Advertisement
ವಿಶೇಷ ವರದಿಗಳು

ತಂತ್ರಜ್ಞಾನ ಕೃಷಿಗೆ ಬಂದರೆ ರೈತನ ಆದಾಯ ಹೆಚ್ಚುತ್ತದೆಯೇ..? ಡೀಪ್‌ ಟೆಕ್‌ ಕೃಷಿ ವಿಶ್ಲೇಷಣೆ

Share

ಭಾರತದ ಕೃಷಿ ಇಂದು ಒಂದು ಮಹತ್ವದ ತಿರುವಿನಲ್ಲಿ ನಿಂತಿದೆ. ಹವಾಮಾನ ಅಸ್ಥಿರತೆ, ನೀರಿನ ಕೊರತೆ, ಕಾರ್ಮಿಕರ ಅಭಾವ ಮತ್ತು ನಿರಂತರವಾಗಿ ಏರುತ್ತಿರುವ ಉತ್ಪಾದನಾ ವೆಚ್ಚಗಳು ರೈತನ ಬದುಕನ್ನು ಕಠಿಣಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ಡೀಪ್‌ ಟೆಕ್‌ (Deep Tech) ಕೃಷಿಯೇ ಮುಂದಿನ ಪರಿಹಾರ ಎಂಬ ಮಾತು ಕೇಳಿಬರುತ್ತಿದೆ.

ಆದರೆ, ರೈತನ  ಪ್ರಶ್ನೆ ಕೇಳುವ ಸರಳವಾಗಿದೆ, “ಈ ತಂತ್ರಜ್ಞಾನ ನನ್ನ ಹೊಲಕ್ಕೆ ಬಂದರೆ ನನಗೆ ನಿಜಕ್ಕೂ ಲಾಭವಾಗುತ್ತದೆಯೇ?”.  World Economic Forum ವರದಿಗಳ ಪ್ರಕಾರ, ಕೃತಕ ಬುದ್ಧಿಮತ್ತೆ, ಉಪಗ್ರಹ ಚಿತ್ರಣ, ಸೆನ್ಸರ್‌, ಡ್ರೋನ್‌ ಮತ್ತು ಜೈವಿಕ ತಂತ್ರಜ್ಞಾನಗಳು ಕೃಷಿಯ ಭವಿಷ್ಯವನ್ನು ರೂಪಿಸಬಲ್ಲವು. ಆದರೆ ಇವುಗಳ ಯಶಸ್ಸು ರೈತನ ಬದುಕಿನಲ್ಲಿ ಎಷ್ಟು ಬದಲಾವಣೆ ತರುತ್ತವೆ ಎಂಬುದೇ ಮುಖ್ಯ ಪ್ರಶ್ನೆ.

ಕೃಷಿ ಇಂದು ಒತ್ತಡಗಳನ್ನು ಎದುರಿಸುತ್ತಿದೆ. ಪ್ರಪಂಚದಾದ್ಯಂತ, ರೈತರು ಮತ್ತು ಆಹಾರ ಕಂಪನಿಗಳು ಹವಾಮಾನ ಏರಿಳಿತ, ಕಡಿಮೆಯಾಗುತ್ತಿರುವ ಕೃಷಿ , ಮಣ್ಣಿನ ಗುಣಮಟ್ಟ ಕುಸಿತ, ಕುಸಿಯುತ್ತಿರುವ ಅಂತರ್ಜಲ ಮಟ್ಟ, ಹೆಚ್ಚುತ್ತಿರುವ ಭೌಗೋಳಿಕ ಅನಿಶ್ಚಿತತೆಯೊಂದಿಗೆ ಕೃಷಿ ಹೋರಾಡುತ್ತಿವೆ. ವಿಶ್ವದ ಸುಮಾರು ಮೂರನೇ ಒಂದು ಭಾಗದಷ್ಟು ಮಣ್ಣು ಈಗಾಗಲೇ ಕ್ಷೀಣಿಸುತ್ತಿದೆ. ಆದರೆ, ಪ್ರಪಂಚದಾದ್ಯಂತದ ಪ್ರಮುಖ ಜಲಚರಗಳಲ್ಲಿ 71% ರಷ್ಟು ಅಂತರ್ಜಲ ಮಟ್ಟಗಳು ಕುಸಿಯುತ್ತಿವೆ.  ಇಂತಹ ಸಂದರ್ಭ ಇತ್ತೀಚಿನ ತಾಂತ್ರಿಕ ಪ್ರಗತಿಗಳು ಗಮನ ಸೆಳೆದಿದೆ. ವಿಶ್ವ ಆರ್ಥಿಕ ವೇದಿಕೆಯ ಹೊಸ ವರದಿಯಾದ “ಶೇಪಿಂಗ್ ದಿ ಡೀಪ್-ಟೆಕ್ ರೆವಲ್ಯೂಷನ್ ಇನ್ ಅಗ್ರಿಕಲ್ಚರ್” ನಲ್ಲಿ ವಿವರಿಸಿದ್ದಾರೆ.  ಅದರಲ್ಲಿ ಡೀಪ್‌ ಟೆಕ್‌ (Deep Tech) ಕೃಷಿ ಉಲ್ಲೇಖಿಸಲಾಗಿದೆ.

