Advertisement
MIRROR FOCUS

ಬೆಳೆ ವಿಮೆ – ಪರದಾಟಕ್ಕೆ ಸಿಗದ ಮುಕ್ತಿ | ಸರಳ ಪ್ರಕ್ರಿಯೆಗೆ ಸರಕಾರ ಏಕೆ ಸಜ್ಜಾಗುತ್ತಿಲ್ಲ ? |

Share

ಒಂದೇ ಸಾಲಿನ ವಿವರ ಹೀಗಿದೆ, 

Advertisement
Advertisement
Advertisement
Advertisement
ಬೆಳೆ ವಿಮೆಯಲ್ಲಿ ರಾಜ್ಯ ಸರಕಾರ 3ನೇ ಆಪ್ಷನ್‌ ತಕ್ಷಣವೇ ಮಾಡಿಕೊಟ್ಟರೆ ಅನೇಕ ರೈತರಿಗೆ ಅನುಕೂಲವಾದೀತು. ಜೂ.30 ರ ಒಳಗಾಗಿ ಬೆಳೆ ವಿಮೆ ನೋಂದಣಿಯಾಗಬೇಕಿದೆ. ಹೀಗಾಗಿ ತಕ್ಷಣವೇ ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕಿದೆ.

 

Advertisement

ಬೆಳೆ ವಿಮೆ ಕಡ್ಡಾಯವಾಗುತ್ತಿದೆ. ಹಳ್ಳಿಯ ಕೃಷಿಕರೂ ಈಗ ಬೆಳೆ ವಿಮೆ ಮಾಡಿಸುತ್ತಿದ್ದಾರೆ. ಅದು ಅಗತ್ಯವಾಗಿತ್ತಿದೆ. ಇದೀಗ  ಜೂನ್‌ ಅಂತ್ಯದ ಒಳಗೆ ಎಲ್ಲಾ ಬೆಳೆ ವಿಮೆ ಮಾಡಿಸಬೇಕು. ಹೀಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ತುರ್ತು ಕೆಲಸದಲ್ಲಿವೆ. ಅದರ ಜೊತೆ ಜೊತೆಗೇ ನೆಟ್ವರ್ಕ್‌ ಸಮಸ್ಯೆ, ಸರ್ವರ್‌ ಸಮಸ್ಯೆ. ಹೀಗಿದ್ದರೂ ಇಂದಿನ ಆನ್‌ ಲೈನ್‌ ವ್ಯವಸ್ಥೆಯಲ್ಲಿ ಸರಳ ವ್ಯವಸ್ಥೆಗೆ ಏಕೆ ಸರಕಾರ ಮುಂದಾಗುತ್ತಿಲ್ಲ.?

Advertisement

ಬೆಳೆ ವಿಮೆಯ ದಾಖಲಾತಿ ಮಾಡುವ ವಿಧಾನದಲ್ಲಿ  ರಾಜ್ಯದ ವೆಬ್‌ ಪೋರ್ಟಲ್‌ ನ್ಯಾಶನಲ್‌ ಪೋರ್ಟಲ್‌ ಗೆ ಸೇರಿಲ್ಲ  , ಹೀಗಾಗಿ ಸದ್ಯ ಕರ್ನಾಟಕದ ರೈತರು ಪ್ರಾಥಮಿಕ ಸಹಕಾರಿ ಸಂಘಗಗಳು ಅಥವಾ ಸಿ ಎಸ್‌ ಸೆಂಟರ್‌ ಗಳಲ್ಲಿ  ಮಾತ್ರವೇ ಬೆಳೆ ವಿಮೆ ಮಾಡಿಸಬಹುದಾಗಿದೆ. ಇದೇ ವೆಬ್ಸೈಟ್‌ ನಲ್ಲಿ  ಸ್ವತ: ರೈತರೇ ಮನೆಯಿಂದ ಅಥವಾ ಸೈಬರ್‌ ಸೆಂಟರ್ ಗಳಿಂದ ಬೆಳೆ ವಿಮೆ ಮಾಡಿಸುವ ಅವಕಾಶ ಇದೆ. ಆದರೆ ಈ ಅವಕಾಶವನ್ನು  ಈಗ ಮಾಡಲಾಗಿಲ್ಲ. ಇದರಿಂದಾಗಿ ನೇರವಾಗಿ ರೈತರಿಗೆ ಬೆಳೆವಿಮೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ಸಹಕಾರಿ ಸಂಘಗಳು ಪರದಾಟ ನಡೆಸುತ್ತಿವೆ, ಈ ಪರದಾಟ ತಪ್ಪಿಸಲು ಸರಕಾರ ಮನಸು ಮಾಡಬಹುದಾಗಿದೆ. ಸದ್ಯ ಕರ್ನಾಟಕ ಹಾಗೂ ಗುಜರಾತ್‌ ಮಾತ್ರವೇ ಈ ಅವಕಾಶದಿಂದ ವಂಚಿತವಾಗಿದೆ, ಉಳಿದ ಎಲ್ಲಾ ರಾಜ್ಯಗಳಲ್ಲಿ ನೇರವಾಗಿ ರೈತರೇ ಬೆಳೆವಿಮೆ ಪಾವತಿ ಮಾಡುವ ಅವಕಾಶ ಕೊಡಲಾಗಿದೆ.

ಈಗ ಸಹಕಾರಿ ಸಂಘಗಳಿಂದ ಡಿಸಿಸಿ ಬ್ಯಾಂಕ್‌ ಮೂಲಕ ರಾಜ್ಯಕ್ಕೆ  ಲಭ್ಯವಾಗಿ ನಂತರ ಕೇಂದ್ರದ ಪೋರ್ಟಲ್‌ ಗೆ ಬೆಳೆವಿಮೆ ದಾಖಲಾಗುತ್ತದೆ. ಒಂದು ವೇಳೆ ರೈತರಿಗೇ ಅವಕಾಶ ನೀಡಿದರೆ ನೇರವಾಗಿ ಕೇಂದ್ರದ ಪೋರ್ಟಲ್‌ ಗೆ ಬೆಳೆವಿಮೆ ಪಾವತಿ ಮಾಡಲು ಸಾಧ್ಯವಾಗುತ್ತದೆ. ಆಗ ಬಹುಪಾಲು ಗೊಂದಲ ನಿವಾರಣೆಯಾಗಲು ಸಾಧ್ಯವಿದೆ, ಜೂನ್.‌30  ರ ಗೊಂದಲವೂ ದೂರವಾಗಲಿದೆ. ಈ ಬಗ್ಗೆ ತಕ್ಷಣವೇ ಗಮನಹರಿಸಬೇಕಿದೆ.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

“ನದಿ ಮತ್ತು ಪರಿಸರ” ಶುದ್ಧತೆ ಉಳಿಸಿಕೊಳ್ಳಬೇಕಾದರೆ ಭಾವನಾತ್ಮಕವಾಗಿ ಅಷ್ಟೇ ಕನೆಕ್ಟ್‌ ಆಗಬೇಕಾದ್ದಲ್ಲ…

ಮಹಾಕುಂಭ ಮೇಳದ ಮೂಲಕ ಹೊಸದೊಂದು ಸಂಕಲ್ಪವನ್ನು ಜನರು ಮಾಡಬೇಕು. ಈ ಬಾರಿ ಕುಂಭಮೇಳದಲ್ಲಿ…

13 hours ago

ದೇಶದ ಆರ್ಥಿಕತೆಗೆ ಕೃಷಿ ಕ್ಷೇತ್ರದ ಕೊಡುಗೆ ಅಪಾರ | ಸರ್ವೇ ಪ್ರಕಾರ ಜಿಡಿಪಿ ದರಕ್ಕೆ ಕೃಷಿ ಕ್ಷೇತ್ರದ ಕೊಡುಗೆ ಶೇ.16 |

ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಸೃಷ್ಠಿಸಲು ಹಾಗೂ ಗ್ರಾಮೀಣ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು…

15 hours ago

ಕಾಡಾನೆ ಹಾವಳಿ ನಿಯಂತ್ರಿಸಲು ಸರ್ಕಾರ 22 ಕೋಟಿ ರೂಪಾಯಿ ಬಿಡುಗಡೆ | ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಚಾಲನೆ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ…

15 hours ago

ಮಹಾಕುಂಭಮೇಳ ಸಂಪನ್ನ | ಮಹಾಶಿವರಾತ್ರಿಯಂದು ಕೊನೆಯ ಪುಣ್ಯಸ್ನಾನ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭಮೇಳ ಶಿವರಾತ್ರಿಯಂದು(ಇಂದು) ಸಂಪನ್ನಗೊಳ್ಳಲಿದೆ.ಈ ಹಿನ್ನೆಲೆಯಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ…

15 hours ago

ಮಹಿಳಾ ಸ್ವಾವಲಂಬನೆಗೆ ಆದ್ಯತೆ | ಶಿವಮೊಗ್ಗದಲ್ಲಿ ‘ಅವ್ವ ಸಂತೆ’ ಆಯೋಜನೆ

ಶಿವಮೊಗ್ಗ ಜಿಲ್ಲೆಯ ಸಾಗರದ  ಜೀವನ್ಮುಖಿ ಸಂಘಟನೆ ಹಾಗೂ ಭೀಮನಕೋಟೆಯ ಚರಕ ಮಹಿಳಾ  ವಿವಿಧೋದ್ದೇಶ…

15 hours ago

ಕೇರಳದ ಕೆಲವು ಕಡೆ ತಾಪಮಾನ ಏರಿಕೆಯ ಎಚ್ಚರಿಕೆ | 3 ಡಿಗ್ರಿ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ |

ಕೇರಳದ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ಮುಂದಿನ…

23 hours ago