#ViralVideo | ರಸ್ತೆ ಬದಿಯ ಹಸುಗಳು-ಎತ್ತುಗಳ ಬಗ್ಗೆ ಇರಲಿ ಎಚ್ಚರ | ಚೆನ್ನೈಯಲ್ಲಿ ಶಾಲಾ ಬಾಲಕಿಯ ಮೇಲೆ ಭಯಾನಕ ರೀತಿಯಲ್ಲಿ ದಾಳಿ ನಡೆಸಿದ ಗೂಳಿ..! |

August 10, 2023
9:53 PM
ಚೆನ್ನೈನಲ್ಲಿ ಶಾಲಾ ಬಾಲಕಿಯ ಮೇಲೆ ರಸ್ತೆ ಬದಿಯಲ್ಲಿ  ಅಡ್ಡಾಡುತ್ತಿದ್ದ ಗೂಳಿಯೊಂದು ಭಯಾನಕ ರೀತಿಯಲ್ಲಿ ದಾಳಿ ನಡೆಸಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ರಸ್ತೆ ಬದಿಯಲ್ಲಿ ಅಡ್ಡಾಡುವ ಹಸು, ಎತ್ತುಗಳ ಬಗ್ಗೆ ಸಾರ್ವಜನಿಕರು ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ. ಬುಧವಾರ ಚೆನ್ನೈನಲ್ಲಿ ಶಾಲಾ ಬಾಲಕಿಯ ಮೇಲೆ ರಸ್ತೆ ಬದಿಯಲ್ಲಿ  ಅಡ್ಡಾಡುತ್ತಿದ್ದ ಗೂಳಿಯೊಂದು ಭಯಾನಕ ರೀತಿಯಲ್ಲಿ ದಾಳಿ ನಡೆಸಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ಇದೀಗ ಆಡಳಿತವು ಎಚ್ಚೆತ್ತುಕೊಂಡಿದೆ.ಈ ಘಟನೆಯು ಎಲ್ಲಾ ಕಡೆಗೂ ಎಚ್ಚರಿಕೆ ಆಗಬೇಕಿದೆ.

Advertisement
Advertisement

ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯ ಮೇಲೆ ಗೂಳಿಯೊಂದು ದಾಳಿ ನಡೆಸಿ  ಗಾಯಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ಚೆನ್ನೈನ ಎಂಎಂಡಿಎ ಕಾಲೋನಿ ಬಳಿಯ ಎಲಂಗೋ ನಗರದಲ್ಲಿ ಬುಧವಾರ ಮಧ್ಯಾಹ್ನ 3.20 ರ ಸುಮಾರಿಗೆ ಈ ಘಟನೆ ನಡೆದಿದೆ. ಗಾಂಧಿನಗರದ ನಿವಾಸಿ ಆಯೇಷಾ ತನ್ನ ತಾಯಿ ಮತ್ತು ತನ್ನ ಕಿರಿಯ ಸಹೋದರನೊಂದಿಗೆ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಗೂಳಿಯು ದಾಳಿ ಮಾಡಿದೆ.

ಸಮೀಪದ ಮನೆಯೊಂದರಿಂದ ದೊರೆತ ಸಿಸಿಟಿವಿ ವಿಡಿಯೋದಲ್ಲಿ ಎರಡು ಹಸುಗಳು ಬಾಲಕಿ ಮುಂದೆ ನಡೆಯುತ್ತಿರುವುದು ಕಂಡು ಬಂದಿದೆ. ಇದ್ದಕ್ಕಿದ್ದಂತೆ, ಒಂದು ಹಸುವು ಹುಡುಗಿಯ ಕಡೆಗೆ ತಿರುಗಿ ಅವಳ ಮೇಲೆ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಕೊಂಬುಗಳಿಂದ ತಿವಿದು ಬಾಲಕಿಯನ್ನು ಎತ್ತಿ ಎಸೆದಿದೆ. ಈ ಸಂದರ್ಭ ಸ್ಥಳೀಯರು ಗೂಳಿಯನ್ನು  ಹೆದರಿಸಲು ಪ್ರಯತ್ನಿಸುತ್ತಿರುವುದು ಹಾಗೂ ಬಾಲಕಿಯ ತಾಯಿ ಸಹಾಯಕ್ಕಾಗಿ ಕುರುಚಾಡುತ್ತಿರುವುದು  ವಿಡಿಯೋದಲ್ಲಿ ಕಂಡುಬಂದಿದೆ. ಸತತ ಪ್ರಯತ್ನಗಳ ನಂತರ, ಗೂಳಿಯನ್ನು ಸ್ಥಳದಿಂದ ಸ್ಥಳೀಯರು ಓಡಿಸಿದ್ದಾರೆ. ಬಾಲಕಿ ಗಾಯಗೊಂಡಿದ್ದಳು.

ಈ ವಿಡಿಯೋ ವೈರಲ್‌ ಆಗಿರುವುದು  ಗಮನಿಸಿದ ಚೆನ್ನೈ ಕಾರ್ಪೊರೇಷನ್ ಕಮಿಷನರ್ ಜೆ ರಾಧಾಕೃಷ್ಣನ್, ಬಿಡಾಡಿ ದನಗಳ ಹಾವಳಿಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

Advertisement

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುಲಭವಾಗಿ ಉದ್ಧಾರವಾಗಬೇಕಾದರೆ ಇವುಗಳನ್ನು ಬಿಡಬೇಕು ಎಂದಿದೆ ಭಗವದ್ಗೀತೆ…!
June 24, 2025
7:08 AM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆಗೆ ನೋಂದಾಯಿಸಲು ರೈತರಿಗೆ ಕೃಷಿ ಇಲಾಖೆ ಸೂಚನೆ | ಭತ್ತ ಬೆಳೆಯುವವರಿಗೆ ವಿಶೇಷ ಗಮನ |
June 23, 2025
11:22 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 23-06-2025 | ಜೂ.29 ರಿಂದ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಅವಕಾಶ ಸಿಗಬಹುದೇ..? | ಜೂನ್ ಕೊನೆಯಲ್ಲಿ ಮುಂಗಾರು ದುರ್ಬಲಗೊಳ್ಳಬಹುದಾ..?
June 23, 2025
1:26 PM
by: ಸಾಯಿಶೇಖರ್ ಕರಿಕಳ
ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group