ಉನ್ನತ ಶಿಕ್ಷಣವನ್ನು ಪಡೆದು ಬಹುದೊಡ್ಡ ಹುದ್ದೆಗೇರುವ ಕನಸು ರಾಮನದು.
ಆದರೆ ಮನೆಯಲ್ಲಿ ಕಡು ಬಡತನ.ಬಸ್ಟಾಂಡ್ ಪಕ್ಕದ ಅಂಗಡಿಯಲ್ಲಿ ಮುಂದಿನ ಭವಿಷ್ಯ ಹೇಗೆಂಬ ಚಿಂತೆಯಲ್ಲಿ ಕುಳಿತಿದ್ದ ಸ್ವಾಭಿಮಾನಿ ರಾಮನಿಗೆ ಕಂಡದ್ದು ಮುಂದಿದ್ದ ಕಸದ ತೊಟ್ಟಿಯ ಪಕ್ಕದಲ್ಲಿ ಯಾರೋ ಎಸೆದು ಹೋಗಿದ್ದ ಬೂಟ್ ಪಾಲಿಶ್ ಮಾಡುವ ಬ್ರಶ್ ಹಾಗೂ ಅಳಿದುಳಿದ ಸ್ವಲ್ಪವೇ ಸ್ವಲ್ಪ ಪಾಲಿಶ್ ನ ಡಬ್ಬ.
ಹಿಂದೆ ಮುಂದೆ ಯೋಚಿಸದೆ ಅದನ್ನೆತ್ತಿಕೊಂಡ ರಾಮ…ರಾಮನ ಕೈಯ್ಯಲ್ಲಿದ್ದ ವಸ್ತುಗಳನ್ನು ಕಂಡು ತಮ್ಮ ಬೂಟುಗಳನ್ನು ಅವನತ್ತ ಚಾಚಿದ ಅಂಗಡಿಯ ಮುತ್ತುಸ್ವಾಮಿ ದೀಕ್ಷಿತರು ಅವನ ಕೈಯಲ್ಲಿ ನೂರು ರೂಪಾಯಿಯ ನೋಟೊಂದನ್ನು ಕೊಟ್ಟು ಹೊಸ ಬ್ರಶ್ ಹಾಗೂ ಪಾಲೀಶ್ ಡಬ್ಬ ಖರೀದಿಸುವಂತೆ ಹೇಳಿ ಅಪ್ಯಾಯತೆಯಿಂದ ಅವನ ತಲೆ ಸವರಿದರು.
ಹೊಸ ಪಾಲೀಶ್ ಡಬ್ಬ ಖರೀದಿಸಿದ ರಾಮ ದಣಿವರಿಯದೆ ದುಡಿದ….ಇಂದು……….ಅಂದು ತಾನೇ ಪಾಲೀಶ್ ಮಾಡುತ್ತಿದ್ದ ಅದೆಷ್ಟೋ ಹೆಸರಾಂತ ಕಪೆನಿಗಳ ಬೂಟುಗಳ ಬಹುದೊಡ್ಡ ಶಾಖೆಯನ್ನೇ ತಾನು ಹೊಂದಿದ್ದಾನೆ ರಾಮ. ತಾನು ಅಂದು ಆ ಮಾಸಲು ಬಟ್ಟೆಯಲ್ಲಿ ದಣಿವರಿಯದೆ ಬೂಟು ಪಾಲೀಶ್ ಮಾಡುತ್ತಿರುವ ಚಿತ್ರ ಅವನ ಆಫೀಸಿನ ಗೋಡೆಯನ್ನಲಂಕರಿಸಿದೆ.
ಪಕ್ಕದಲ್ಲೇ ಮುತ್ತುಸ್ವಾಮಿ ದೀಕ್ಷಿತರ ವಾತ್ಸಲ್ಯ ಸೂಸುವ ನಗುಮೊಗದ ಚಿತ್ರವೂ.
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಕೊಡಗಿನ…
ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ಮಂಗಳೂರಿನ ರೆಮೋನಾ ಪಿರೇರಾ,…
ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾಗಿದ್ದು, ಕೃಷಿಕರ ಹಿತದೃಷ್ಟಿಯಿಂದ ಕೇಂದ್ರ…
ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ-…
ರಾಜ್ಯದೆಲ್ಲೆಡೆ ಇಂದು ನಾಗರಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ…
ಕೊಪ್ಪಳ ಜಿಲ್ಲೆಯಲ್ಲಿ ಜುಲೈ ಅಂತ್ಯದವರಿಗೆ 2 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆಯ ಗುರಿ…