Advertisement
ಸುದ್ದಿಗಳು

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆಲಸ ಏನು ? ಸುಳ್ಯ ಪ್ರಯೋಗ ಶಾಲೆ ಏಕೆ ? ಹೇಗೆ ? | ಹಿರಿಯ ಪ್ರಚಾರಕ ದ ಮಾ ರವೀಂದ್ರ ಹೇಳಿದ್ದೇನು ?

Share

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುದೀರ್ಘ ಯಾತ್ರೆಯಲ್ಲಿ ಇದುವರೆಗೆ ಸಂಘವು ಮಾಡಿದ್ದು ಹಾಗೂ ಮಾಡುವುದು  ದೇಶ ಭಕ್ತರನ್ನು  ನಿರ್ಮಾಣ ಮಾಡುವುದು , ಸಂಸ್ಕಾರ ನೀಡುವುದು , ವ್ಯಕ್ತಿ ನಿರ್ಮಾಣ ಮಾಡುವುದು. ಸಂಘ ಕಾರ್ಯದಲ್ಲಿ ಮಂಗಳೂರು ವಿಭಾಗದಲ್ಲಿ ಸುಳ್ಯದ ಕೊಡುಗೆ ಮಹತ್ವದ್ದು. ಇದೀಗ ಸಂಘಕ್ಕೆ 100 ವರ್ಷ ತುಂಬುವ ಹೊತ್ತಿಗೆ ಇನ್ನೊಂದು ಮಹತ್ವದ ಕಾರ್ಯ ನಡೆಯಬೇಕಿದೆ ಎಂದು  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ದ ಮಾ ರವೀಂದ್ರ ಹೇಳಿದರು.

Advertisement

ಅವರು ಸುಳ್ಯದಲ್ಲಿ ನಡೆದ ಸಂಕೋಲೆ-ಸಂಗ್ರಾಮ-ಸ್ತಾತಂತ್ರ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು. ಸಂಘದ ಹಿರಿಯರು 97 ವರ್ಷಗಳ ಹಿಂದಿನ ಕನಸುಗಳನ್ನು ನೆನಪು ಮಾಡಿಕೊಳ್ಳಬೇಕಾದ ಸಮಯ ಈಗ ಬಂದಿದೆ. ದೇಶವು ಅನೇಕ ಸಮಯಗಳಿಂದ ಗುಲಾಮಗಿರಿಯಿಂದ ಇತ್ತು. ಅದರಿಂದ ಹೊರಬರಲು ಅನೇಕ ಹೋರಾಟ ನಡೆದಿತ್ತು. ಆಗ ಸಂಘ ಸ್ಥಾಪಕ ಡಾ.ಹೆಡಗೇವಾರ್‌ ಅವರು ಸಾಮಾನ್ಯ ಸೂತ್ರ ರಚಿಸಿದರು. ಸಾಮಾನ್ಯ ವ್ಯಕ್ತಿ ಕೂಡಾ ದೇಶ ಭಕ್ತನಾಗಬೇಕು, ಚಾರಿತ್ರ್ಯವಂತನಾಗಬೇಕು, ದೇಶಭಕ್ತನಾಗಬೇಕು, ಸಮಾಜಮುಖಿಯಾಗಿರಬೇಕು. ಅಂತಹ ಸಾಮಾನ್ಯ ಜನರೂ ಎದ್ದು ನಿಂತಾಗ ಸಮಾಜದ ಪರಿವರ್ತನೆ ಎಂದು ಡಾ.ಹೆಡಗೇವಾರ್‌ ಯೋಚಿಸಿದರು. ಹೀಗಾಗಿ ಒಟ್ಟು ಸೇರುವ ಕೆಲಸ ನಡೆಯಿತು. ಅದು ಶಾಖೆ ಎಂದಾಯಿತು. ಅಂದು 800 ಶಾಖೆ ಆರಂಭವಾಯಿತು, ಆ ನಂತರ 18000 ಶಾಖೆ ರಚನೆಯಾಯಿತು. ಈಗ 48000 ಶಾಖೆಗಳು ಇವೆ, 25000 ಮಿಲನ್‌ ಇದೆ. ಈ ಮಹಾಯಾತ್ರೆಯಲ್ಲಿ ದೇಶ ವಿಭಜನೆ, ತುರ್ತುಪರಿಸ್ಥಿತಿ , ರಾಮಜನ್ಮಭೂಮಿ ಮೊದಲಾದ ಆಂದೋಲನಗಳೂ ನಡೆದವು ಎಂದು ದ ಮಾ ರವೀಂದ್ರ ಹೇಳಿದರು.

ಈ 97 ವರ್ಷಗಳ ಯಾತ್ರೆಯಲ್ಲಿ ವ್ಯಕ್ತಿ ನಿರ್ಮಾಣ ಕಾರ್ಯ ಮಾಡಿರುವ ಸಂಘವು ಈಗ ದೇಶ ಆಯಕಟ್ಟಿನ ಜಾಗದಲ್ಲಿ  ಅಂತಹ ಜನಗಳು ಇದ್ದಾರೆ. ಅದರ ಪರಿಣಾಮವಾಗಿ ಹಿಂದುತ್ವದ ಆಧಾರದ ಮೇಲೆ ಕೆಲಸಗಳು ಸಾಗುತ್ತಿವೆ. ಪರಿಸ್ಥಿತಿ ನಿರಪೇಕ್ಷ, ವ್ಯಕ್ತಿ ನಿರಪೇಕ್ಷವಾಗಿಯೇ ಅದು ನಡೆಯುತ್ತಿದೆ ಎಂದರು.ಸುಮಾರು ನಾಲ್ಕು ತಲೆಮಾರು ಕಳೆದಿದೆ. ಸಂಘ ಕಾರ್ಯ ಅಬಾಧಿತವಾಗಿ ನಡೆಯುತ್ತಿದೆ.

ಸಂಘ ಕಾರ್ಯದಲ್ಲಿ ಇದುವರೆಗೂ ಸುಳ್ಯದ ಕೊಡುಗೆ ದೊಡ್ಡದಿದೆ. ತುರ್ತು ಪರಿಸ್ಥಿತಿ ಸಂದರ್ಭ ಸಾವಿರಾರು ಮಂದಿ ಕೆಲಸ ಮಾಡಿದ್ದಾರೆ. 1992 ರ ಹೊತ್ತಿನಲ್ಲಿಯೇ ನೂರಾರು ಶಾಖೆಗಳು ಸುಳ್ಯದಲ್ಲಿತ್ತು. 2013 ರಲ್ಲಿ ಮಂಗಳೂರಿನ ಕೆಂಜಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು. ಸುಳ್ಯ ಅಂದಿನಿಂದಲೇ ಪ್ರಯೋಗ ಶಾಲೆಯಾಗಿತ್ತು. 1996-97  ರಲ್ಲಿ  ಸಂಘದ ಅಂದಿನ ಹಿರಿಯ ಪ್ರಚಾರಕ ನ.ಕೃಷ್ಣಪ್ಪ ಅವರು ಎಲ್‌ ಕೆ ಅಡ್ವಾಣಿ ಅವರ ಮೂಲಕ ಚುನಾವಣಾ ಇಲಾಖೆಗೆ ತಿಳಿಸಿ ಆ ಚುನಾವಣೆಯಲ್ಲಿ ಯಾವುದೇ ಪೋಸ್ಟರ್‌ ಅಂಟಿಸದೆ, ಸಾರ್ವಜನಿಕ ಸಭೆ ಮಾಡದೆ, ಚುನಾವಣಾ ಖರ್ಷು 25 ಸಾವಿರ ದಾಟದೆ ಕೆಲಸ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಅಂದು 37 ಸಾವಿರ ಚುನಾವಣಾ ಖರ್ಚು ಆಗಿತ್ತು, ಅಂದು ಶೇಕಡಾ 53 ಮತ ಪಡೆದು ಸಂಘದ ಕಾರ್ಯಕರ್ತ ಗೆಲುವು ಕಂಡಿದ್ದರು.  ಹೀಗೇ ಅನೇಕ ದಾಖಲೆಗಳಿಗೆ ಸುಳ್ಯ ಹೆಸರಾಗಿತ್ತು. 

ಇದೀಗ 3 ವರ್ಷಗಳ ನಂತರ ಸಂಘಕ್ಕೆ 100 ವರ್ಷ ತುಂಬುದ ಹೊತ್ತಿನಲ್ಲಿ ಹೊಸದೊಂದು ದಾಖಲೆಯಾಗಬೇಕು. ಪ್ರತೀ ಹಿಂದೂ ಮನೆಯಿಂದ ಒಬ್ಬರು ಸಂಘದಲ್ಲಿ ಇರಬೇಕು. ಅದಕ್ಕಾಗಿ ದೇಶಮಟ್ಟದಲ್ಲಿಯೇ ಕೆಲಸವಾಗುತ್ತಿದೆ. ಈ ಬಾರಿ ಸರಸಂಘಚಾಲಕರಿಂದ ತೊಡಗಿ ಘಟ ನಾಯಕನವರೆಗೆ ಮನೆ ಸಂಪರ್ಕ ಮಾಡುತ್ತಾರೆ. ಶಾಖೆ ಹಾಗೂ ಸಂಪರ್ಕ ಸಂಘದ ಎರಡು ಕಣ್ಣುಗಳು ಇದ್ದಂತೆ. ಸಂಘಟನಾ ಶ್ರೇಣಿ , ಜಾಗರಣ ಶ್ರೇಣಿ, ಗತಿವಿಧಿಗಳ ಮೂಲಕ ಕೆಲಸ ನಡೆಯುತ್ತದೆ. ಪ್ರತೀ ಮಂಡಲದಲ್ಲಿ ತಿಂಗಳಿಗೊಮ್ಮೆ ಸೇರಬೇಕು ಎಂಬುದು ಕಡ್ಡಾಯವಾಗಬೇಕು. ಈ ಮೂಲಕ ಸುಳ್ಯದಲ್ಲಿ ಮತ್ತೊಂದು ದೊಡ್ಡ ದಾಖಲೆ ಮಾಡಬೇಕು ಎಂದರು. ಸಂಘದ ಕೆಲಸ ಸಂಸ್ಕಾರ ನೀಡುವುದು , ದೇಶ ಭಕ್ತರನ್ನು ಸೃಷ್ಟಿಸುವುದು. ಇಂದು ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ. ಯೋಗ, ಸಂಸ್ಕೃತ, ಭಗವದ್ಗೀತೆ, ಕುಟುಂಬ ಪದ್ದತಿ ವಿಷಯದಲ್ಲಿ ಭಾರತದ ಕಡೆಗೆ ನೋಡುತ್ತಿದೆ. ಭಾರತವು ಸಂಘಪರಿವಾರದ ಕಡೆ ನೋಡುತ್ತಿದೆ, ಸಂಘವು ಶಕ್ತಿಯ ಕಡೆಗೆ ನೋಡುತ್ತಿದೆ, ಹೀಗಾಗಿ ಸುಳ್ಯವೂ ಈ ಬಾರಿ ಅತಿ ಮುಖ್ಯವಾದ ಶಕ್ತಿ ಸ್ಥಾನವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ‌ ಹಿರಿಯ ಪತ್ರಕರ್ತ ದು ಗು ಲಕ್ಷ್ಮಣ ಪುಸ್ತಕ ಬಿಡುಗಡೆ ಮಾಡಿದರು.  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್, ತಾಲೂಕು ಸಂಘ ಚಾಲಕ ಚಂದ್ರಶೇಖರ ತಳೂರು , ಬರಹಗಾರ ಶಿವರಾಮ ಗೌಡ ಕುಂಞೇಟಿ, ಸಚಿವ ಅಂಗಾರ ಉಪಸ್ಥಿತರಿದ್ದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 24-02-2026 | ತುಂತುರು ಮಳೆ, ಮೋಡದ ವಾತಾವರಣ ಮುಂದುವರಿಕೆ | ಮಾರ್ಚ್ ಮೊದಲ ವಾರದಿಂದ ಬಿಸಿಲು ಹೆಚ್ಚಳ ಸಾಧ್ಯತೆ

ಕರ್ನಾಟಕದ ವಿವಿಧ ಭಾಗಗಳಲ್ಲಿ ಫೆಬ್ರುವರಿ 25ರ ಬೆಳಿಗ್ಗೆ 8 ಗಂಟೆವರೆಗೆ ತುಂತುರು ಮಳೆ,…

15 hours ago

ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ

ಕಡಬ ತಾಲೂಕಿನ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಜನಾ ಮಂಡಳಿ ಉದ್ಘಾಟನೆ…

22 hours ago

ಔಷಧ ಕ್ಷೇತ್ರದಲ್ಲಿ ಭಾರತದ ಐತಿಹಾಸಿಕ ಸಾಧನೆ | ಲಸಿಕೆ ತಯಾರಿಕೆಯಲ್ಲಿ ಜಾಗತಿಕ ಮುಂಚೂಣಿ

ಟೆಟಾನಸ್ ಮತ್ತು ಡಿಫ್ತೀರಿಯಾ ಲಸಿಕೆ ಬಿಡುಗಡೆ ವೇಳೆ ಭಾರತ ಲಸಿಕೆ ತಯಾರಿಕೆಯಲ್ಲಿ ಜಾಗತಿಕ…

22 hours ago

ಮುಂದಿನ ವರ್ಷದಿಂದ 1–10ನೇ ತರಗತಿಗೆ ‘ನೈತಿಕ ವಿಜ್ಞಾನ’ ಪಠ್ಯ ಪರಿಚಯ | ಸಚಿವ ಮಧು ಬಂಗಾರಪ್ಪ ಘೋಷಣೆ

ಮುಂದಿನ ವರ್ಷದಿಂದ ಕರ್ನಾಟಕದ 1ರಿಂದ 10ನೇ ತರಗತಿಯವರೆಗೆ ‘ನೈತಿಕ ವಿಜ್ಞಾನ’ ಪಠ್ಯ ಪರಿಚಯಿಸಲಾಗುವುದು…

22 hours ago

ದೇಹದ ನೀರಿನ ಕೊರತೆ ತಪ್ಪಿಸಲು ಈ ಹಣ್ಣುಗಳು ಸಹಕಾರಿ

ಬೇಸಗೆಯ ಸಮಯದಲ್ಲಿ ದೇಹದ ನೀರಿನ ಕೊರತೆ ತಪ್ಪಿಸಲು watermelon, melon, strawberry ಸೇರಿದಂತೆ…

22 hours ago

ಕೃಷಿಯಲ್ಲಿ ಮುಂದಿನ ಕ್ರಾಂತಿ AI ಮೂಲಕ | ರೈತರಿಗೆ ₹70,000 ಕೋಟಿ ಹೆಚ್ಚುವರಿ ಆದಾಯ ಸಾಧ್ಯ – ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಭಾರತದ ಕೃಷಿಯಲ್ಲಿ ಮುಂದಿನ ದೊಡ್ಡ ಕ್ರಾಂತಿ ಕೃತಕ ಬುದ್ಧಿಮತ್ತೆ  (Artificial Intelligence) AI)ಮೂಲಕ…

22 hours ago