ದೇಸೀ ಗೋತಳಿ ಸಂರಕ್ಷಣೆಗೆ ಗ್ರಾಮೀಣ ಪ್ರದೇಶ, ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯವಿದೆ. ದನ ಸಾಕುವುದು ಕೂಡಾ ಸಾಧ್ಯ ಇದೆ. ಆದರೆ ಪ್ರೀತಿ ಹಾಗೂ ಕಾಳಜಿ ಇರಬೇಕು ಅಷ್ಟೇ. ಇದಕ್ಕೊಂದು ಉದಾಹರಣೆ ಮಂಗಳೂರಿನ ಕದ್ರಿ ಕಂಬಳದ ಮಲ್ಲಿಕಾ ಬಡಾವಣೆಯಲ್ಲಿರುವ ಪ್ರದೀಪ್ ಕುಮಾರ್ ಕಲ್ಕೂರ ಅವರ ಮನೆ. ಕಳೆದ ಕೆಲವು ವರ್ಷಗಳಿಂದ ದೇಸೀ ಗೋವನ್ನುಅವರ ಮನೆಯಲ್ಲಿ ಸಾಕುತ್ತಿದ್ದಾರೆ. …… ಮುಂದೆ ಓದಿ……
ಮನೆಯ ಮುಂದೆ ದೇಸೀ ಗೋವು. ಒಂದು ಹೋರಿ-ಎರಡು ದನ. ಕೃಷ್ಣ-ದೇವಕಿ-ಯಶೋಧೆ ಅಲ್ಲಿದ್ದಾರೆ. ಮಂಗಳೂರು ನಗರದಲ್ಲಿ ಸಾಧ್ಯ ಇದೆಯಾ ಎನ್ನುವ ಪ್ರಶ್ನೆಯೇ ಬೇಡ. ಪ್ರದೀಪ್ ಕುಮಾರ್ ಕಲ್ಕೂರ ಅವರ ಮನೆಯಲ್ಲಿ ದೇಸೀ ಗೋವು ಅದರಲ್ಲೂ ಮಲೆನಾಡು ಗಿಡ್ಡ ಅಂದರೆ ಕರಾವಳಿ ಭಾಗದಲ್ಲಿ ಹಿಂದಿನಿಂದಲೂ ಇದ್ದ ಗೋವು ಅದು. ಸುಮಾರು ವರ್ಷಗಳಿಂದ ದನವನ್ನು ಸಾಕುತ್ತಿದ್ದೇವೆ. ಬಹುದೊಡ್ಡ ಖರ್ಚಿನಿಂದ ನಾಯಿ ಸಾಕುವ ನಮಗೆ ಕಡಿಮೆ ಖರ್ಚಿನಲ್ಲಿ ಬೆಳೆಸಬಹುದಾದ ದನವನ್ನು ಸಾಕಲು ಕಷ್ಟ ಇದೆಯಾ ಎಂದು ಮರುಪ್ರಶ್ನೆ ಮಾಡುತ್ತಾ, ದನ ಸಾಕಾಣಿಕೆಯ ಬಗ್ಗೆ ಮಾತು ಆರಂಭಿಸುತ್ತಾರೆ. ನಗರದಲ್ಲಿ ಹುಲ್ಲನ್ನು ಖರೀದಿ ಮಾಡುತ್ತೇವೆ, ಒಣಹುಲ್ಲು ತರುತ್ತೇವೆ. ಸೆಗಣಿ-ಮೂತ್ರವನ್ನು ತಮ್ಮದೇ ಕೈತೋಟಕ್ಕೆ ಬಳಕೆಯಾಗುತ್ತದೆ. ಅಗತ್ಯ ಇದ್ದರೆ ಆಸುಪಾಸಿನವರೂ ಪಡೆಯುತ್ತಾರೆ. ದೊಡ್ಡ ಕಷ್ಟವೇ ಆಗುವುದಿಲ್ಲ.ಮನೆಯ ಮುಂದೆ ಇರುತ್ತದೆ, ಹಟ್ಟಿ ಎನ್ನುವ ದೊಡ್ಡ ಖರ್ಚು ಕೂಡಾ ಇಲ್ಲ ಎನ್ನುತ್ತಾರೆ ಪ್ರದೀಪ್ ಕುಮಾರ್ ಅವರು.
ದೇಸೀ ತಳಿಯ ದನ ಇರಬೇಕು ಎಂದು ನಮ್ಮದು ಆಸೆ. ಮಲೆನಾಡು ಗಿಡ್ಡ ಅಥವಾ ನಮ್ಮದೇ ಊರ ದನವಾದರೆ ಖರ್ಚುಗಳು ಕಡಿಮೆ, ದೊಡ್ಡ ಕ್ಲೀನಿಂಗ್ ಕೆಲಸವೂ ಇರುವುದಿಲ್ಲ ಎನ್ನುತ್ತಾರೆ. ಮೊದಲು ಇರಬೇಕಾದ್ದು ದನದ ಮೇಲೆ ಪ್ರೀತಿ ಹಾಗೂ ಕಾಳಜಿ. ಇದು ಇದ್ದರೆ ದೊಡ್ಡ ಕಷ್ಟೇ ಇಲ್ಲ, ದನವೊಂದು ಇದ್ದರೆ ಕೈತೋಟವೂ ಆರೋಗ್ಯಪೂರ್ಣವಾಗಿರುತ್ತದೆ , ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಎನ್ನುತ್ತಾರೆ ಪ್ರದೀಪ್ ಕುಮಾರ್ ಕಲ್ಕೂರ.
ಗ್ರಾಮೀಣ ಭಾಗದಲ್ಲಿ ಅಂದರೆ ಹಳ್ಳಿಯಲ್ಲಿ ದನ ಸಾಕಾಣಿಕೆ ಕಡಿಮೆಯಾಗುತ್ತಿರುವ ಸಂದರ್ಭ, ಕಾಳಜಿ ಇದ್ದರೆ ಎಲ್ಲಿ ಬೇಕಾದರೂ ಸಾಕಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಗೋತಳಿ ಉಳಿಯಲು ಇಂತಹ ಕಾಳಜಿಗಳೇ ಕಾರಣವಾಗುತ್ತದೆ.
ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…
2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…
ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…
ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…
ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್ ಪೂರೈಕೆಯ…