ರಸ್ತೆ ಬದಿಯ ಮರಗಳ ಸುತ್ತ ತುಂಬಿರುವ ಕಾಂಕ್ರೀಟ್ ತೆಗೆಯಲು ಹಾಗೂ ಅಂತಹ ಮರಗಳನ್ನು ಸಂರಕ್ಷಿಸಲು ಮರಗಳ ಡಿಕಾಂಕ್ರೀಟೀಕರಣ ಉಪಕ್ರಮʼಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಆ ಮೂಲಕ ಮರಗಳ ಬೇರುಗಳು ಸಡಿಲಗೊಂಡು ಅವು ಬಹುಬೇಗ ಬಿದ್ದು ಹೋಗುವುದನ್ನು ತಡೆಯುವುದಲ್ಲದೆ, ಮರಗಳು ದೀರ್ಘಕಾಲ ಬಾಳುವಂತೆ ಮಾಡುವ ಉದ್ದೇಶವಿದೆ. ಡಿಕಾಂಕ್ರೀಟೀಕರಣ ಎಂಬುದು ವೈಜ್ಞಾನಿಕ ರೀತಿಯಲ್ಲಿ ಮರಗಳ ಬೇರಿಗೆ ಶಕ್ತಿ ತುಂಬುವ ವಿಧಾನವಾಗಿದೆ. ಮರಗಳ ಸುತ್ತ ಒಂದು ಮೀಟರ್ ಸ್ಥಳವನ್ನು ಕಟ್ ಮಾಡಿ ಅಲ್ಲಿನ ಕಾಂಕ್ರೀಟ್ ಅಥವಾ ಟೈಲ್ಸ್ ತೆರವುಗೊಳಿಸುವುದು. ಆ ಜಾಗಕ್ಕೆ ಆರೋಗ್ಯಯುತ ಮಣ್ಣು ಮತ್ತು ಸಾವಯವ ಗೊಬ್ಬರ ಹಾಕುವುದು. ಆನಂತರ ಮರಗಳ ಬೇರಿಗೆ ಗಾಳಿ ಸರಾಗವಾಗಿ ಹೋಗುವಂತೆ ಮಾಡಿ ನೀರು ಹಾಕಿ, ಮರದ ಸುತ್ತ ಮಣ್ಣನ್ನು ಹಾಕಿ ಮುಚ್ಚುವುದು ಸರಿಯಾದ ವಿಧಾನವಾಗಿದೆ.
ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ಚುರುಕುಗೊಳ್ಳುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಆರಂಭವಾಗಿದೆ. ಜೂನ್…
ಗುರುವಾರದ ವೇಳೆಗೆ ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ…
ಮ್ಯಾನ್ಮಾರ್ನಿಂದ ಅಕ್ರಮವಾಗಿ ಸಾಗಾಟವಾಗುತ್ತಿದ್ದ ₹24 ಕೋಟಿ ಮೌಲ್ಯದ ಅಡಿಕೆಯನ್ನು ಮಿಜೋರಾಂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.…
ರಾಜ್ಯಾದ್ಯಂತ ಅಡಿಕೆ ಗಿಡಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು,ಕೆಲವು ಕಡೆ ಸಸಿಯ ಬೆಲೆ ₹100ಕ್ಕೆ…
ಕೇಂದ್ರ ಸರ್ಕಾರದ ವಿವಿಧ ಕೃಷಿ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯವಾಗುತ್ತಿದೆ.…
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಜಿಗೆ ₹5 ಏರಿಕೆ ದಾಖಲಾಗಿದ್ದು, ಹೊಸ ಅಡಿಕೆ…