Advertisement
ಪರಿಸರ

ಜೇನುನೊಣಗಳಿಂದ ನಿಮ್ಮ ಹತ್ತಿರದ ಪರಿಸರ ಮಾಲಿನ್ಯ ಪತ್ತೆ…! | ಜೇನುತುಪ್ಪದ ಮೂಲಕ ಪರಿಸರ ಮಾಲಿನ್ಯದ ಸುಳಿವು..! |

Share

ಜೇನುಹುಳ ಹಾಗೂ ಜೇನುತುಪ್ಪವು ನಿಮ್ಮ ಹತ್ತಿರದ ಪರಿಸರ ಮಾಲಿನ್ಯದ ಸುಳಿವನ್ನು ನೀಡುತ್ತದೆ ಎಂದು  ಯುನೈಟೆಡ್  ಸ್ಟೇಟ್ಸ್ ನ  ತುಲೇನ್ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನ ಹೇಳಿದೆ.…..ಮುಂದೆ ಓದಿ….

ಯುನೈಟೆಡ್ ಸ್ಟೇಟ್ಸ್ನಾದ್ಯಂತ 260 ಜೇನುತುಪ್ಪದ ಮಾದರಿಗಳ ಅಧ್ಯಯನದಲ್ಲಿ ವಿಷಕಾರಿ ಲೋಹ ಇರುವುದು ಪತ್ತೆಯಾಗಿದೆ ಹಾಗೂ ಪ್ರಾದೇಶಿಕ ವ್ಯತ್ಯಾಸಗಳಲ್ಲಿ ಈ ವಿಷಕಾರಿ ಅಂಶಗಳಲ್ಲೂ ಬದಲಾವಣೆ ಕಂಡಿದೆ. ಇದು ಪರಿಸರ ಮಾಲಿನ್ಯವನ್ನು ಎತ್ತಿ ತೋರಿಸುವ ಅಂಶವಾಗಿದೆ ಎಂದು ವರದಿ ಹೇಳಿದೆ. ಸಾಮಾನ್ಯವಾಗಿ ಜೇನುತುಪ್ಪದಲ್ಲಿ ಸ್ಥಳೀಯ ಪರಿಸರದ ಅಂಶದ ಪ್ರಭಾವ ಇರುತ್ತದೆ. ಜೇನಿನ ರುಚಿ, ಅದರ  ಸಿಹಿ ಹಾಗೂ ಸುವಾಸನೆಯು ಆಯಾ ಪ್ರದೇಶದ ಹತ್ತಿರದ ಹೂವುಗಳ ಕಾರಣದಿಂದ ನಿರ್ಧಾರವಾಗುತ್ತದೆ. ಆದರೆ, ತುಲೇನ್ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನವು ಜೇನುತುಪ್ಪವು ಹತ್ತಿರದ ಮಾಲಿನ್ಯದ ಒಂದು ನೋಟವನ್ನು ಕೂಡಾ ನೀಡುತ್ತದೆ ಎಂದು ಕಂಡುಹಿಡಿದಿದೆ.

ಪರಿಸರ ಮಾಲಿನ್ಯದ ಬಗ್ಗೆ ನಡೆಸಿರುವ ಅಧ್ಯಯನದಲ್ಲಿ ಆರು ವಿಷಕಾರಿ ಲೋಹಗಳ ಅಂಶಗಳು ಯುನೈಟೆಡ್ ಸ್ಟೇಟ್ಸ್ ನ  48 ರಾಜ್ಯಗಳಿಂದ 260 ಜೇನು ಮಾದರಿಗಳಿಂದ ಬೆಳಕಿಗೆ ಬಂದಿದೆ. ಆರ್ಸೆನಿಕ್, ಸೀಸ, ಕ್ಯಾಡ್ಮಿಯಮ್, ನಿಕಲ್, ಕ್ರೋಮಿಯಂ ಮತ್ತು ಕೋಬಾಲ್ಟ್ ಅಂಶಗಳು ಹೆಚ್ಚಾಗಿ ಕಂಡುಬಂದಿದೆ ಎಂದು ವರದಿ ಹೇಳಿದೆ. ಆದರೆ ಯಾವುದೇ ಜೇನುತುಪ್ಪವು ವಿಷಕಾರಿ ಲೋಹಗಳ ಅಸುರಕ್ಷಿತ ಮಟ್ಟವನ್ನು ತೋರಿಸಲಿಲ್ಲ.

