MIRROR FOCUS

ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದ ದೇಸಿ ಬೀಜೋತ್ಸವ | 23 ವರ್ಷಗಳಿಂದ ವಿವಿಧ ಸಂಸ್ಥೆಗಳಿಂದ ನಾಟಿ ತರಕಾರಿ ಬೀಜಗಳ ಸಂರಕ್ಷಣೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಿಗೆ ಮನೆಯ ಹಿತ್ತಲಲ್ಲೇ ತರಕಾರಿ(vegetable) ಮಾಡಬೇಕು, ಹಣ್ಣು(Fruits) ಬೆಳಿಬೇಕು ಅನ್ನುವ ಆಸೆ ಇರುತ್ತೆ. ಆದರೆ ಇದರ ಬೀಜಗಳನ್ನು(Seeds) ಎಲ್ಲಿ ಕೊಂಡುಕೊಳ್ಳುವುದು. ಕೆಲವು ಕಡೆ ಸಿಕ್ಕರು ಅದು ಅಸಲಿಯೇ(Original)..? ಅಥವಾ ನಕಲಿಯೇ(Duplicate) ಎಂದು ತಿಳಿಯುವುದು ಹೇಗೆ..? ಮೋಸ(Cheating) ಮಾಡಿದರೆ ಏನು ಮಾಡುವುದು..? ಹಾಗೆ ಕೊಂಡುಕೊಂಡ ಬೀಜ ಮೊಳಕೆ ಬಾರದೆ ಹೋದರೆ ಏನು ಮಾಡುವುದು..? ಹೀಗೆ ಅನೇಕ ಪ್ರಶ್ನೆಗಳು ಮೂಡುತ್ತವೆ. ಅದಕ್ಕಾಗಿಯೇ ದೇಸಿ ಬಿತ್ತನೆ ಬೀಜಗಳ(Desi Seeds) ಮಹತ್ವ ಸಾರಲು ಹಾಗೂ ದೇಸಿ ಆಹಾರ ಪದ್ಧತಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಎರಡು ದಿನ ದೇಸಿ ಬೀಜೋತ್ಸವ(DESI SEEDS FESTIVAL) ಆಯೋಜಿಸಲಾಗಿತ್ತು.

Advertisement

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶಿವಮೊಗ್ಗ ಜಿಲ್ಲೆಯ ಸಾವಯವ ಕೃಷಿಕರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ಮಹಾ ವಿಶ್ವವಿದ್ಯಾನಿಲಯ ಹಾಗೂ ಸಹಜ ಸಮೃದ್ಧ ಸಂಸ್ಥೆ ಮೈಸೂರು, ಉಳಿವು ಫೌಂಡೇಶನ್ ಸಹಯೋಗದೊಂದಿಗೆ ದೇಸಿ ಬೀಜೋತ್ಸವ ಕಾರ್ಯಕ್ರಮ ಜರುಗಿತು. ಬೀಜೋತ್ಸವಕ್ಕೆ ಶಿರಸಿ, ಧಾರವಾಡ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ದೇಸಿ ಬೀಜ ಉತ್ಪಾದಕರು ಆಗಮಿಸಿದ್ದರು. ದೇಸಿ ಬೀಜ ಹಾಗೂ ಆಹಾರ ಧಾನ್ಯವನ್ನು ಮಾರಾಟ ಮಾಡುವವರಿಗೆ ಮಳಿಗೆಗಳನ್ನು ಒದಗಿಸಲಾಗಿತ್ತು. ಇದಲ್ಲದೇ, ನಾವು ಸೇವಿಸುತ್ತಿರುವ ಆಹಾರ ಹೇಗೆ ವಿಷಮಯವಾಗಿದೆ ಮತ್ತು ಪ್ರಸ್ತುತ ದೇಸಿ ಬೀಜಗಳ ಮಹತ್ವ ಎಷ್ಟಿದೆ ಎಂಬುದರ ಬಗ್ಗೆ ತಜ್ಞರು ಉಪನ್ಯಾಸ ನೀಡಿದರು. ಇಲ್ಲಿ ಭತ್ತ, ತರಕಾರಿ, ಸಿರಿಧಾನ್ಯ ಸೇರಿದಂತೆ ಅನೇಕ ಬೆಳೆಯ ದೇಸಿ ಬೀಜಗಳ ಪ್ರದರ್ಶನ ಮಾಡಲಾಯಿತು.

ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ: ದೇಸಿ ಬೀಜೋತ್ಸವನ್ನು ಎರಡು ದಿನ ನಡೆಸಲಾಯಿತು‌. ಇದಕ್ಕೆ ಸಾರ್ವಜನಿಕರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿಗೆ ಬಂದವರು ದೇಸಿ ಬೀಜವನ್ನು ಹೇಗೆ ತಯಾರಿಸಬೇಕು, ಬಳಕೆ ಹಾಗೂ ಮಹತ್ವದ ಬಗ್ಗೆ ತಿಳಿದುಕೊಂಡರು. ಅಲ್ಲದೇ ಕೆಲವರು ದೇಸಿ ಬೀಜಗಳನ್ನು ಖರೀದಿಸಿದರು. ದೇಸಿ ಬೀಜೋತ್ಸವ ಆಯೋಜಕರಲ್ಲಿ ಒಬ್ಬರಾದ ಸಂತೋಷ್ ನಾಯ್ಕ್ ಮಾತನಾಡಿ, ದೇಸಿ ಬೀಜೋತ್ಸವ ಎಂಬ ಹೆಸರಿನಲ್ಲಿ ಶಿವಮೊಗ್ಗ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಸಾವಯವ ಕೃಷಿಕರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ಮಹಾ ವಿಶ್ವವಿದ್ಯಾನಿಲಯ ಹಾಗೂ ಸಹಜ ಸಮೃದ್ಧ ಸಂಸ್ಥೆ ಮೈಸೂರು, ಉಳಿವು ಫೌಂಡೇಶನ್ ಸಹಯೋಗದೊಂದಿಗೆ ದೇಸಿ ಬೀಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದರು.

ಪ್ರಸ್ತುತ ನಾವು ತಿನ್ನುತ್ತಿರುವ ಆಹಾರ ಸಂಪೂರ್ಣ ಹೈಬ್ರಿಡ್ ಬೀಜಗಳದ್ದು, ಹೈಬ್ರಿಡ್ ಸೀಡ್ಸ್​ ಎಂದ ಮೇಲೆ ಅನಿವಾರ್ಯವಾಗಿ ಕೆಮಿಕಲ್​ ಕೃಷಿ ಮಾಡಲೇಬೇಕು. ದೇಸಿ ಬೀಜಗಳಲ್ಲಿ ಕೆಮಿಕಲ್​ ಇಲ್ಲದೆಯೇ ಬೆಳೆಯುವ ಸಾಮರ್ಥ್ಯ ಇರುತ್ತದೆ ಹಾಗೂ ಈ ಬೀಜಗಳಿಂದ ನಮ್ಮ ದೇಹಕ್ಕೆ ಬೇಕಾಗುವ ಸತ್ವಗಳು ಮತ್ತು ಪೋಷಕಾಂಶಗಳು ಸಿಗುತ್ತವೆ. ಆದ್ದರಿಂದ ರೈತರು ಕೃಷಿಯಲ್ಲಿ ದೇಸಿ ಬೀಜಗಳನ್ನು ಬಳಸಬೇಕು ಮತ್ತು ಶಿವಮೊಗ್ಗ ನಗರದ ಜನತೆ ದೇಸಿ ಆಹಾರ ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ಸಾವಯವ ಕೃಷಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಬೀಜೋತ್ಸವದಲ್ಲಿ ಭಾಗವಹಿಸಿದ್ದ ದೇಸಿ ಬೀಜ ಮಾರಾಟಗಾರರಾದ ಶಿರಸಿಯ ವನಸ್ತ್ರೀ ಸಂಸ್ಥೆಯ ಸಂತೋಷ್ ನಾಯಕ್ ಮಾತನಾಡಿ, ಕಳೆದ 23 ವರ್ಷಗಳಿಂದ ನಮ್ಮ ಸಂಸ್ಥೆ ನಾಟಿ ತರಕಾರಿ ಬೀಜಗಳನ್ನು ಸಂರಕ್ಷಣೆ ಮಾಡುತ್ತಿದೆ. ನಾಟಿ ಸಾಂಪ್ರದಾಯಿಕ ತಳಿಗಳನ್ನು ಉಳಿಸಬೇಕು ಎಂಬ ಉದ್ದೇಶದಿಂದ ನಾವು ಈ ಬೀಜಗಳನ್ನು ಸಂರಕ್ಷಣೆ ಮಾಡುತ್ತಿದ್ದೇವೆ. ಶಿರಸಿಯ ಸುತ್ತಮುತ್ತಲ 35 ಹಳ್ಳಿಗಳಲ್ಲಿ 35 ಮಂದಿ ಬೀಜ ಸಂಗ್ರಹಕರನ್ನು ಗುರುತಿಸಿದ್ದೇವೆ. ಅವರು ತಮ್ಮ ಕೈತೋಟದಲ್ಲಿ ಬೆಳೆದ ತರಕಾರಿ ಬೀಜಗಳನ್ನು ಸಂಗ್ರಹಿಸಿ ನಮ್ಮ ಬೀಜ ಭಂಡಾರಕ್ಕೆ ನೀಡುತ್ತಾರೆ. ನಾವು ಬೀಜಗಳನ್ನು ಸಂಸ್ಕರಣೆ ಮತ್ತು ವಿಂಗಡಣೆ ಮಾಡಿ ಬೇರೆ ಕಡೆಗೆ ಹಂಚುತ್ತೇವೆ ಎಂದು ತಿಳಿಸಿದರು. ದೇಸಿ ಬೀಜೋತ್ಸವದಲ್ಲಿ ಸಾಕಷ್ಟು ರೈತರನ್ನು ಭೇಟಿಯಾಗಲು ಸಹಾಯವಾಗಿದೆ. ಜೊತೆಗೆ ಈ ಬೀಜಗಳನ್ನು ಹೆಚ್ಚು ಜನರಿಗೆ ತಲುಪಿಸಲು ಅನುಕೂಲವಾಗಿದೆ. ನಾಟಿ ತಳಿಗಳ ಮಹತ್ವವನ್ನು ತಿಳಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಮುಂಗಾರು ಪ್ರಾರಂಭವಾಗಿರುವುದರಿಂದ ಬೀಜಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ ಎಂದು ಹೇಳಿದರು.

