ಕ್ವಿಂಟಾಲ್ ರಾಗಿಗೆ 5 ಸಾವಿರ ಬೆಲೆ ನಿಗದಿಗೆ ಆಗ್ರಹ | ಇಲ್ಲವಾದಲ್ಲಿ ರಾಗಿ ಬೆಳೆಯೋದು ಕಷ್ಟವಾದೀತು |

August 24, 2024
12:19 PM

ರೈತರು(Farmer) ಬೆಳೆಯುವ ಪ್ರತಿ ಕ್ವಿಂಟಾಲ್ ರಾಗಿಗೆ(Ragi) ಸರಕಾರ(Govt) 5000 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಬೇಕು(Support Price Fixation) ಎಂದು ಕರ್ನಾಟಕ ರಾಜ್ಯ ಕೆಂಪೇಗೌಡ ರೈತಸಂಘದ ರಾಜ್ಯ ಉಪಾಧ್ಯಕ್ಷ  ಜುಟ್ನಹಳ್ಳಿ ಆರ್.ದಿನೇಶ್ ಒತ್ತಾಯಿಸಿದರು. ಕಳೆದ ಬಾರಿ ಪ್ರತಿ ಕ್ವಿಂಟಾಲ್ ರಾಗಿಗೆ 3846 ರೂ ಬೆಂಬಲ ಬೆಲೆ ನೀಡಿ ಖರೀದಿಸಿತು ಈ ಬಾರಿ 4290 ರೂ ಸರಕಾರ ಬೆಲೆ ನಿಗದಿಪಡಿಸಿದೆ, ಸರಕಾರ ನಿಗದಿಪಡಿಸಿರುವ ಈ ಹಣದಿಂದ ಉಳುಮೆ ಮಾಡಲು ಸಾಧ್ಯವಾಗುವುದಿಲ್ಲ, ರಸಗೊಬ್ಬರ(Fertilizer), ಉಳುಮೆ ಹಾಗೂ ಬಿತ್ತನೆ ಬೀಜ(Seeding) ದುಬಾರಿಯಾಗಿದೆ ಒಂದು ಕ್ವಿಂಟಾಲ್ ರಾಗಿ ಬೆಳೆಯಲು 6 ರಿಂದ 7 ಸಾವಿರ ಖರ್ಚಾಗುತ್ತದೆ. ಹೀಗಿರುವಾಗ ರೈತ ರಾಗಿ  ಬೆಳೆಯುವುದಾದರೂ ಹೇಗೆ ಅನ್ನೋದು ದಿನೇಶ ಅವರ ವಾದ.

ಕೂಡಲೇ ಸರಕಾರ ಪ್ರತಿ ಕ್ವಿಂಟಾಲ್ ರಾಗಿಗೆ 5 ಸಾವಿರ ನಿಗದಿಪಡಿಸಿ ಆದೇಶಿಸಬೇಕು ಇಲ್ಲದಿದ್ದರೆ ರಾಜ್ಯ ವ್ಯಾಪಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಮಾಗಡಿ ತಾಲೂಕು ರಾಗಿ ಕಣಜವಾಗಿದ್ದು  ರಾಗಿ ಬೆಳೆಯುವುದರಲ್ಲಿ ಪ್ರಸಿದ್ದಿಹೊಂದಿದೆ ತಾಲೂಕಿನಲ್ಲಿ ಬೆಳೆಯುವಷ್ಟು ರಾಗಿ ಹಾಗೂ ರಾಗಿ ಬೆಳೆಯ ಇಳುವರಿ ರಾಜ್ಯದ ಯಾವುದೇ ಭಾಗದಲ್ಲೂ ಇಲ್ಲ ಹೀಗಿರುವಾಗ ರಾಗಿ ಬೆಳೆಗೆ ಪ್ರೋತ್ಸಾಹ, ಬೆಂಬಲ ನೀಡುವುದು ಸರಕಾರದ ಕರ್ತವ್ಯವಾಗಿದೆ. ಕಳೆದ ಬಾರಿ ಮಳೆ ಇಲ್ಲದೆ ರಾಗಿ ಬೆಳೆ ಇಲ್ಲದಂತಾಗಿ ರೈತ ಸಂಕಷ್ಟದಲ್ಲಿದ್ದಾನೆ. ರೈತರಿಗೆ ವೈಜ್ಞಾನಿಕ ಪರಿಹಾರವೂ ನೀಡಿಲ್ಲ ಕಳೆದ ಬಾರಿ ಬೆಂಬಲ ಬೆಲೆಗೆ ನೀಡಿದ ಹಣ ಮತ್ತಷ್ಟು ರೈತರಿಗೆ ಸರಕಾರ ನೀಡಿಲ್ಲ ಶೀಘ್ರವೇ ಈ ಹಣವನ್ನು  ರೈತರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಮಳೆ ಕೊರತೆಯಿಂದ ರಾಗಿ, ಭತ್ತ, ಅಡಿಕೆ, ಮಾವು, ತೊಗರಿ ಸೇರಿದಂತೆ ತೋಟಗಾರಿಕೆ ಬೆಳೆಗಳು ನಷ್ಟವಾದ ಸಂದರ್ಭದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಸರಕಾರ ಇಲ್ಲಿಯವರೆಗೂ ವೈಜ್ಞಾನಿಕ ಪರಿಹಾರ ನೀಡಿಲ್ಲ ಈ ಸಂಬಂಧ ರೈತರ ಪ್ರತಿ ಬೆಳೆಗಳಿಗೂ ಸರಕಾರವೇ ವಿಮೆ ಮಾಡಿಸಬೇಕು ಎಂದು ಮನವಿ ಮಾಡಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!
September 1, 2026
10:37 PM
by: ದ ರೂರಲ್ ಮಿರರ್.ಕಾಂ
ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ
September 1, 2026
3:16 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?
September 1, 2026
3:10 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ
September 1, 2026
7:42 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror