ಕಾಡು ಪ್ರಾಣಿಗಳ ಕಾಟಕ್ಕೆ ಬೇಸತ್ತ ರೈತರು | ಬೆಳೆಹಾನಿ ಪರಿಹಾರ ಮೊತ್ತ ಹೆಚ್ಚಳ | ಸರ್ಕಾರದಿಂದ ರೈತರಿಗೆ ಸಹಾಯಹಸ್ತ |

Advertisement

ರೈತ ಬೆಳೆದ ಬೆಳೆಯ ಫಸಲು ಕೈಗೆ ಬರುವವರೆಗೆ ಅದೆಷ್ಟೋ ನಷ್ಟಗಳನ್ನು ಅನುಭವಿಸುತ್ತಾನೆ. ಮಳೆ ಜಾಸ್ತಿಯಾದರೆ ಕೊಚ್ಚಿ ಕೊಂಡು ಹೋಗುತ್ತೆ, ಮಳೆ ಬಂದಿಲ್ಲಾಂದ್ರೆ ಬೆಳೆ ಒಣಗಿ ಹೋಗುತ್ತೆ. ಇದಲ್ಲದೆ ಕಾಡಂಚಿನ ಕೃಷಿ ಭೂಮಿಗೆ ಪ್ರಾಣಿಗಳ ಕಾಟ.. ಅದರಲ್ಲೂ ಆನೆ, ಕಾಡುಕೋಣ, ಹಂದಿ, ನವಿಲು, ಜಿಂಕೆ ಹೀಗೆ ಒಂದಾ ಎರಡಾ..? ತಮಗೆ ಬೇಕಾದ್ದನ್ನು ತಿಂದು ಬೆಳೆ ಹಾನಿ ಮಾಡಿ ಹೋಗುತ್ತವೆ. ಇದರ ಮುಂದೆ ರೈತ, ಏನು ಮಾಡಲಾಗದೆ ಕೈಕಟ್ಟಿ ಕೂರುವ ಪರಿಸ್ಥಿತಿ.

Advertisement

ಕೆಲವೊಂದು ಸಮಸ್ಯೆಗಳಿಗೆ ಸರ್ಕಾರ ಬೆಳೆವಿಮೆ ನೀಡುತಿತ್ತು. ಆದರೆ ಅದು ಅರೆ ಕಾಸಿನ ಮಜ್ಜಿಗೆ. ಇದೀಗ ರೈತರಿಗೆ ನಷ್ಟ ಆಗದ ರೀತಿಯಲ್ಲಿ ಬೆಳೆಗಳಿಗೆ ಬೆಳೆವಿಮೆ ನೀಡಲು ನಿರ್ಧರರಿಸಿದೆ. ಕಾಡು ಪ್ರಾಣಿಗಳ ಕಾಟದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೂ ಪರಿಹಾರ ನೀಡಲು ಸರ್ಕಾರ ಮುಂದೆ ಬಂದಿದೆ.

Advertisement
Advertisement

Advertisement

ಕಾಡು ಪ್ರಾಣಿಗಳು ಬೆಳೆ ನಾಶ ಮಾಡಿದರೆ ಸರ್ಕಾರ ನೀಡುತ್ತೆ ಪರಿಹಾರ :

Advertisement

ಕಾಡು ಪ್ರಾಣಿಗಳಿಂದ ಉಂಟಾದ ಬೆಳೆ ಹಾನಿಗೆ ನೀಡುವ ಪರಿಹಾರದ ಗರಿಷ್ಠ ಮೊತ್ತವನ್ನು 50 ಸಾವಿರ ರೂಗಳಿಂದ 1 ಲಕ್ಷಕ್ಕೆ ಏರಿಸಿ ಸರ್ಕಾರ ಆದೇಶಿಸಿದೆ. ಈ ಮೂಲಕ ರೈತರ ಬಹುಕಾಲದ ಬೇಡಿಕೆಗೆ ಮನ್ನಣೆ ಸಿಕ್ಕಾಂತಾಗಿದೆ. ವನ್ಯ ಜೀವಿಗಳಿಂದ ಉಂಟಾಗೋ ಜಾನುವಾರುಗಳ ಪ್ರಾಣ ಹಾನಿ  ಮತ್ತು ಬೆಳೆ ಹಾನಿಗೆ ಪರಿಹಾರ ಹೆಚ್ಚಿಸುವ  ಮೂಲಕ ಸರ್ಕಾರ ಮತ್ತು ಅರಣ್ಯ ಇಲಾಖೆ ಗ್ರಾಮೀಣ ಜನರಿಗೆ ನೆರವಾಗಿದೆ.

ಅಡಿಕೆ ತೆಂಗು, ಮಾವು, ಭತ್ತ, ರಾಗಿ, ನೆಲಗಡಲೆ, ಟೊಮ್ಯಾಟೋ, ಹಿಪ್ಪು ನೇರಳೆ ಬೆಳೆಗಳ ಪರಿಹಾರ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಅದೇ ರೀತಿ ಅಧಿಕಾರಿಗಳ ಸರ್ವೆ ಮುಖಾಂತರ ಸರ್ಕಾರದ ಗಮನಕ್ಕೆ ತಂದು ರೈತರಿಗೆ ನಷ್ಟದ ಪರಿಹಾರ ನೀಡಲು ಮುಂದಾಗಿದೆ. ವನ್ಯ ಜೀವಿಗಳ ಕಾಟದಿಂದ ಬೇಸತ್ತಿದ್ದ ರೈತರಿಗೆ ಸರ್ಕಾರದ ಈ ಯೋಜನೆ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕಾಡು ಪ್ರಾಣಿಗಳ ಕಾಟಕ್ಕೆ ಬೇಸತ್ತ ರೈತರು | ಬೆಳೆಹಾನಿ ಪರಿಹಾರ ಮೊತ್ತ ಹೆಚ್ಚಳ | ಸರ್ಕಾರದಿಂದ ರೈತರಿಗೆ ಸಹಾಯಹಸ್ತ |"

Leave a comment

Your email address will not be published.


*