ದೇಸಿ ಬೀಜೋತ್ಸವ ವೀಕ್ಷಣೆಗೆ ಆಗಮಿಸಿದ್ದ ಕೃಷಿಕ ರೋಡಿಗ್ರೇಸ್ ವಿನ್ಸೆಂಟ್ ಮಾತನಾಡಿ, ದೇಸಿ ಬೀಜೋತ್ಸವ ಹಾಗೂ ದೇಸಿ ಆಹಾರ ಮೇಳವನ್ನು ಮುಂಗಾರು ಮಳೆ ಪ್ರಾರಂಭವಾಗುವ ಸಮಯದಲ್ಲಿ ನಡೆಸಿದ್ದಕ್ಕೆ ಸಂತೋಷವಾಗಿದೆ‌. ಇಲ್ಲಿ ಸುಮಾರು 250ಕ್ಕೂ ಹೆಚ್ಚು ದೇಸಿ ಭತ್ತದ ತಳಿಗಳನ್ನು ನೋಡಿ ಸಂತಸವಾಯಿತು. ವೈವಿಧ್ಯಮಯವಾದ ಬೀಜಗಳು ಇಲ್ಲಿ ಇದ್ದವು. ಇಲ್ಲಿ ವಿಷಮುಕ್ತ ಆಹಾರದ ಮಹತ್ವವನ್ನು ತಿಳಿದುಕೊಂಡೆ, ವಿಷಮುಕ್ತ ಆಹಾರ ತಿಂದು ನಮ್ಮ ಹಿರಿಯರು ನೂರಾರು ವರ್ಷ ಬದುಕಿದ್ದರು. ಈಗ ವಿಷಯುಕ್ತ ಆಹಾರ ಸೇವಿಸಿ 20 ವರ್ಷಕ್ಕೆ ಹೃದಯಾಘಾತಕ್ಕೆ‌ ಒಳಗಾಗುತ್ತಿದ್ದಾರೆ. ಅಲ್ಲದೇ ಕ್ಯಾನ್ಸರ್​ಗೆ ತುತ್ತಾಗುತ್ತಿದ್ದಾರೆ ಎಂದು ವೈದ್ಯ ಲೋಕಕ್ಕೆ ಇನ್ನೂ ಗೂತ್ತಾಗುತ್ತಿಲ್ಲ. ನಾವು ಪ್ರತಿದಿನ ತಿನ್ನುತ್ತಿರುವುದು ವಿಷ. ನಾವು ಹೆಚ್ಚು ಆಹಾರ ಬೇಕು ಎಂದು ಭೂಮಿಗೆ ವಿಷ ಹಾಕುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

19 minutes ago

“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್

ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…

28 minutes ago

ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ | ಭಾರತದಲ್ಲಿ ಪಾಕ್ ಸರ್ಕಾರದ ಸಾಮಾಜಿಕ ಜಾಲತಾಣ ನಿಷೇಧ

ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…

33 minutes ago

ರಾಜ್ಯದಲ್ಲಿ ಒಂದು ವಾರ ಗುಡುಗು ಸಹಿತ ಮಳೆ ಸಾಧ್ಯತೆ | 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ

ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…

37 minutes ago

ಮೇ ಮೊದಲ ವಾರ ಲಕ್ಷ್ಮಿ ನಾರಾಯಣ ಯೋಗ, ಯಾವ ರಾಶಿಗಳಿಗೆ ಲಾಭ.!

ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

44 minutes ago

ಹವಾಮಾನ ವರದಿ | 27-04-2025 | ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆ | ಎ.28 ರಿಂದ ಮಳೆಯ ಪ್ರಮಾಣ ಕಡಿಮೆ |

ಈಗಿನಂತೆ ಎಪ್ರಿಲ್ 29 ಅಥವಾ 30ರಿಂದ ಕರಾವಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ…

18 hours ago