ಭಾನುವಾರದ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಭಕ್ತರ ಸಂಚಾರ ಗಣನೀಯವಾಗಿ ಹೆಚ್ಚಳ ಕಂಡುಬಂದಿದ್ದು, ಸಾವಿರಾರು ಭಕ್ತರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಧರ್ಮಸ್ಥಳ, ಕನ್ಯಾಡಿ ಹಾಗೂ ಉಜಿರೆ ಭಾಗಗಳಲ್ಲಿರುವ ಬಹುತೇಕ ವಸತಿಗೃಹಗಳು ಭಕ್ತರಿಂದ ಸಂಪೂರ್ಣ ಭರ್ತಿಯಾಗಿದ್ದವು. ಭಕ್ತರ ವಾಹನಗಳ ಸಂಖ್ಯೆ ಹೆಚ್ಚಿದ್ದರಿಂದ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ದಿನವಿಡೀ ವಾಹನ ಸಂಚಾರದ ದಟ್ಟಣೆ ಕಂಡುಬಂತು. ಕೆಲವು ಕಡೆ ನಿಧಾನಗತಿಯ ಸಂಚಾರವೂ ಉಂಟಾಯಿತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ನಗರದ ಹೊಟೇಲ್ಗಳು, ಉಪಾಹಾರ ಗೃಹಗಳು, ಹರಿಕೆಮಂಡೆ (ಮುಡಿ ಮತ್ತು ತಲೆಕೂದಲು ತೆಗೆಯುವ ಕೇಂದ್ರಗಳು), ದೇವಸ್ಥಾನದ ಸೇವಾ ಕೌಂಟರ್ಗಳು ಹಾಗೂ ವಸತಿಗೃಹಗಳ ಎದುರು ಭಕ್ತರ ಉದ್ದನೆಯ ಸರದಿ ಸಾಲುಗಳು ಕಂಡುಬಂದವು. ದೇವರ ದರ್ಶನ, ಅನ್ನಪ್ರಸಾದ ಸ್ವೀಕಾರ ಹಾಗೂ ಹರಕೆ ಸಲ್ಲಿಸಲು ಭಕ್ತರು ತಾಳ್ಮೆಯಿಂದ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.
A large number of devotees visited Dharmasthala on Sunday to seek the blessings of Lord Manjunatha. Hotels, lodges, hair-offering centers, and accommodation facilities in Dharmasthala, Ujire, and Kanyadi were fully occupied, while roads witnessed heavy traffic congestion throughout the day.
ಧರ್ಮಸ್ಥಳದಲ್ಲಿ ಭಕ್ತಸಾಗರ – ರಸ್ತೆಗಳಲ್ಲಿ ವಾಹನ ದಟ್ಟಣೆ https://t.co/8Svxo5b8tj #Dharmasthala #ManjunathaTemple #DevoteesRush #Ujire #Kanyadi #DakshinaKannada #TempleTourism #Karnataka #TheRuralMirror #theruralmirror pic.twitter.com/xGLQf1lwNn
— theruralmirror (@ruralmirror) June 21, 2026

