ಏರುತ್ತಿದೆ ಸೈಬರ್ ವಂಚನೆ ಪ್ರಕರಣ | ಬರೋಬ್ಬರಿ 25,000 ಕೋಟಿ ರೂ. ಕಳೆದುಕೊಂಡ ಭಾರತೀಯರು | ನಾಳೆ ನೀವು ಇರಬಹುದು.. ಎಚ್ಚರ..!

June 19, 2024
11:23 AM

ಇತ್ತೀಚೆಗೆ ಮೊಬೈಲ್‌ಗಳ(Mobile), ಲ್ಯಾಪ್‌ಟಾಪ್‌(Lap top), ಕಂಪ್ಯೂಟರ್(Computer) ಮೂಲಕ ವಿವಿಧ ರೀತಿಯಲ್ಲಿ ಹಣ(Money) ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಮೊದಲೆಲ್ಲಾ ಎಲ್ಲೋ ಯಾರೋ ಹಾಗೆ ದುಡ್ಡು ಕಳಕೊಂಡ್ರು.. ಹೀಗೆ ದುಡ್ಡು ಕಳಕೊಂಡ್ರು ಅಂತ ನ್ಯೂಸ್‌ ಕೇಳುತ್ತಿದ್ದೆವು. ಈಗ ನೋಡಿದರೆ ನಮ್ಮ ಸುತ್ತಮುತ್ತವೇ ಹಣ ಕಳೆದುಕೊಳ್ಳುತ್ತಿರುವುದು, ಮೋಸ ಹೋಗುತ್ತಿರುವುದು ಕಾಣಿಸುತ್ತಿದೆ. ಯಾವ ರೀತಿಯಲ್ಲಿ ವಂಚನೆ(Fraud) ಮಾಡುತ್ತಾರೆ ಅನ್ನೋದೆ ತಿಳಿಯದ ರೀತಿಯಲ್ಲಿ ಜನರನ್ನು ಸೈಬರ್‌ ವಂಚಕರು ಟಾರ್ಗೆಟ್‌(Target) ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸೈಬರ್ ವಂಚನೆಗಳಿಂದ (Cyber Fraud) ಭಾರತೀಯರು(Indians) 25,000 ಕೋಟಿ ರೂ. ಕಳೆದುಕೊಂಡಿದ್ದಾರೆ. ಇದು ಸಿಕ್ಕಿಂನ(Sikkim) ವಾರ್ಷಿಕ ಬಜೆಟ್‌ಗಿಂತ(Budget) ದ್ವಿಗುಣವಾಗಿದೆ ಎಂದು ಕೇಂದ್ರ ಸರ್ಕಾರದ(Central Govt) ಮೂಲಗಳು ಹೇಳಿವೆ.

Advertisement
ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಗೃಹ ಸಚಿವಾಲಯ ಮತ್ತು  ಅಧಿಕಾರಿಗಳು WhatsApp , MeitY, Instagram ಮತ್ತು Googleನಂತಹ ವಿವಿಧ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳೊಂದಿಗೆ ಈ ಕಳವಳ ಹಂಚಿಕೊಂಡಿದ್ದಾರೆ. ಕಳೆದ ವರ್ಷವೊಂದರಲ್ಲೇ ಪ್ರತಿದಿನ ಸರಾಸರಿ 27 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಜನವರಿ 2024 ರಿಂದ ಜೂನ್ 2024 ರವರೆಗೆ ಕೇಂದ್ರ ಸೈಬರ್ ವಂಚನೆ ಏಜೆನ್ಸಿಯು 709 ದೂರುಗಳನ್ನು ಸ್ವೀಕರಿಸಿದೆ. ಇದರಲ್ಲಿ ಒಬ್ಬೊಬ್ಬರು ಸಂತ್ರಸ್ತರು 1 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಒಟ್ಟು 1,421 ಕೋಟಿ ರೂ. ಹಣವನ್ನು ಜನರು ವಂಚನೆಯಿಂದ ಕಳೆದುಕೊಂಡಿದ್ದಾರೆ ಎಂದು ಡೇಟಾ ಬಹಿರಂಗಪಡಿಸಿದೆ.

