ದೇವಚಳ್ಳ | ಮೂಲಭೂತ ಹಕ್ಕಿಗಾಗಿ ಕಚೇರಿಗೆ ಅಲೆದಾಡಿದ ಯುವಕನಿಗೆ ಸಿಗದ ಸೌಲಭ್ಯ | ಸೀಎಂಗೆ ಮನವಿ ಮಾಡಿರುವ ವಿಡಿಯೋ ವೈರಲ್‌ |

May 22, 2022
4:13 PM
News Flash
| ದೇವಚಳ್ಳ ಗ್ರಾಮದ ಎಲಿಮಲೆಯ ಯುವಕ ಶರತ್ ಕುಮಾರ್‌ ಅವರಿಂದ ಮುಖ್ಯಮಂತ್ರಿಗಳಿಗೆ ಮನವಿ | ವಿಡಿಯೋ ವೈರಲ್‌ | ಮೂಲಭೂತ ಅವಶ್ಯಕತೆಗೆ ಸ್ಥಳೀಯ ಪಂಚಾಯತ್‌ ಅಲೆದಾಡಿಸಿದೆ ಎನ್ನುವುದು  ಯುವಕನ ವಿಷಾದ |

ಸುಳ್ಯದಲ್ಲಿ  ಮತ್ತೊಂದು ವಿಡಿಯೋ ವೈರಲ್‌ ಆಗಿದೆ. ಎರಡು ವಾರಗಳ ಹಿಂದೆ ಸುಳ್ಯ ನಗರದ ಕಸದ ಬಗ್ಗೆ ಚಿತ್ರನಟ, ಸಾಮಾಜಿಕ ಕಾರ್ಯಕರ್ತ ಅನಿರುದ್ಧ ಅವರು ಮಾಡಿರುವ ವಿಡಿಯೋ ವೈರಲ್‌ ಆಗಿತ್ತು. ಇಡೀ ರಾಜ್ಯಾದ್ಯಂತ ಚರ್ಚೆಯೂ ಆಗಿತ್ತು. ಇದೀಗ ದೇವಚಳ್ಳ ಗ್ರಾಮದ ಯುವಕನೊಬ್ಬ ಕಚೇರಿಗೆ ಅಲೆದು ಅಲೆದು ಯಾವುದೇ ಫಲ ಸಿಗದೆ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಡಿರುವ ಮನವಿಯ ವಿಡಿಯೋ ಕೂಡಾ ವೈರಲ್‌ ಆಗಿದೆ. 

Advertisement

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಅಂಬೆಕಲ್ಲು ನಿವಾಸಿ ಶರತ್‌ ಕುಮಾರ್‌ ಅವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಕಳೆದ ಕೆಲವು ಸಮಯದ ಹಿಂದೆ ಮಕ್ಕಳಿಗೆ ಶಿಕ್ಷಣ ಹಾಗೂ ಕೃಷಿಯ ಉದ್ದೇಶದಿಂದ ಊರಿಗೆ ಮರಳಿದ್ದರು. ಎಲಿಮಲೆ ಬಳಿ ನಿವೇಶನ ಖರೀದಿ ಮಾಡಿದ್ದರು. ಹಲವು ಬಾರಿ ಅಲೆದಾಟದ ಬಳಿಕ ನಿವೇಶನ ಕನ್ವರ್ಶನ್‌ ಮಾಡಿಸಿಕೊಂಡಿದ್ದರು. ಅದಾದ ಬಳಿಕ ಅಲ್ಲಿಯೇ ವಾಸ ಇದ್ದು 9/11 ಗೆ ಪಡೆಯಲು ಅಲೆದಾಟ ಮಾಡುತ್ತಲೇ ಇದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್‌ ಗೆ ಹಲವು ಬಾರಿ  ಹೋದರೂ ನಿವೇಶನ 9/11  ಹಾಗೂ ಮನೆ ನಂಬರ್‌ ದೊರೆತಿಲ್ಲ. ಇದರಿಂದಾಗಿ ಮನೆ ಪೂರ್ಣಗೊಳಿಸಲು ಬೇಕಾದ ಬ್ಯಾಂಕ್‌ ಸಾಲ ಮಾಡಲೂ ಸಾಧ್ಯವಾಗಿಲ್ಲ. ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಕೂಡಾ ಸಾಧ್ಯವಾಗಿಲ್ಲ. ಹೀಗಾಗಿ ವ್ಯವಸ್ಥೆಯ ಬಗ್ಗೆ ರೋಸಿ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಅವರ ಗಮನ ಸೆಳೆಯಲು ಮನವಿ ಮಾಡಿದ್ದರು. ಇದೀಗ ಈ ವಿಡಿಯೋ ಸಾಕಷ್ಟು ವೈರಲ್‌ ಆಗಿದೆ. ಹಲವು ಮಂದಿ ಶರತ್‌ ಕುಮಾರ್‌ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಇಂತಹ ಸಮಸ್ಯೆ ಕೃಷಿ ಹಾಗೂ ಗ್ರಾಮೀಣ ಭಾಗವನ್ನು ನೆಚ್ಚಿ ಬಂದಿರುವ ನನ್ನಂತಹವರಿಗೆ, ಸಮಾಜದಲ್ಲಿನ ಬಡವರಿಗೆ ಬಾರದೇ ಇರಲಿ ಎಂದು  ಮನವಿ ಮಾಡಿದ್ದಾರೆ ಶರತ್‌ ಕುಮಾರ್.‌

