ದೇವಚಳ್ಳ ಗ್ರಾಮದ ಹೊನ್ನೆಮೂಲೆ ಮಾವಿನಗೊಡ್ಲು ರಸ್ತೆಯಲ್ಲಿ ನೂತನ ಕಾಂಕ್ರೀಟೀಕರಣಗೊಂಡ ಕಾಮಗಾರಿಯು ಉದ್ಘಾಟನೆಗೊಂಡಿತು. ಗ್ರಾ ಪಂ ಸದಸ್ಯ ಶೈಲೇಶ್ ಅಂಬೆಕಲ್ಲು ಮತ್ತು ಊರಿನವರ ಉಪಸ್ಥಿತಿಯಲ್ಲಿ ಬಳಕೆಗೆ ಅನುವು ಮಾಡಲಾಯಿತು.
ಸ್ಥಳೀಯರಾದ ಹೊನ್ನಪ್ಪ ಗೌಡ ಹೊನ್ನೆಮೂಲೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕೆ ಚಾಲನೆ ನೀಡಿದರು, ಶೇಷಮ್ಮ ಹೊನ್ನೆಮೂಲೆ ರಿಬ್ಬನ್ ತುಂಡರಿಸಿದರು. ಲಿಂಗಪ್ಪ ಗೌಡ ಮಾವಿನಗೊಡ್ಲು ತೆಂಗಿನಕಾಯಿ ಒಡೆಯವ ಮೂಲಕ ರಸ್ತೆಯನ್ನು ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಡಲಾಯಿತು.
ಗ್ರಾ ಪಂ ಸದಸ್ಯ ಶೈಲೇಶ್ ಅಂಬೆಕಲ್ಲು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೋಹಿತ್ ಮಾವಿನಗೊಡ್ಲು ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ನಾರಾಯಣ ಗೌಡ ಮಾವಿನಗೊಡ್ಲು, ಬಾಲಕೃಷ್ಣ ಹೊನ್ನೆಮೂಲೆ, ಗಂಗಾಧರ ಮಾವಿನಗೊಡ್ಲು, ರಾಧಾಕೃಷ್ಣ ಮಾವಿನಗೊಡ್ಲು, ಉಮೇಶ್ ಹೊನ್ನೆಮೂಲೆ, ಹಾಗೂ ಹೊನ್ನೆಮೂಲೆ ಮಾವಿನಗೊಡ್ಲು ಪರಿಸರದ ರಸ್ತೆಯ ಫಲಾನುಭವಿಗಳೆಲ್ಲರೂ ಉಪಸ್ಥಿತರಿದ್ದರು.
ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್ನಲ್ಲಿ…
ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…
ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…