ರಸ್ತೆ ಬದಿಯ ಮರಗಳ ಸುತ್ತ ತುಂಬಿರುವ ಕಾಂಕ್ರೀಟ್ ತೆಗೆಯಲು ಹಾಗೂ ಅಂತಹ ಮರಗಳನ್ನು ಸಂರಕ್ಷಿಸಲು ಮರಗಳ ಡಿಕಾಂಕ್ರೀಟೀಕರಣ ಉಪಕ್ರಮʼಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಆ ಮೂಲಕ ಮರಗಳ ಬೇರುಗಳು ಸಡಿಲಗೊಂಡು ಅವು ಬಹುಬೇಗ ಬಿದ್ದು ಹೋಗುವುದನ್ನು ತಡೆಯುವುದಲ್ಲದೆ, ಮರಗಳು ದೀರ್ಘಕಾಲ ಬಾಳುವಂತೆ ಮಾಡುವ ಉದ್ದೇಶವಿದೆ. ಡಿಕಾಂಕ್ರೀಟೀಕರಣ ಎಂಬುದು ವೈಜ್ಞಾನಿಕ ರೀತಿಯಲ್ಲಿ ಮರಗಳ ಬೇರಿಗೆ ಶಕ್ತಿ ತುಂಬುವ ವಿಧಾನವಾಗಿದೆ. ಮರಗಳ ಸುತ್ತ ಒಂದು ಮೀಟರ್ ಸ್ಥಳವನ್ನು ಕಟ್ ಮಾಡಿ ಅಲ್ಲಿನ ಕಾಂಕ್ರೀಟ್ ಅಥವಾ ಟೈಲ್ಸ್ ತೆರವುಗೊಳಿಸುವುದು. ಆ ಜಾಗಕ್ಕೆ ಆರೋಗ್ಯಯುತ ಮಣ್ಣು ಮತ್ತು ಸಾವಯವ ಗೊಬ್ಬರ ಹಾಕುವುದು. ಆನಂತರ ಮರಗಳ ಬೇರಿಗೆ ಗಾಳಿ ಸರಾಗವಾಗಿ ಹೋಗುವಂತೆ ಮಾಡಿ ನೀರು ಹಾಕಿ, ಮರದ ಸುತ್ತ ಮಣ್ಣನ್ನು ಹಾಕಿ ಮುಚ್ಚುವುದು ಸರಿಯಾದ ವಿಧಾನವಾಗಿದೆ.
ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…
ಪುತ್ತೂರಿನ ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾರ್ಚ್ 11ರಂದು ಗೋಡಂಬಿ ಹಣ್ಣಿನ ಮೌಲ್ಯವರ್ಧನೆ ಕುರಿತು…
ಇತರರ ಪರಿಶ್ರಮವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ ತಾತ್ಕಾಲಿಕವಾಗಿದ್ದು, ನಿಜವಾದ ಯಶಸ್ಸು ಸ್ವಪರಿಶ್ರಮ, ಸತ್ಯ ಮತ್ತು…
ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ …
ಕೃತಕ ಬುದ್ಧಿಮತ್ತೆ (AI) ವಿಕಸಿತ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಉತ್ಪಾದಕತೆ, ಸ್ಪರ್ಧಾತ್ಮಕತೆ ಹಾಗೂ…
ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಮತ್ತೆ ಆರಂಭಿಸಲು ಅನುಮತಿ…