MIRROR FOCUS

ಸಿಪಿಸಿಆರ್‌ಐ ವತಿಯಿಂದ ಕ್ಷೇತ್ರೋತ್ಸವ | ಅಡಿಕೆ ಕೃಷಿಯಲ್ಲಿ ಸಸ್ಯ ಆರೋಗ್ಯ ನಿರ್ವಹಣೆ ಬಗ್ಗೆ ಮಾಹಿತಿ | ಕೃಷಿ ವಿಸ್ತಾರಕ್ಕಿಂತ ಕೃಷಿ ಸುದೃಢತೆ ಮುಖ್ಯ – ಟಿ ಆರ್‌ ಸುರೇಶ್ಚಂದ್ರ ತೊಟ್ಟೆತ್ತೋಡಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದೇಶದಲ್ಲಿ ಕೃಷಿ ಬೆಳವಣಿಗೆಯಾಗುತ್ತಿದೆ. ಯುವಕರೂ ಕೃಷಿಗೆ ಬರುತ್ತಿದ್ದಾರೆ. ಈಗ ಕೃಷಿ ವಿಸ್ತಾರದ ಬದಲಿಗೆ ಕೃಷಿ ಸುದೃಢತೆಯ ಅವಶ್ಯಕತೆ ಇದೆ. ಇದಕ್ಕಾಗಿ ತಾಂತ್ರಿಕ ಮಾಹಿತಿಗಳು ಕೃಷಿಕನಿಗೆ ಲಭ್ಯವಾಗಬೇಕು ಎಂದು ಕಲ್ಮಡ್ಕದ ಕೃಷಿಕ ಸುರೇಶ್ಚಂದ್ರ ತೊಟ್ಟೆತ್ತೋಡಿ ಹೇಳಿದರು.

Advertisement

ಅವರು ಶುಕ್ರವಾರ ಕೌಡಿಚ್ಚಾರಿನ ಗುಂಡ್ಯಡ್ಕ ವಾಸು ಪೂಜಾರಿಯವರ ಮನೆಯಲ್ಲಿ ವಿಟ್ಲ ಸಿಪಿಸಿಆರ್‌ಐ ಹಾಗೂ ಅಡಿಕೆ ಕೃಷಿಕರ ಸಂಯುಕ್ತ ಆಶ್ರಯದಲ್ಲಿ ನಡೆದ “ಅಡಿಕೆಯಲ್ಲಿ ಸಸ್ಯ ಆರೋಗ್ಯ ನಿರ್ವಹಣೆ” ಕುರಿತು ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾನು ಕೃಷಿಕ ಎಂದು ಹೆಮ್ಮೆಯಿಂದ ಹೇಳುವ ದಿನಗಳು ಬರಬೇಕು. ಕೃಷಿ ಸಮಸ್ಯೆಗಳಿಗೆ, ಕೃಷಿ ರೋಗಗಳಿಗೆ ಪರಿಹಾರಗಳು ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಲಭ್ಯವಾಗಬೇಕು. ಈಗ ಅಂತಹ ಕಾರ್ಯಗಳನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ.

ಮುಖ್ಯ ಅತಿಥಿಗಳಾಗಿದ್ದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ಮಾತನಾಡಿ, ಭಾರತದಲ್ಲಿ ಕೃಷಿ ಕ್ಷೇತ್ರ ಬೆಳವಣಿಗೆಯ ಹಾದಿಯಲ್ಲಿದೆ.ಯುವಕರು ಕೃಷಿಗೆ ಆಗಮಿಸುವ ಸಂದರ್ಭ ವೈಜ್ಞಾನಿಕವಾದ, ತಾಂತ್ರಿಕವಾದ ಮಾಹಿತಿಗಳು ಕ್ಷಣದಲ್ಲಿ ದೊರೆಯುವ ಕೆಲಸ ಆಗಬೇಕಿದೆ. ಇದೀಗ ವಿಜ್ಞಾನಿಗಳ ತಂಡವು ಸಕ್ರಿಯವಾಗಿದೆ. ರೈತರ ಬಳಿಗೆ ಆಗಮಿಸಿ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ವಿಟ್ಲ ಸಿಪಿಸಿಆರ್‌ಐ ಮುಖ್ಯಸ್ಥ ಡಾ.ಸಿ.ಟಿ.ಜೋಸ್‌ ಮಾತನಾಡಿ, ಅಡಿಕೆಗೆ ಧಾರಣೆ ಇರುವ ಈ ಸಮಯದಲ್ಲಿ ಕೃಷಿಕರಿಗೆ ಕೌಶಲ್ಯಯುಕ್ತ ಕಾರ್ಮಿಕರ ಅಗತ್ಯವೂ ಇದೆ. ಇದಕ್ಕಾಗಿ ಕೃಷಿಕರಿಗೆ ಹಾಗೂ ಕಾರ್ಮಿಕರಿಗೆ ತರಬೇತಿ ಅಗತ್ಯವಿದೆ. ಈಗಾಗಲೇ ಅಡಿಕೆಗೆ ಹೊಸ ಹೊಸ ರೋಗಗಳು ಕಂಡುಬರುತ್ತಿದೆ.ಇದನ್ನು ಪತ್ತೆ ಮಾಡಿ ಸೂಕ್ತ ಪರಿಹಾರ ಮಾರ್ಗಗಳನ್ನು ಸಂಸ್ಥೆಯ ಯುವ ವಿಜ್ಞಾನಿಗಳ ತಂಡ ಮಾಡುತ್ತಿದೆ ಎಂದರು.

