ಅನುಕ್ರಮ

ಊರಿನ ಅಭಿವೃದ್ಧಿ ಎಂದರೆ ಪೇಟೆ ವಿಸ್ತರಿಸುವುದೇ…? ಕೃಷಿಕ ಎ ಪಿ ಸದಾಶಿವ ಮರಿಕೆ ಕೇಳುತ್ತಾರೆ….|

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇತ್ತೀಚೆಗೆ ಪತ್ರಿಕೆಗಳಲ್ಲಿ ಪುತ್ತೂರಿನ ಸುದ್ದಿ ಬರುವಾಗ ಮಾಮೂಲಾಗಿ ಬರುವುದು ಜಿಲ್ಲಾ ಕೇಂದ್ರವಾಗಲು ಹೊರಟ ಪುತ್ತೂರು ಎಂಬ ವಿಶ್ಲೇಷಣೆಯೊಂದಿಗೆ. ಈ ಉಪನಾಮ ಪುತ್ತೂರಿಗೆ ಯಾಕೆ ಸೇರಿಕೊಳ್ಳುತ್ತದೆ ಎಂದು ನನಗೆ ಅರ್ಥ ಆಗಲಿಲ್ಲ. ಹಾಗಾಗಿ ನನ್ನ ಮತಿಗೆ ಹೊಳೆದ ಒಂದೆರಡು ಮಾತುಗಳನ್ನು ಈ ಬಗ್ಗೆ ಬರೆಯುತ್ತಿದ್ದೇನೆ.

Advertisement
Advertisement

ನಾನೋರ್ವ ಪುತ್ತೂರಿನ ಸಮೀಪದ ಹಳ್ಳಿಯವನಾಗಿ, ಓರ್ವ ಕೃಷಿಕನಾಗಿ ನನ್ನ ಅಭಿಪ್ರಾಯವನ್ನು ಪ್ರಸ್ತುತಪಡಿಸುತ್ತಿದ್ದೇನೆ.

ಒಂದು ಊರಿನ ಅಭಿವೃದ್ಧಿ ಎಂದರೆ ಪೇಟೆ ವಿಸ್ತರಿಸುವುದು, ಕಟ್ಟಡಗಳನ್ನು ಬೆಳೆಸುವುದು, ಮಾರ್ಗಗಳನ್ನು ಅಗಲ ಮಾಡುವುದು, ಅಧಿಕಾರಿಗಳ ಮತ್ತು ಅಧಿಕಾರದ ಹೊಸ ವ್ಯವಸ್ಥೆಯೊಂದನ್ನು ತಯಾರು ಮಾಡುವುದು ಅಲ್ಲ ಎಂದು ನನ್ನ ಭಾವನೆ. ನಮ್ಮ ಪುತ್ತೂರನ್ನು ಒಂದು ಜಿಲ್ಲಾ ಕೇಂದ್ರವಾಗಿಸಬೇಕಾದರೆ ಅಲ್ಲಿಗೆ ಜಿಲ್ಲಾಡಳಿತ ಕಚೇರಿ ಮತ್ತು ಅದಕ್ಕೆ ಬೇಕಾದ ಸಹ ಕಚೇರಿಗಳು ಅಗತ್ಯ. ಇಂತಹ ಕಚೇರಿಗಳಿಗೆ ಅನಂತ ಕಟ್ಟಡಗಳು ಬರಬೇಕಾಗುತ್ತದೆ ಮತ್ತು ಕಟ್ಟಡಗಳಿಗೆ ಅದೆಷ್ಟೋ ಕೋಟಿ ರೂ ಹಣ ವ್ಯಯಿಸಬೇಕಾಗುತ್ತದೆ. ಹೊಸತೊಂದು ಜಿಲ್ಲಾಧಿಕಾರಿ ಮತ್ತು ಅವರ ಸಹ ಅಧಿಕಾರಿವರ್ಗ, ಮತ್ತೊಂದು ಜಿಲ್ಲಾ ಪಂಚಾಯತ್ ಇದಕ್ಕೆಲ್ಲಾ ವ್ಯಯಿಸುವ ಹಣ ಉಳಿಸಿದರೆ ಅದೆಷ್ಟೋ ಹಳ್ಳಿಗಳನ್ನು ಅಭಿವೃದ್ಧಿಪಡಿಸಬಹುದು. ಒಂದು ದೇಶಕ್ಕೆ ಜನಸಂಖ್ಯೆ ಜಾಸ್ತಿಯಾಯಿತು ಎಂದು ದೇಶವನ್ನು ಎರಡು ಮಾಡಲುಂಟೇ? ಎರಡು ಪ್ರಧಾನಿಯನ್ನು ಮಾಡಲು ಉಂಟೆ? ತಾಲೂಕು ತಾಲೂಕನ್ನು ಜಿಲ್ಲಾ ಕೇಂದ್ರವಾಗಿಸಿದರೆ ದೇಶಕ್ಕೆ ಇದನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಉಂಟೇ?

