ರಸ್ತೆ ಬದಿಯ ಮರಗಳ ಸುತ್ತ ತುಂಬಿರುವ ಕಾಂಕ್ರೀಟ್ ತೆಗೆಯಲು ಹಾಗೂ ಅಂತಹ ಮರಗಳನ್ನು ಸಂರಕ್ಷಿಸಲು ಮರಗಳ ಡಿಕಾಂಕ್ರೀಟೀಕರಣ ಉಪಕ್ರಮʼಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಆ ಮೂಲಕ ಮರಗಳ ಬೇರುಗಳು ಸಡಿಲಗೊಂಡು ಅವು ಬಹುಬೇಗ ಬಿದ್ದು ಹೋಗುವುದನ್ನು ತಡೆಯುವುದಲ್ಲದೆ, ಮರಗಳು ದೀರ್ಘಕಾಲ ಬಾಳುವಂತೆ ಮಾಡುವ ಉದ್ದೇಶವಿದೆ. ಡಿಕಾಂಕ್ರೀಟೀಕರಣ ಎಂಬುದು ವೈಜ್ಞಾನಿಕ ರೀತಿಯಲ್ಲಿ ಮರಗಳ ಬೇರಿಗೆ ಶಕ್ತಿ ತುಂಬುವ ವಿಧಾನವಾಗಿದೆ. ಮರಗಳ ಸುತ್ತ ಒಂದು ಮೀಟರ್ ಸ್ಥಳವನ್ನು ಕಟ್ ಮಾಡಿ ಅಲ್ಲಿನ ಕಾಂಕ್ರೀಟ್ ಅಥವಾ ಟೈಲ್ಸ್ ತೆರವುಗೊಳಿಸುವುದು. ಆ ಜಾಗಕ್ಕೆ ಆರೋಗ್ಯಯುತ ಮಣ್ಣು ಮತ್ತು ಸಾವಯವ ಗೊಬ್ಬರ ಹಾಕುವುದು. ಆನಂತರ ಮರಗಳ ಬೇರಿಗೆ ಗಾಳಿ ಸರಾಗವಾಗಿ ಹೋಗುವಂತೆ ಮಾಡಿ ನೀರು ಹಾಕಿ, ಮರದ ಸುತ್ತ ಮಣ್ಣನ್ನು ಹಾಕಿ ಮುಚ್ಚುವುದು ಸರಿಯಾದ ವಿಧಾನವಾಗಿದೆ.
ಈ ವರ್ಷ ಅಡಿಕೆ ಇಳುವರಿ ಕುಸಿತವಾಗಿದೆ ಎಂದು ಶೇ.71 ರಷ್ಟು ರೈತರು ಅಭಿಪ್ರಾಯ…
ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…
ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…
ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…
ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…
ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…