ಸಂಶೋಧಕರು ವಿಷಕಾರಿ ಲೋಹದ ಅಂಶಗಳಲ್ಲಿ ಪ್ರಾದೇಶಿಕ ವ್ಯತ್ಯಾಸಗಳನ್ನು ಕಂಡುಕೊಂಡಿದ್ದಾರೆ. ಪೆಸಿಫಿಕ್ ವಾಯುವ್ಯ  ರಾಜ್ಯಗಳ ಸಮೂಹದಿಂದ ಜೇನುಗಳಲ್ಲಿ ಅತ್ಯಧಿಕ ಆರ್ಸೆನಿಕ್ ಮಟ್ಟಗಳು ಕಂಡುಬಂದಿವೆ. ಲೂಯಿಸಿಯಾನ ಮತ್ತು ಮಿಸ್ಸಿಸ್ಸಿಪ್ಪಿ ಸೇರಿದಂತೆ ಆಗ್ನೇಯದಲ್ಲಿ ಕೋಬಾಲ್ಟ್ ಮಟ್ಟ ಅಧಿಕವಾಗಿತ್ತು. ಹೀಗಾಗಿ ಜೇನುತುಪ್ಪವು ಸ್ಥಳೀಯವಾದ ಪರಿಸರ ಮಾಲಿನ್ಯದ ಪ್ರಭಾವವನ್ನು ಎತ್ತಿ ತೋರಿಸುತ್ತದೆ.

ಜೇನುನೊಣಗಳು ಆಹಾರ ಹುಡುಕುವಾಗ ಗಾಳಿ, ನೀರು ಮತ್ತು ಸಸ್ಯಗಳಿಂದ ಮಾಲಿನ್ಯಕಾರಕಗಳನ್ನೂ ಸಂಗ್ರಹಿಸುತ್ತದೆ. ಈ ಮಾಲಿನ್ಯಕಾರಕಗಳು ಜೇನುತುಪ್ಪದಲ್ಲಿ ಉಳಿದುಕೊಳ್ಳುತ್ತದೆ. ಇದು ಆಯಾ ಪ್ರದೇಶದ ಪರಿಸರ ಮಾಲಿನ್ಯದ ಚಿತ್ರಣವನ್ನು ನಮಗೆ ನೀಡುತ್ತದೆ ಎನ್ನುತ್ತಾರೆ  ತುಲೆನ್‌ ವಿಶ್ವವಿದ್ಯಾಲಯದ ಸಿಲಿಯಾ  ಪರಿಸರ ಆರೋಗ್ಯ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಟೆವೊಡ್ರೊಸ್ ಗೊಡೆಬೊ. ಜೇನುತುಪ್ಪದಲ್ಲಿ ಕಂಡುಬರುವ ಮಾಲಿನ್ಯವನ್ನು ಅವುಗಳ ಮೂಲಗಳೊಂದಿಗೆ ಇನ್ನಷ್ಟು  ಅಧ್ಯಯನದ ಅಗತ್ಯವಿದೆ. ಏಕೆಂದರೆ ಜೇನುನೊಣಗಳ ಮೂಲಕ ಜೇನುತುಪ್ಪದಲ್ಲಿ ಈ ಅಂಶ ಕಂಡುಬರುವುದಕ್ಕಿಂತ ಹೆಚ್ಚಿನ ಲೋಹಗಳನ್ನು ಪರಿಸರವು ಹೊಂದಿರಬಹುದು ಎನ್ನುತ್ತಾರೆ.

ಪ್ರಾದೇಶಿಕ ಮಾಲಿನ್ಯದ ಮಾದರಿಗಳನ್ನು  ಪತ್ತೆ ಮಾಡಲು ಜೇನುಹುಳ ಹಾಗೂ ಜೇನುತುಪ್ಪ ಉತ್ತಮ ಮಾದರಿಗಳಾಗಿವೆ. ಆದರೆ ಪರಿಸರದಲ್ಲಿ ಯಾವ ಮಾಲಿನ್ಯಕಾರಕಗಳು ಇರುತ್ತವೆ ಮತ್ತು ಅವು ಆಯಾ ಪ್ರದೇಶದ ಸಮುದಾಯದ ಜನರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತಿವೆ ಎಂಬುದರ ಬಗ್ಗೆ ಹೆಚ್ಚು ಮಾಹಿತಿಯನ್ನು ಜೇನುನೊಣಗಳಿಂದ ನಾವು ಇನ್ನೂ ಬಹಳಷ್ಟು ಕಲಿಯಬಹುದು ಎನ್ನುತ್ತದೆ ವರದಿಗಳು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

23 hours ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

2 days ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

3 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

3 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

3 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

3 days ago