರಳದ ತ್ರಿಶೂರ್ ಮಣಲೂರು ಕುಂದುಕುಲಂನಲ್ಲಿ ನಡೆದಿದೆ. ಕೃಷಿಕ ಡೇವಿಸ್ ಮತ್ತು ಅವರ ಕುಟುಂಬದವರು ಈ ಸಂತಸ ಹಾಗೂ ಮಾನವೀಯ ಕಾರ್ಯವನ್ನು ಹಂಚಿಕೊಂಡಿದ್ದಾರೆ.
ಒಂದು ವರುಷದ ಮಣಿಕುಟ್ಟಿ ಎಂಬ ಹಸುವನ್ನು ಮೇಯಿಸಲು ತೆಂಗಿನ ಮರಕ್ಕೆ ಕಟ್ಟಿ ಹಾಕಲಾಗಿತ್ತು. ಈ ವೇಳೆಯಲ್ಲಿ ನಾಯಿ ದಾಳಿಯಿಂದ ಹೆದರಿ ತೆಂಗಿನಮರದ ಸುತ್ತಲೂ ಓಡಿತ್ತು. ಆಗ ಹಸುವಿನ ಕಾಲಿಗೆ ಹಗ್ಗ ಸುತ್ತಿ ಬಿದ್ದು ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಚಿಕಿತ್ಸೆಯಲ್ಲಿ ಗಮನಿಸಿದಾಗ ಹಸುವಿನ ಕಾಲು ತುಂಡಾಗಿರುವುದು ತಿಳಿಯಿತು. ಪಶುವೈದ್ಯಕೀಯ ವಿಶ್ವವಿದ್ಯಾಲಯದ ವೈದ್ಯರು ಕಾಲು ಕತ್ತರಿಸಲು ಸಲಹೆ ನೀಡಿದರು. ನಂತರ, ವೈದ್ಯರ ಸಲಹೆಯಂತೆ ಚಿಕಿತ್ಸೆ ಮಾಡಿ ಬ್ಯಾಂಡೆಜ್ ಹಾಕಿದ್ದರು.
ಬಳಿಕ ಡೇವಿಡ್ ಕುಟುಂಬವು ಹಸುವಿಗೆ ಕೃತಕ ಕಾಲುವನ್ನು ಅಳವಡಿಸುವ ಬಗ್ಗೆ ಯೋಚಿಸಿದರು. ತ್ರಿಶೂರ್ ನಲ್ಲಿರುವ ಕಿಟ್ಕ್ಯಾಟ್ ಅರ್ಥೋಟಿಕ್ಸ್ ಸೆಂಟರ್ನಲ್ಲಿ ಈ ಬಗ್ಗೆ ಮಾತನಾಡಿದರು. ಪ್ರಾಯೋಗಿಕ ಆಧಾರದ ಮೇಲೆ ಕಳೆದ ತಿಂಗಳು ಮಣಿಕುಟ್ಟಿಗೆ ಕೃತಕ ಕಾಲು ಅಳವಡಿಸಲಾಗಿತ್ತು.
ಈಗ ಮಣಿಕುಟ್ಟಿಯು ಅಳವಡಿಸಿಕ ಕೃತಕ ಕಾಲಿನಿಂದ 5೦ ಮೀಟರು ನಡೆಯಲು ಪ್ರಾರಂಭಿಸಿದಳು. ನಿಧಾನವಾಗಿ ಆರಾಮವಾಗಿ ನಡೆಯಲು ಸಹ ಪ್ರಾರಂಭಿಸಿದ್ದಾಳೆ ಎಂದು ಡೇವಿಡ್ ಕುಟುಂಬ ಹೇಳಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…