ಎಲ್ಲಾ ಕಂಪನಿಗಳು ಆರಂಭಿಕ ಹಂತದಲ್ಲಿಯೂ ಸಹ ವಿವಿಧ ರೀತಿಯ ವಿವರಗಳನ್ನು ಕೇಳುತ್ತವೆ. ಇದು ಸೈಬರ್ ವಂಚನೆಯನ್ನು ತಡೆಯುವ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ವಂಚಕರು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಆಂಪ್ಲಿಫೈಯರ್‌ಗಳಾಗಿ ಬಳಸುತ್ತಿದ್ದಾರೆ. ಇದರಲ್ಲಿ ವಂಚಕರು ಸುಲಭವಾಗಿ ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಏಮ್ಸ್, ಐಸಿಎಮ್‌ಆರ್ ಸೈಬರ್ ದಾಳಿಯಿಂದ ಸಾಲ ನೀಡುವ ಅಪ್ಲಿಕೇಶನ್ ವಂಚನೆಗಳವರೆಗೆ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ (NCRP) 2020 ರಿಂದ ಫೆಬ್ರವರಿ 2024ರ ನಡುವೆ 31 ಲಕ್ಷ ದೂರುಗಳನ್ನು ಸ್ವೀಕರಿಸಿದೆ. ಕೇಂದ್ರ ಸರ್ಕಾರದ ಅಧಿಕೃತ ಸಂವಹನದ ಪ್ರಕಾರ, ಸೈಬರ್ ವಂಚನೆ ಪ್ರಕರಣಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಬಂಧನವಾಗುತ್ತಿರುವ ಹಿನ್ನೆಲೆ ಈ ಬೆಳವಣಿಗೆ ಹೆಚ್ಚುತ್ತಿದೆ ಎನ್ನಲಾಗಿದೆ. ವಿವಿಧ ಕಾನೂನು ಜಾರಿ ಸಂಸ್ಥೆಗಳು ದಾಖಲಾದ ಪ್ರಕರಣಗಳು ಅಥವಾ ಎಫ್‌ಐಆರ್‌ಗಳು 66,000 ಕ್ಕಿಂತ ಹೆಚ್ಚಿವೆ. ಆದರೆ ಈ ವರ್ಷದವರೆಗೆ ಕೇವಲ 500 ಪ್ರಕರಣಗಳಲ್ಲಿ ಬಂಧನವಾಗಿದೆ. ಈ ಮೂಲಕ 1% ವಂಚಕರ ಬಂಧನವಾಗಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಸಾಲದ ಆ್ಯಪ್‌ಗಳು, ಪೊಂಜಿ ಸ್ಕೀಮ್‌ಗಳು ಮತ್ತು ಸ್ಟಾಕ್ ಟ್ರೇಡಿಂಗ್ ಗ್ರೂಪ್‌ಗಳಲ್ಲಿ ನಕಲಿ ಜಾಹೀರಾತುಗಳನ್ನು ಪೂರ್ವಭಾವಿಯಾಗಿ ಪತ್ತೆಹಚ್ಚಲು ಮತ್ತು ಅದರ ವಿರುದ್ಧ ಕ್ರಮ ಕೈಗೊಳ್ಳಲು ಸಾಮಾಜಿಕ ಮಾಧ್ಯಮಗಳಿಗೆ ಸರ್ಕಾರ ತಿಳಿಸಿದೆ.

  • ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹುಲಿಸಂರಕ್ಷಿತ ಪ್ರದೇಶಲ್ಲಿ ರಾತ್ರಿ ಸಂಚಾರ ನಿಷೇಧ | ನಿಷೇಧ ತೆರವುಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ
April 7, 2025
6:44 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ನಿರ್ಧಾರ | ಇಂಧನ ಸಚಿವ ಕೆ.ಜೆ.ಜಾರ್ಜ್
April 7, 2025
6:34 AM
by: The Rural Mirror ಸುದ್ದಿಜಾಲ
ದೇಶದ ಜಿಡಿಪಿ 4.5ಲಕ್ಷ ಕೋಟಿ ರೂಪಾಯಿ ಏರಿಕೆ ಸಾಧ್ಯತೆ | ನಿರ್ಮಲಾ ಸೀತಾರಾಮನ್‌ ಅಭಿಪ್ರಾಯ
April 7, 2025
6:28 AM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ಗುಡುಗು ಸಹಿತ ಹಗುರ ಮಳೆಯ ಸಾಧ್ಯತೆ | ಹವಾಮಾನ ಇಲಾಖೆ
April 7, 2025
6:24 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group