MIRROR FOCUS

ಸಿಪಿಸಿಆರ್‌ಐಯಿಂದ 6 ತಂತ್ರಜ್ಞಾನಗಳ ವರ್ಗಾವಣೆ | ಅಡಿಕೆ ಹಾಗೂ ತೆಂಗು ಕೃಷಿಯ ನೂತನ ತಂತ್ರಜ್ಞಾನ | ಕೃಷಿಕರ ಬಳಿಗೆ ನೂತನ ತಂತ್ರಜ್ಞಾನ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ತೆಂಗು ಹಾಗೂ ಅಡಿಕೆಗೆ ಸಂಬಂಧಿಸಿದ ನೂತನ ತಂತ್ರಜ್ಞಾನಗಳ ವರ್ಗಾವಣೆಗಾಗಿ 6 ಒಪ್ಪಂದಗಳಿಗೆ ಕಾಸರಗೋಡಿನ ಸಿಪಿಸಿಆರ್‌ಐ ಹಾಗೂ  ಕರ್ನಾಟಕದ ರೈತ ಉತ್ಪಾದಕ ಕಂಪನಿ ಮತ್ತು ನರ್ಸರಿ ಜೊತೆ ಒಪ್ಪಂದಕ್ಕೆ (MoA) ಸಹಿ ಹಾಕಲಿದೆ.

Advertisement
Advertisement

ಕಾಸರಗೋಡಿನಲ್ಲಿರುವ ಕೇಂದ್ರ ಸರ್ಕಾರದ ಸಂಸ್ಥೆ ಸಿಪಿಸಿಆರ್‌ಐ ಕಳೆದ ಹವಲು ಸಮಯಗಳಿಂದ ಅಡಿಕೆ, ತೆಂಗು ಕೃಷಿ ಅಭಿವೃಧ್ಧಿ ಕಡೆಗೆ ಕೆಲಸ ಮಾಡುತ್ತಿದೆ. ಇದೀಗ ಕಾಸರಗೋಡು ಸಿಪಿಸಿಆರ್‌ಐ ಸಂಸ್ಥೆಯ ನಿರ್ದೇಶಕ ಡಾ.ಕೆ ಬಿ ಹೆಬ್ಬಾರ್‌ ನೇತೃತ್ವದಲ್ಲಿ ಕೃಷಿ ಪರವಾದ ಹಲವು ಕೆಲಸ ಕಾರ್ಯಗಳು ನಡೆಯುತ್ತಿದೆ. ವಿಶೇಷವಾಗಿ ತೆಂಗು ಕೃಷಿಯ ಬೆಳವಣಿಗೆ ಹಾಗೂ ತೆಂಗು ಮೌಲ್ಯವರ್ಧನೆಯ ಕಡೆಗೆ ಆಸಕ್ತಿ ವಹಿಸಿದ್ದಾರೆ. ಇದರ ಜೊತೆಗೆ ನೂತನ ತಂತ್ರಜ್ಞಾನಗಳ ವರ್ಗಾವಣೆಯ ಕೆಲಸವೂ ನಡೆಯುತ್ತಿದೆ. ಈ ಮೂಲಕ ರೈತರಿಗೆ ಅತೀ ಹತ್ತಿರದಲ್ಲಿ ತಂತ್ರಜ್ಞಾನಗಳು ಲಭ್ಯವಾಗುವಂತೆ ಮಾಡಲಾಗುತ್ತಿದೆ.