ಸುಳ್ಯದಲ್ಲಿ  ಕಳೆದ ವಾರ ಕಸದ ಬಗ್ಗೆಯೂ ಇದೇ ಮಾದರಿಯ ಚರ್ಚೆಯಾಗಿತ್ತು. ಸುಳ್ಯದ ಸುಪ್ರೀತ್‌ ಮೋಂಟಡ್ಕ ಅವರು ಚಿತ್ರನಟ ಅನಿರುದ್ಧ ಅವರ ಗಮನಕ್ಕೆ ಸುಳ್ಯದ ಕಸದ ಬಗ್ಗೆ ಗಮನಕ್ಕೆ ತಂದಿದ್ದರು. ಈ ಬಗ್ಗೆ ಅನಿರುದ್ಧ ಅವರು ಸಾಮಾಜಿಕ ಕಾಳಜಿಯ ಹಿನ್ನೆಲೆಯಲ್ಲಿ ವಿಡಿಯೋ ಮಾಡಿ ಗಮನ ಸೆಳೆದಿದ್ದರು. ಆ ವಿಡಿಯೋ ಕೂಡಾ ವೈರಲ್‌ ಆಗಿತ್ತು.

ಸುಳ್ಯದಲ್ಲಿ ಇಲಾಖೆಗಳಿಂದ ತೊಡಗಿ ಹಲವು ಮೂಲಭೂತ ಸಮಸ್ಯೆಗಳಿಗೆ ಮುಕ್ತಿ ಸಿಗದೇ ಇರುವುದು ಇದೀಗ ಜನರೇ ಅಸಹನೆ ವ್ಯಕ್ತಪಡಿಸುವಂತಾಗಿದೆ. ಸುಳ್ಯದ ಹಲವು ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ  ಆಗಾಗ ಚರ್ಚೆಯಾಗುತ್ತಿದೆ. ಆದರೂ ಪರಿಹಾರ ಮಾತ್ರಾ ಕಾಣುತ್ತಿಲ್ಲ.

ಗ್ರಾಮೀಣ ಭಾಗ, ಕೃಷಿಯ ಕಡೆಗೆ ಆಸಕ್ತರಾಗಿ , ಮಕ್ಕಳ ಶಿಕ್ಷಣದ ಕಡೆಗೂ ಗಮನಹರಿಸಿ ಊರಿಗೆ ಮರಳಿರುವ ಯುವಕನೊಬ್ಬ ಸಂಕಷ್ಟ ಪಡುವಂತಾಗಿದೆ. ಆತ್ಮನಿರ್ಭರ ಹೆಸರಿನಲ್ಲಿ ಯುವಕರು ಹಳ್ಳಿಯಲ್ಲಿ ನೆಲೆಯೂರಲು ಬೇಕಾದ ವ್ಯವಸ್ಥೆ ಮಾಡಿಸಲಾಗುತ್ತದೆ ಎನ್ನುವ ಯಾರೊಬ್ಬರೂ ಶರತ್‌ ಅವರ ಸಮಸ್ಯೆ ನಿವಾರಣೆಗೆ ಮುಂದಾಗದೇ ಇರುವುದು  ದೌರ್ಭಾಗ್ಯ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಬ್ಬಿಗೆ ದರ ನಿಗದಿ ಮಾಡುವಂತೆ ಭಾಕಿಸಂ ಒತ್ತಾಯ
July 21, 2025
7:11 AM
by: The Rural Mirror ಸುದ್ದಿಜಾಲ
ಹರಳು ರೂಪದ ಯೂರಿಯ ಬದಲಾಗಿ ನ್ಯಾನೋ ಯೂರಿಯಾ ಬಳಕೆಗೆ ರೈತರಿಗೆ ಸಲಹೆ
July 21, 2025
6:58 AM
by: The Rural Mirror ಸುದ್ದಿಜಾಲ
ಲಕ್ ಪತಿ ದೀದಿ ಯೋಜನೆ | ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿ
July 21, 2025
6:52 AM
by: The Rural Mirror ಸುದ್ದಿಜಾಲ
ಆರೋಗ್ಯದಲ್ಲಿ ಈ ರಾಶಿಯವರಿಗೆ ಆಹಾರದ ಕ್ರಮದಿಂದ ಲಾಭ
July 21, 2025
6:39 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group