ಸ್ನೇಹ ಶಾಲೆಯ ಸೂರ್ಯಾಲಯದ ಮುಕ್ತಪರಿಸರದಲ್ಲಿ ಡಿಸೆಂಬರ್ 15 ರಿಂದ ನಿರಂತರವಾಗಿ ಬೆಳಿಗ್ಗೆ 5.30 ರಿಂದ ಧನು ಪೂಜೆ ನಡೆಯುತ್ತಿದೆ. ಇದು ಪತ್ರಂ, ಪುಷ್ಪಂ, ಫಲಂ ತೋಯಂ ಎಂಬ ನಿಸರ್ಗದ ವಸ್ತುಗಳನ್ನೇ ಆರಾಧನೆಗೆ ಉಪಯೋಗಿಸಿ ಮಾಡುವ ಸರಳ ಪೂಜೆ. ಗ್ರಹಗಳಿಗೆ ಪ್ರದಕ್ಷಿಣೆ, ಸೂರ್ಯನಮಸ್ಕಾರ, ಸರಳ ಯೋಗಾಸನಗಳು, ಸೂರ್ಯಾಷ್ಟಕ, ಅಥರ್ವಶೀರ್ಷ, ರಾಮರಕ್ಷಾ ಹೇಳಿ ಮಂಗಳಾರತಿ ಮಾಡಿದಲ್ಲಿಗೆ ಪೂಜೆ ಸಮಾಪ್ತವಾಗುತ್ತದೆ. ಈ ಆರಾಧನೆಯು ಇದೇ ಜನವರಿ 14 ಮಕರ ಸಂಕ್ರಮಣದ ಆಚರಣೆಯೊಂದಿಗೆ ಮುಕ್ತಾಯವಾಗಲಿದೆ. ಆಸಕ್ತರು ಬೆಳಿಗ್ಗೆ 5.30 ಕ್ಕೇ ಬಂದರೆ 6.15 ರೊಳಗೆ ಹಿಂದಿರುಗಬಹುದು. ಯೋಗಾಸನಗಳನ್ನು ಮಾಡುವವರಿಗೆ ಸೂರ್ಯಾಲಯವು ತೆರೆದಿರುತ್ತದೆ. ಆಸಕ್ತರಿಗೆ ಸ್ವಾಗತವಿದೆ.
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…
ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…
ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…
ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…
ಐದು ವರ್ಷದ ದತ್ತಾಂಶವು ಮಂಗಳೂರು ಅಡಿಕೆ ಮಾರುಕಟ್ಟೆ ಚಕ್ರಾಕಾರ ಸ್ವಭಾವ ಹೊಂದಿರುವುದನ್ನು ತೋರಿಸಿದೆ.…
ದೇಶದ ವಿವಿದೆಡೆ ಮಾರ್ಚ್ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ವಿಶೇಷವಾಗಿ ರಾಜ್ಕೋಟ್ನಲ್ಲಿ ಅಸಾಮಾನ್ಯ ಹವಾಮಾನದಿಂದ…