ವೇದಿಕೆಯಲ್ಲಿ ಕೃಷಿಕರಾದ ಗುಂಡ್ಯಡ್ಕ ವಾಸು ಪೂಜಾರಿ, ಜಗನ್ನಾಥ ಶೆಟ್ಟಿ ಹಾಗೂ ಅರಿಯಡ್ಕ ಗ್ರಾ ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ, ಹಿರಿಯ ವಿಜ್ಞಾನಿ ಡಾ.ಎಲ್ವಿನ್‌ ಅಪ್ಸರಾ  ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಅಡಿಕೆಯ ಸುಧಾರಿತ ತಳಿಗಳ ಬಗ್ಗೆ ಹಾಗೂ ಅಡಿಕೆ ತೋಟ ನಿರ್ವಹಣೆ ಬಗ್ಗೆ ಡಾ.ಭವಿಷ್ಯ , ಅಡಿಕೆ-ಕಾಳುಮೆಣಸು-ಜಾಯಿಕಾಯಿ ಮಿಶ್ರ ಕೃಷಿ ಬಗ್ಗೆ ಕೃಷಿಕ ಸುರೇಶ್ಚಂದ್ರ ತೊಟ್ಟೆತೋಡಿ ಮಾಹಿತಿ ನೀಡಿದರು.
ಅಡಿಕೆ ಬೇರು ಹುಳು ಹಾಗೂ ಮೈಟ್‌ ಮತ್ತು ಇತರ ರೋಗಗಳ ಬಗ್ಗೆ ಡಾ.ರಾಜ್‌ ಕುಮಾರ್‌, ಹಿಂಗಾರ ಒಣಗುವ ರೋಗ, ಎಲೆಚುಕ್ಕಿರೋಗದ ಬಗ್ಗೆ ಡಾ.ಥವಾಪ್ರಕಾಶ್‌ ಪಾಂಡ್ಯನ್‌, ಡಾ.ಶಿವಾಜಿ ತುಬೆ ಮಾಹಿತಿ ನೀಡಿದರು. ಹಿಂಗಾರ ಒಣಗುವ ರೋಗದ ಸಮಗ್ರ ನಿರ್ವಹಣೆಯ ಬಗ್ಗೆ ಅನುಭವಿ ಕೃಷಿಕ ವಿಷ್ಣು ಭಟ್‌ ಮಾಹಿತಿ ನೀಡಿದರು. ಬಳಿಕ ಬೋರ್ಡೋ ತಯಾರಿ ಬಗ್ಗೆ ಪುರಂದರ ಚಂದಳಿಕೆ, ಕಾರ್ಬನ್‌ ಫೈಬರ್‌ ದೋಟಿ ಬಳಸಿ ಸಿಂಪಡಣೆ ಹಾಗೂ ಕೊಯ್ಲು ಬಗ್ಗೆ ಸುಬ್ರಹ್ಮಣ್ಯ ಭಟ್‌ ಕೈಲಾರು ಮತ್ತು ಗೋಣಿಗೊನೆಯ ಬಗ್ಗೆ ಕೃಷಿಕ ಸುಭಾಶ್‌ ಮುಂಡ್ಯ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.

ವಿಟ್ಲ ಸಿಪಿಸಿಆರ್‌ಐ ವಿಜ್ಞಾನಿ ಡಾ.ಭವಿಷ್ಯ ಸ್ವಾಗತಿಸಿ ತಾಂತ್ರಿಕ ಕೃಷಿ ಸಲಹೆಗಾರ ಪುರಂದರ ಚಂದಳಿಕೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…

38 minutes ago

ಗುಡುಗು ಸಿಡಿಲಿನ ಮುನ್ಸೂಚನೆ ಬಗ್ಗೆ ಆಪ್‌ನಲ್ಲಿ ಮಾಹಿತಿ

ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…

49 minutes ago

ಸತತ ಸೋಲಿನ ಬಳಿಕ ಪುಟಿದೇಳುವರು ಈ ರಾಶಿಯವರು…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 hour ago

ಹೊಸರುಚಿ | ಗುಜ್ಜೆ ಸುಕ್ಕಾ

ಗುಜ್ಜೆ ಸುಕ್ಕಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ ಚಿಕ್ಕ ದಾಗಿ ಕಟ್…

3 hours ago

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |

ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…

1 day ago

ಹೊಸರುಚಿ | ಗುಜ್ಜೆ ಚಟ್ನಿ

ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ 3/4 ಕಪ್ ,ನೀರು…

1 day ago