ಜನ ಸಂಖ್ಯೆ ಹೆಚ್ಚಾದಾಗ ಮೂಲಭೂತ ಅಗತ್ಯತೆಗಳನ್ನು ಹೆಚ್ಚು ಮಾಡಬೇಕೇ ವಿನಹ: ಜಿಲ್ಲೆಯನ್ನು ಒಡೆದು ಇನ್ನೊಂದು ಜಿಲ್ಲೆ ಮಾಡುವುದು ಅಲ್ಲ. ಜನಸಂಖ್ಯೆ ಆಧಾರಿತ ಜನಪ್ರತಿನಿಧಿಗಳನ್ನು ಹೆಚ್ಚುಮಾಡಲಿ. ಹಳ್ಳಿ ಹಳ್ಳಿಗಳನ್ನು ಪೇಟೆಗಳಾಗಿ ವಿಸ್ತರಿಸುತ್ತಾ ಹೋದಲ್ಲಿ ಹಳ್ಳಿಗಳಲ್ಲಿ ನಿಂಬವರು ಯಾರು? ಕೃಷಿಯಾಗಿ, ಮರವೆದ್ದು ಪ್ರಕೃತಿಯ ಸಮತೋಲವನ್ನು ಕಾಯ್ದುಕೊಳ್ಳಬೇಕಾದ ಜಾಗಗಳು, ಕಾಂಕ್ರೀಟು ಕಾಡುಗಳಾದರೆ ಮನುಷ್ಯನಿಗೆ ಉಳಿಗಾಲ ಉಂಟೆ? ಕೃಷಿ ಭೂಮಿಗಳು ನಗರಗಳಾಗಿ ಪರಿವರ್ತನೆ ಆಗುವ ಅಗತ್ಯ ಇದೆಯೇ? ನವದೆಹಲಿಯಂತಹ ನಗರಗಳು ವಾತಾವರಣದ ಮಾಲಿನ್ಯದಿಂದ ಪರಿತಪಿಸುತ್ತಿರುವುದು ನಮ್ಮ ಕಣ್ಣಮುಂದಿದೆ. ಇನ್ನೂ ಅಂತಹ ನಗರಗಳ ಸೃಷ್ಟಿ ಬೇಕೆ?

ಅಭಿವೃದ್ಧಿಯಾಗ ಬೇಕಾದುದು ಹಳ್ಳಿಗಳೇ ವಿನಹ ಪೇಟೆಗಳಲ್ಲ. ಅದು ಕೂಡ ಕಟ್ಟಡಗಳ ಮುಖಾಂತರವಲ್ಲ. ಮೂಲಭೂತ ಸೌಕರ್ಯಗಳಾದ ಮಾರ್ಗಗಳು ಮತ್ತು ಶಾಲೆಗಳು ಸಣ್ಣ ಸಣ್ಣ ಆಸ್ಪತ್ರೆಗಳು. ಇಂದು ನಾವು ಹಳ್ಳಿಯ ಶಾಲೆಗಳನ್ನು ನಾಶಪಡಿಸಿ ಹಳ್ಳಿಯ ಮಕ್ಕಳೆಲ್ಲ ಪೇಟೆಯ ಕಡೆಗೆ ಮುಖ ಮಾಡುವಂತಾಗಿದೆ. ಜನಾಭಿಪ್ರಾಯ ರೂಪಿತವಾಗಬೇಕಾದುದು ಹಳ್ಳಿಯ ಅಭಿವೃದ್ಧಿಗೆ ವಿನಹ ಜಿಲ್ಲಾ ಕೇಂದ್ರವಾಗಿಸುವ ಬಗ್ಗೆ ಅಲ್ಲ . ಹಳ್ಳಿ ಬರಡಾಗುವ ಮುನ್ನ ಎಚ್ಚರವಾಗೋಣ.

Advertisement

# ಎ.ಪಿ. ಸದಾಶಿವ. ಮರಿಕೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವಿಶ್ವಪರಿಸರ ದಿನ | ತಾಯಿಯ ಹೆಸರಲ್ಲಿ ಒಂದು ಮರ -2.0 ಅಭಿಯಾನ

"ತಾಯಿಯ ಹೆಸರಲ್ಲಿ ಒಂದು ಸಸಿ"-2.0 ಅಭಿಯಾನದಡಿ 10 ಕೋಟಿ ಗಿಡಗಳನ್ನು ನೆಡುವ ಗುರಿ…

8 hours ago

ಮದುವೆಯ ವಿಳಂಬಕ್ಕೆ ಈ ಕಾರಣವೂ ಇರಬಹುದು..! ಪರಿಹಾರ ಕ್ರಮಗಳು ಇಲ್ಲಿದೆ ನೋಡಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

8 hours ago

ಅಡುಗೆಯ ಕಚ್ಚಾ ಎಣ್ಣೆಯ ಮೇಲಿನ ಆಮದು ಸುಂಕ ಕಡಿತ | ತೆಂಗಿಗಿಲ್ಲ ಆತಂಕ.. | ಧಾರಣೆ ಇಳಿಕೆಯ ಆತಂಕವಿಲ್ಲ |

ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…

1 day ago

ಅರಣ್ಯದ ಬಗ್ಗೆ ಹೊಸ ಪ್ರಜ್ಞೆಯನ್ನು ಜನರು ಜಾಗೃತಗೊಳಿಸಬೇಕು

"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…

1 day ago

ಒಂದು ಕ್ರೀಡಾ ಗೆಲುವಿಗೆ ಅಷ್ಟು ಅತಿರೇಕದ ಪ್ರತಿಕ್ರಿಯೆ ಒಳ್ಳೆಯ ಲಕ್ಷಣವಲ್ಲ……

ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ‌ ಆಶಯವನ್ನೇ ಕಳೆದುಕೊಳ್ಳುತ್ತದೆ.…

1 day ago

ಸೂರ್ಯ-ಶನಿಯಿಂದ ಶಕ್ತಿಶಾಲಿ ಪಂಚಮಿ ಯೋಗ.. | ಏನಿದು ಯೋಗ..? ಯಾವ ರಾಶಿಗೆ ವಿಶೇಷವಾದ ಅನುಕೂಲ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 day ago