ವೆಚ್ಚ ಕಡಿತ: ಡೀಪ್‌ ಟೆಕ್‌ನ ಮೊದಲ ಲಾಭ :  ಇಂದಿನ ಕೃಷಿಯಲ್ಲಿ ರೈತನು ಹೆಚ್ಚಾಗಿ “ಅಂದಾಜು” ಮೇಲೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಯಾವಾಗ ಗೊಬ್ಬರ ಹಾಕಬೇಕು, ಎಷ್ಟು ಔಷಧಿ ಸಿಂಪಡಿಸಬೇಕು ಎಂಬುದರಲ್ಲಿ ತಪ್ಪಾದ ನಿರ್ಧಾರಗಳು ನಷ್ಟಕ್ಕೆ ಕಾರಣವಾಗುತ್ತಿವೆ.  AI ಆಧಾರಿತ ಬೆಳೆ ಸಲಹೆ, ಮಣ್ಣು ಮತ್ತು ತೇವಾಂಶ ಸೆನ್ಸರ್‌ಗಳ ಬಳಕೆಯಿಂದ ಅಗತ್ಯವಿರುವಷ್ಟೇ ಗೊಬ್ಬರ–ಔಷಧಿ ಬಳಕೆ ಸಾಧ್ಯ, ಅನಗತ್ಯ ಖರ್ಚು ಕಡಿತ, ಮಣ್ಣು ಮತ್ತು ಬೆಳೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಹವಾಮಾನ ಅಪಾಯಕ್ಕೆ ತಂತ್ರಜ್ಞಾನ:  ಅಕಾಲಿಕ ಮಳೆ, ಬರ, ಬಿಸಿಲಿನ ಅಲೆಗಳು ರೈತನ ಬೆವರನ್ನು ಕ್ಷಣಾರ್ಧದಲ್ಲಿ ನಷ್ಟವಾಗಿ ಮಾಡಿಬಿಡುತ್ತಿವೆ. ಉಪಗ್ರಹ ಚಿತ್ರಣ ಮತ್ತು ಹವಾಮಾನ ಮುನ್ಸೂಚನೆ ಆಧಾರಿತ ಡೀಪ್‌ ಟೆಕ್‌ ಉಪಕರಣಗಳು. ಇವು ಮಳೆಯ ಮುಂಗಡ ಎಚ್ಚರಿಕೆ, ಕಟಾವು ಅಥವಾ ಸಿಂಪಡಣೆ ಸಮಯದ ಸರಿಯಾದ ನಿರ್ಧಾರ, ಬೆಳೆ ನಷ್ಟವನ್ನು ತಗ್ಗಿಸುವ ಸಾಧ್ಯತೆ ಇದೆ.  ಇದು ಸಣ್ಣ ರೈತನಿಗೆ ವಿಮೆಗಿಂತಲೂ ದೊಡ್ಡ ಭರವಸೆ ಎನ್ನಬಹುದು.

ಕಾರ್ಮಿಕ ಕೊರತೆಗೆ ಯಂತ್ರಗಳ ನೆರವು:  ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಕೃಷಿಯಿಂದ ದೂರವಾಗುತ್ತಿರುವುದು ದೊಡ್ಡ ಸವಾಲಾಗಿದೆ. ಕಾರ್ಮಿಕ ಕೊರತೆಯಿಂದಾಗಿ ಹಲವಾರು ಹೊಲಗಳಲ್ಲಿ ಕೆಲಸ ವಿಳಂಬವಾಗುತ್ತಿದೆ. ಡ್ರೋನ್‌, ಸ್ವಯಂಚಾಲಿತ ಯಂತ್ರಗಳು ಮತ್ತು ಸಣ್ಣ ರೋಬೋಟಿಕ್‌ ಉಪಕರಣಗಳು ಮುಖ್ಯವಾಗಿದೆ, ಇದರಿಂದ ಸಮಯಕ್ಕೆ ಸರಿಯಾದ ಕೃಷಿ ಕಾರ್ಯ, ಮಾನವ ಶ್ರಮದ ಅವಲಂಬನೆ ಕಡಿಮೆ, ಉತ್ಪಾದನಾ ನಿರಂತರತೆ ಸಾಧ್ಯವಿದೆ.

ರೈತನ ಆತಂಕಗಳು: ತಂತ್ರಜ್ಞಾನ ಮಾತ್ರ ಸಾಕೆ? : ಡೀಪ್‌ ಟೆಕ್‌ ಕೃಷಿಯ ಬಗ್ಗೆ ರೈತರಲ್ಲಿ ಕೆಲವು ನಿಜವಾದ ಭಯಗಳೂ ಇವೆ. ಉಪಕರಣಗಳ ಹೆಚ್ಚು ಆರಂಭಿಕ ವೆಚ್ಚದವು, ಡೇಟಾ ಯಾರ ಕೈಯಲ್ಲಿರುತ್ತದೆ ಎಂಬ ಅನುಮಾನ, ತರಬೇತಿ ಇಲ್ಲದೆ ತಂತ್ರಜ್ಞಾನ ಬಳಸಲು ಆಗುವ ಸಾಧ್ಯತೆ ಕಡಿಮೆ, ಕಂಪನಿಗಳ ಮೇಲೆ ಅವಲಂಬನೆ ಹೆಚ್ಚುವ ಭೀತಿ ಇದೆ. ಈ ಆತಂಕಗಳನ್ನು ಪರಿಹರಿಸದೇ ತಂತ್ರಜ್ಞಾನ ನೆಲಕ್ಕಿಳಿಯದು ಎಂಬುದು ರೈತರ ಸ್ಪಷ್ಟ ಅಭಿಪ್ರಾಯ.

ಪರಿಹಾರ ರೈತಕೇಂದ್ರಿತವಾಗಿರಬೇಕು :  ರೈತ ದೃಷ್ಟಿಯಲ್ಲಿ ಡೀಪ್‌ ಟೆಕ್‌ ಕೃಷಿ ಯಶಸ್ವಿಯಾಗಬೇಕೆಂದರೆ, ಸಹಕಾರಿ ಸಂಘಗಳು ಮತ್ತು ಎಫ್‌ಪಿಒಗಳ ಮೂಲಕ ತಂತ್ರಜ್ಞಾನ ಹಂಚಿಕೆ ಮಾಡಬೇಕು. ಸರ್ಕಾರದಿಂದ ಸಬ್ಸಿಡಿ ಮತ್ತು ಕಡಿಮೆ ಬಡ್ಡಿ ಸಾಲ ಅಗತ್ಯ ಇದೆ. ಸ್ಥಳೀಯ ಭಾಷೆಗಳಲ್ಲಿ ತರಬೇತಿ ಮತ್ತು ತಾಂತ್ರಿಕ ಸಹಾಯ ಅಗತ್ಯ ಇದೆ. ಖಾಸಗಿ ಕಂಪನಿಗಳಿಗೆ ಸ್ಪಷ್ಟ ನಿಯಂತ್ರಣ ಮತ್ತು ಹೊಣೆಗಾರಿಕೆ ನೀಡಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ರೂರಲ್‌ ಮಿರರ್‌ ವಿಶ್ಲೇಷಣೆ : ಡೀಪ್‌ ಟೆಕ್‌ ಕೃಷಿ ಭಾರತಕ್ಕೆ ಅವಕಾಶವಾಗಿದೆ. ಆದರೆ ಅದು ಪೈಲಟ್‌ ಯೋಜನೆಗಳಲ್ಲಿ ಸೀಮಿತವಾಗದೆ, ರೈತನ ದಿನನಿತ್ಯದ ಬದುಕಿನಲ್ಲಿ ಲಾಭ ತರುವಂತೆ ರೂಪುಗೊಳ್ಳಬೇಕು.  ತಂತ್ರಜ್ಞಾನ ರೈತನ ಕೃಷಿಕನ ಭೂಮಿಗೆ ಬಂದಾಗ ಮಾತ್ರ ಕೃಷಿ ಕ್ರಾಂತಿ ಸಂಪೂರ್ಣವಾಗುತ್ತದೆ.  ರೈತನಿಗೆ ಲಾಭ ಕಾಣಿಸಿದಾಗಲೇ ಡೀಪ್‌ ಟೆಕ್‌ ಯಶಸ್ವಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

20 hours ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

21 hours ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

22 hours ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

1 day ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

1 day ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

2 days ago