#JackfruitFestival | ಮೇಣ ಇಲ್ಲದ ಹಲಸಿಗೆ ಮಾರು ಹೋದ ಹಲಸು ಪ್ರಿಯರು…! | ಮೈಸೂರಿನ ಹಲಸಿನ ಮೇಳಕ್ಕೆ ಜನ ಸಾಗರ |

July 17, 2023
1:08 PM
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಹಲಸಿನ ಮೇಳಕ್ಕೆ ಜನಸಾಗರ ಹರಿದು ಬಂದಿದೆ. ವಿವಿಧ ಬಗೆಯ ಖಾದ್ಯಗಳನ್ನು ಹಲಸು ಪ್ರಿಯರು ಸವಿದರು.

ಕೇವಲ ಬಡವರ ಪಾಲಿನ ಹಸಿವು ನೀಗಿಸುತ್ತಿದ್ದ ಹಲಸಿಗೆ ಈಗ ಅಂತರಾಷ್ಟ್ರೀಯ ಮನ್ನಣೆ. ಹಲಸು ಯಥೇಚ್ಚವಾಗಿ ಬೆಳೆಯುವ ಹಣ್ಣಾಗಿ, ವಾಣಿಜ್ಯ ಬೆಳೆಯಾಗಿ ಪರಿವರ್ತಿತವಾಗುತ್ತಿರುವುದು ಖುಷಿಯ ವಿಚಾರ. ಇದಕ್ಕೆ ಮೂಲ ಕಾರಣ ಅಲ್ಲಲ್ಲಿ ಆಯೋಜನೆಗೊಳ್ಳುತ್ತಿರುವ ಹಲಸಿನ ಮೇಳಗಳು.

Advertisement
Advertisement

ಚಂದ್ರ, ಭೈರಸಂದ್ರ, ಲಾಲ್‌ ಬಾಗ್‌ ಮಧುರ, ರುದ್ರಾಕ್ಷಿ, ಸರ್ವಋತು ಅಷ್ಟೇ ಅಲ್ಲ ಅಂಟು ರಹಿತ ಹಲಸಿನ ಸಾಲುಗಳು. ಇನ್ನೇನು ಅಲ್ಲೇ ಬಿಸಿ ಬಿಸಿಯಾಗಿ ಎಣ್ಣೆಯಲ್ಲಿ ತಯಾರಾಗೋ ಹಲಸಿನ ತಿಂಡಿ ತಿನಿಸುಗಳು. ಇದೆಲ್ಲವನ್ನೂ ಕಂಡು ಖರೀದಿಗೆ ಮುಗಿಬಿದ್ದ ಗ್ರಾಹಕರು. ಈ ಎಲ್ಲ ದೃಶ್ಯ ಕಂಡುಬಂದಿದ್ದು  ಸಾಂಸ್ಕೃತಿಕ ನಗರಿ ಮೈಸೂರುನಲ್ಲಿ ನಡೆದ ಹಲಸಿನ ಮೇಳದಲ್ಲಿ.

ಫುಡ್‌ ಪ್ರಿಯರು ಹಲಸಿನ ತರಹೇವಾರಿ ತಿಂಡಿಗೆ ಫಿದಾ ಆದ್ರು. ವೆರೈಟಿ ಹಲಸಿನ ಹಣ್ಣುಗಳ ಜೊತೆಗೆ ಹಲಸಿನ ಹೋಳಿಗೆ, ಹಲಸಿನ ಚಿಪ್ಸು, ಹಲಸಿನಕಾಯಿ ಕಬಾಬು, ಹಲಸಿನ ಬಿರಿಯಾನಿ ಹೀಗೆ ಅನೇಕ ಹಲಸಿನ ಖಾದ್ಯಗಳನ್ನು ಸವಿಯೋ ಅವಕಾಶ ಆಹಾರ ಪ್ರಿಯರಿಗೆ ಸಿಕ್ಕಿತು. ಮೈಸೂರು ನಗರದ ನೆಕ್ಸಸ್ ಸೆಂಟರ್ ಸಿಟಿ ಮಾಲ್ ಇಂತಹದ್ದೊಂದು ಕಾರ್ಯಕ್ರಮ ಕಂಡು ಸಾಂಸ್ಕೃತಿಕ ನಗರಿಯ ಫುಡ್‌ ಪ್ರಿಯರಂತೂ ಫುಲ್‌ ಫಿದಾ ಆದ್ರು. ತಮ್ಮಿಷ್ಟದ ತಿಂಡಿ ತಿನಿಸುಗಳನ್ನ ಸವಿದು ಬಾಯಿ ಚಪ್ಪರಿಸಿಕೊಂಡರು.

ಚಂದ್ರ ಹಲಸು ಆಕರ್ಷಣೆ: ಇನ್ನು ವಿವಿಧ ತಳಿಯ ಹಲಸಿನ ಹಣ್ಣಿನ ಮಾರಾಟವೂ ನಡೆಯಿತು. ರಾಜ್ಯದ ಅನೇಕ ಜಿಲ್ಲೆಗಳಿಂದ ಮೈಸೂರಿಗೆ ಬಂದಿದ್ದ ರೈತರು, ಮಹಿಳಾ ಗುಂಪುಗಳು ಹಲಸಿನ ಪದಾರ್ಥ, ಸಿರಿಧಾನ್ಯ, ಕರಕುಶಲ ವಸ್ತುಗಳು, ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಿದರು.

ಇದರ ಜೊತೆಗೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ವಿಶೇಷವಾದ ಚಂದ್ರ ಹಲಸು ಹಬ್ಬಕ್ಕೆ ಬಂದಂತಹ ಜನರನ್ನು ತನ್ನತ್ತ ಆಕರ್ಷಿಸುತ್ತಿತ್ತು. ಹೀಗೆ ಮೈಸೂರಿನಲ್ಲಿ ನಡೆದ ಹಲಸು ಹಬ್ಬವು ಆಹಾರ ಪ್ರಿಯರ ಬಾಯಿ ರುಚಿ ಹೆಚ್ಚಿಸಿತ್ತು.

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-06-2025 | ಜೂ.29 ರಿಂದ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಅವಕಾಶ ಸಿಗಬಹುದೇ..? | ಜೂನ್ ಕೊನೆಯಲ್ಲಿ ಮುಂಗಾರು ದುರ್ಬಲಗೊಳ್ಳಬಹುದಾ..?
June 23, 2025
1:26 PM
by: ಸಾಯಿಶೇಖರ್ ಕರಿಕಳ
ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ
ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ
June 23, 2025
12:03 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳ
June 23, 2025
11:40 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group