ತಾಜಾ ಕಲ್ಪರಸ ಸಂಗ್ರಹಣೆ, ತೆಂಗಿನ ಸಕ್ಕರೆ ಉತ್ಪಾದನೆಗೆ  ಸಂಬಂಧಿಸಿದ ತಂತ್ರಜ್ಞಾನದ ವರ್ಗಾವಣೆಗಾಗಿ ದಾವಣಗೆರೆಯ  ತೆಂಗು ರೈತರ ಉತ್ಪಾದಕ ಕಂಪನಿ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಇದರ ಜೊತೆಗೆ  ಶತಮಂಗಲ ಅಡಿಕೆ ತಳಿಯ ಸಸಿಗಳನ್ನು ಬೆಳೆಸುವ ತಂತ್ರಜ್ಞಾನವನ್ನು ದಕ್ಷಿಣ ಕನ್ನಡದ ಪುತ್ತೂರಿನ ಕೆಮ್ಮಿಂಜೆಯ ಯಶಸ್ವಿ ನರ್ಸರಿ  ಮತ್ತು ಕಾಸರಗೋಡು ಬದಿಯಡ್ಕದ  ಇಂಟಿಗ್ರೇಟೆಡ್ ರೂರಲ್ ಅಗ್ರಿ ನರ್ಸರಿ ಜೊತೆ ಒಪ್ಪಂದಗಳಿಗೆ ಸಹಿ ಹಾಕಲಾಗುವುದು.ಕಾರ್ಬೊನೇಟೆಡ್  ತೆಂಗಿನ ನೀರನ್ನು ಸಂರಕ್ಷಿಸಲು ಸಂಬಂಧಿಸಿದ ತಂತ್ರಜ್ಞಾನವನ್ನು ಕಾಸರಗೋಡಿನ ರೆಡ್‌ಹೈವ್ ಜೊತೆ ಒಪ್ಪಂದಕ್ಕೆ ಸಹಿ ಹಾಕುತ್ತಿದೆ. ತೆಂಗಿನ ಚಿಪ್ಸ್ ಉತ್ಪಾದಿಸುವ ತಂತ್ರಜ್ಞಾನವನ್ನು ವರ್ಗಾಯಿಸಲು ಆಂಧ್ರಪ್ರದೇಶದ ಕೊನಸೆಮಾದ ನಾರಿಯಲ್ ಭಾರತ್ ನ್ಯೂಟ್ರಾ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‌ನೊಂದಿಗೆ  ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ‘ಕಲ್ಪ ಎಂಟೊಮೊಪಾಥೋಜೆನಿಕ್ ನೆಮಟೋಡ್ಸ್ ಆಕ್ವಾ ಫಾರ್ಮುಲೇಶನ್’ ತಂತ್ರಜ್ಞಾನವನ್ನು ವರ್ಗಾಯಿಸುವ ಸಂಬಂಧ ಕಣ್ಣೂರಿನ  ಕೃಷಿ ವಿಜ್ಞಾನ ಕೇಂದ್ರ  ಜೊತೆಗೆ ಸಹಿ ಹಾಕಲಾಗುತ್ತದೆ. ಇದೇ ವೇಳೆ ಸಿಪಿಸಿಆರ್‌ಐ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದ ವಿವಿಧ ರಾಜ್ಯಗಳ ಎಂಟು ಉದ್ಯಮಗಳನ್ನು ಇದೇ ವೇಳೆ ಸನ್ಮಾನಿಸಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್‌ನಿಂದ ಸುಮಾರು 300 ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 24-06-2025 | ಬದಲಾಯ್ತು ಹವಾಮಾನ ಲಕ್ಷಣಗಳು | ಜೂ.28 ವರೆಗೂ ಉತ್ತಮ ಮಳೆ ನಿರೀಕ್ಷೆ |

ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆಯ ಕಾರಣದಿಂದ ಮುಂಗಾರು ಸ್ವಲ್ಪ ಚುರುಕಾಗಿದ್ದು,…

2 hours ago

ದಾಖಲೆ ಧಾರಣೆಯತ್ತ ಕೊಬ್ಬರಿ | ತಿಪಟೂರಿನಲ್ಲಿ ಕ್ವಿಂಟಾಲ್‌ ಗೆ ಗರಿಷ್ಠ ದರ 26,167 ರೂಪಾಯಿಗೆ ಮಾರಾಟ

ಕೊಬ್ಬರಿ ಬೆಲೆ ಏರಿಕೆಯಾಗುತ್ತಿದ್ದು ಕ್ವಿಂಟಾಲ್‌ಗೆ 26 ಸಾವಿರ ರೂ. ಗೆ ಮಾರಾಟವಾಗುವ ಮೂಲಕ…

3 hours ago

ಒಬ್ಬರಿಂದೊಬ್ಬರು ಕಾಲೆಳೆದುಕೊಂಡರೆ ಹೇಗೆ..?

ಒಬ್ಬರಿಂದೊಬ್ಬರು ಕಾಲೆದುಕೊಂಡರೆ ಹೇಗಾದೀತು..? ಇದರ ಬದಲಾಗಿ ನೆರವಾಗುವ ಸಂದೇಶ ಹರಿಡಿದರೆ ಹೇಗೆ.. ಈ…

3 hours ago

ಕರಾವಳಿ ಜಿಲ್ಲೆಯ ಅಲ್ಲಲ್ಲಿ ಇಂದು ಜೋರಾದ ಗಾಳಿ ಮಳೆ

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇಂದು ಜೋರಾದ ಗಾಳಿಯೊಂದಿಗೆ  ವ್ಯಾಪಕವಾಗಿ ಮಳೆಯಾಗಲಿದೆ…

3 hours ago

ಪಶು ಆಹಾರ : ಈ ವಿಷಯ ನಿಮಗೆ ತಿಳಿದಿರಲಿ !

ಪಶುಪಾಲಕರು ಗಮನಿಸಬೇಕಾದ ಹಲವು ಅಂಶಗಳಗಳ ಬಗ್ಗೆ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಪಶುವೈದ್ಯಕೀಯ ಔಷಧಶಾಸ್ತ್ರಮತ್ತು…

4 hours ago

ಸುಲಭವಾಗಿ ಉದ್ಧಾರವಾಗಬೇಕಾದರೆ ಇವುಗಳನ್ನು ಬಿಡಬೇಕು ಎಂದಿದೆ ಭಗವದ್ಗೀತೆ…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

7 hours ago