ರಸ್ತೆ ಬದಿಯ ಮರಗಳ ಸುತ್ತ ತುಂಬಿರುವ ಕಾಂಕ್ರೀಟ್ ತೆಗೆಯಲು ಹಾಗೂ ಅಂತಹ ಮರಗಳನ್ನು ಸಂರಕ್ಷಿಸಲು ಮರಗಳ ಡಿಕಾಂಕ್ರೀಟೀಕರಣ ಉಪಕ್ರಮʼಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಆ ಮೂಲಕ ಮರಗಳ ಬೇರುಗಳು ಸಡಿಲಗೊಂಡು ಅವು ಬಹುಬೇಗ ಬಿದ್ದು ಹೋಗುವುದನ್ನು ತಡೆಯುವುದಲ್ಲದೆ, ಮರಗಳು ದೀರ್ಘಕಾಲ ಬಾಳುವಂತೆ ಮಾಡುವ ಉದ್ದೇಶವಿದೆ. ಡಿಕಾಂಕ್ರೀಟೀಕರಣ ಎಂಬುದು ವೈಜ್ಞಾನಿಕ ರೀತಿಯಲ್ಲಿ ಮರಗಳ ಬೇರಿಗೆ ಶಕ್ತಿ ತುಂಬುವ ವಿಧಾನವಾಗಿದೆ. ಮರಗಳ ಸುತ್ತ ಒಂದು ಮೀಟರ್ ಸ್ಥಳವನ್ನು ಕಟ್ ಮಾಡಿ ಅಲ್ಲಿನ ಕಾಂಕ್ರೀಟ್ ಅಥವಾ ಟೈಲ್ಸ್ ತೆರವುಗೊಳಿಸುವುದು. ಆ ಜಾಗಕ್ಕೆ ಆರೋಗ್ಯಯುತ ಮಣ್ಣು ಮತ್ತು ಸಾವಯವ ಗೊಬ್ಬರ ಹಾಕುವುದು. ಆನಂತರ ಮರಗಳ ಬೇರಿಗೆ ಗಾಳಿ ಸರಾಗವಾಗಿ ಹೋಗುವಂತೆ ಮಾಡಿ ನೀರು ಹಾಕಿ, ಮರದ ಸುತ್ತ ಮಣ್ಣನ್ನು ಹಾಕಿ ಮುಚ್ಚುವುದು ಸರಿಯಾದ ವಿಧಾನವಾಗಿದೆ.
ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…
ಜೂನ್ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…
ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ…
ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 28ರೊಳಗೆ ಶೂ ಮತ್ತು ಸಾಕ್ಸ್…
ರಾಜ್ಯಾದ್ಯಂತ ಪಿಜಿ, ಹಾಸ್ಟೆಲ್, ಕ್ಯಾಟರಿಂಗ್ ಹಾಗೂ ಹೋಟೆಲ್ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ ಮುಂದುವರಿಯಲಿದೆ…
ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…