ಮಲೆನಾಡಿನಲ್ಲಿ ವನ್ಯಜೀವಿಗಳು ಹಾಗೂ ಮಾನವರ ನಡುವಿನ ಸಂಘರ್ಷ ಮುಂದುವರಿದಿದೆ. ಶಿವಮೊಗ್ಗದ ಹಲವೆಡೆ ಆನೆಗಳ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾರೆಕುಂಬ್ರಿ ಗ್ರಾಮದಲ್ಲಿ ಆನೆಗಳು ಹೊಲಗಳಿಗೆ ದಾಳಿ ನಡೆಸಿದ್ದು, ಬೆಳೆದು ನಿಂತ ಫಸಲು ನಾಶವಾಗಿದೆ. ರಾತ್ರಿ ಹೊತ್ತು ಹಿಂಡು-ಹಿಂಡಾಗಿ ನಾಡಿಗೆ ಆಗಮಿಸುವ ಕಾಡಾನೆಗಳು ಅಡಿಕೆ, ಜೋಳ, ಬಾಳೆ ಹಾಗೂ ಶುಂಠಿಯ ಬೆಳೆ ನಾಶಪಡಿಸಿವೆ. ಇದರಿಂದಾಗಿ ಮಲೆನಾಡು ಭಾಗದ ರೈತರು ಆರ್ಥಿಕ ನಷ್ಟಕ್ಕೆ ಒಳಗಾಗುತ್ತಿದ್ದಾರೆ.
The conflict between wildlife and humans persists in the highlands. In numerous areas of Shimoga, a significant quantity of crops has been destroyed by elephant attacks.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel