#ಗಾಂಧಿವಿಚಾರವೇದಿಕೆ | “ವಿಪರೀತವಾದ” ಯಾವತ್ತೂ ಅಪಾಯವೇ ಎಂದಿದ್ದರು ಅರವಿಂದ ಮಹರ್ಷಿಗಳು | ಧೀರೇನ್‌ ಪರಮಲೆ ಉಪನ್ಯಾಸ |

October 10, 2021
1:23 PM

ಯಾವುದೇ ವಿಚಾರಗಳ ವಿಪರೀತವಾದ ಆದರೆ ಅದರಿಂದಲೇ ಹಾನಿಯಾಗುತ್ತದೆ ಎನ್ನುವುದನ್ನು  ಮಹರ್ಷಿ ಅರವಿಂದರು ಹೇಳಿದ್ದರು. ಅದು ಧರ್ಮ, ಜಾತಿ, ಸಾಮಾಜಿಕ ಚಳುವಳಿ ಯಾವುದೇ ಆದರೂ ವಿಪರೀತವಾದರೆ ಒಂದು ದಿನ ಅದರಿಂದಲೇ ಹೊಡೆತ, ಅದರಿಂದಲೇ ನಾಶ ನಿಶ್ಚಿತ ಎನ್ನುವುದನ್ನು  ಮಹರ್ಷಿಗಳು ಹೇಳಿದ್ದರು. ಅದು ಸತ್ಯವೂ ಆಗುತ್ತಿದೆ ಎಂದು  ಲೀಡರ್‌ ಎಕ್ಸಲೆನ್ಸ್‌ ಸೊಲ್ಯುಶನ್‌ನ ಮುಖ್ಯಅಧಿಕಾರಿ, ಧಾರ್ಮಿಕ ಚಿಂತಕ ಧೀರೇನ್‌ ಪರಮಲೆ ಹೇಳಿದರು.

Advertisement
Advertisement

ಅವರು ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ವತಿಯಿಂದ ಪಂಜದ ಜಾಕೆ ಪದ್ಮನಾಭ ಗೌಡ ಅವರ ಮನೆಯ ವಠಾರದಲ್ಲಿ ನಡೆದ “ಮಾಸದ ಸಂವಾದ” ಕಾರ್ಯಕ್ರಮದಲ್ಲಿ “ಶ್ರೀ ಅರವಿಂದ ದರ್ಶನ” ಉಪನ್ಯಾಸ ಕಾರ್ಯಕ್ರಮ ಹಾಗೂ ಸಂವಾದ ಕಾರ್ಯಕ್ರಮದಲ್ಲಿ  ಮಾತನಾಡಿದರು. ಯಾವತ್ತೂ ಗೊತ್ತಿಲ್ಲ ಎನ್ನುವುದೇ ಜ್ಞಾನದ ಬಾಗಿಲು ತೆರೆಯುವುದು, ಗೊತ್ತಿದೆ ಎನ್ನುವುದು ಜ್ಞಾನದ ಬಾಗಿಲು ಹಾಕಿದಂತೆಯೇ. ಯಾವುದೇ ಸಂಗತಿಗಳು ನನಗೆ ಗೊತ್ತಿದೆ ಎಂದರೆ ಅದರಾಚೆಗಿನ ಸಂಗತಿಗಳು ತಿಳಿಯಲು ಸಾಧ್ಯವಾಗುವುದಿಲ್ಲ ಎಂದ ಅವರು ಸೇವೆ ಎನ್ನುವುದರ ಬಗ್ಗೆ ಅರವಿಂದರು ಬಹಳ ಎಚ್ಚರಿಕೆಯನ್ನು ಹೇಳಿದ್ದಾರೆ, ಸೇವೆ ಯಾವತ್ತೂ ಅವಕಾಶವೇ ಹೊರತು ಅಧಿಕಾರವಲ್ಲ ಎನ್ನುವುದು ತಿಳಿಯಬೇಕು.

ಯಾವತ್ತೂ ಒಂದು ಯುಗದ ಅಂತ್ಯದ ಮೊದಲು ಇಡೀ ವ್ಯವಸ್ಥೆ ಕಲುಷಿತವಾಗುತ್ತದೆ, ಸುಳ್ಳುಗಳೇ ವಿಜೃಂಭಿಸುತ್ತದೆ, ಎಲ್ಲೂ ದಿಕ್ಕಿಲ್ಲ ಎಂದೆನಿಸುತ್ತದೆ, ಆ ಕಲುಷಿತವಾದ ವಾತಾವರಣದಲ್ಲಿ ಬೆಳಕೊಂದು ಹರಿಯುತ್ತದೆ, ಅದು ಬದಲಾವಣೆಯಾಗುತ್ತದೆ, ಅಲ್ಲಿ ಪ್ಯೂರಿಟಿ ಲಭ್ಯವಾಗುತ್ತದೆ. ಇದು ಪರಿಸರವೂ ಹೇಳಿದೆ, ಅರವಿಂದರು ಇದನ್ನು  ಅಂದು ದಾಖಲಿಸಿದ್ದರು, ಇಂದು ಆ ಯುಗ ಹತ್ತಿರವಾಗುತ್ತಿದೆ. ಬದಲಾವಣೆ ದಾರಿಗಳು ಯಾವತ್ತೂ ನಿಧಾನವೇ ಆಗಿರುತ್ತದೆ ಆದರೆ ಪರಿಣಾಮಕಾರಿಯಾಗಿರುತ್ತದೆ ಎಂದು ಧೀರೇನ್‌ ಹೇಳಿದರು.

ಜಗದ ಪರಿವರ್ತನೆ ಎಂದರೆ ನನ್ನ ಪರಿವರ್ತನೆ. ನಾನು ಪರಿವರ್ತನೆಯಾದರೆ ಇಡೀ ಜಗವೇ ಬದಲಾಗುತ್ತದೆ. ಅದು ಒಳ್ಳೆಯ ಬದಲಾವಣೆಯಾಗಿದ್ದರೆ ಪರಿಸರವೂ ಒಳ್ಳೆಯದಾಗುತ್ತದೆ. ನಾನೇ ಎನ್ನುವುದು ಸುಳ್ಳಾದರೆ ಇಡೀ ಜಗವೇ ಸುಳ್ಳಾಗುತ್ತದೆ. ಹೀಗಾಗಿ ಜಗತ್ತು ಬದಲಾವಣೆ ಮಾಡುವ ಕನಸಲ್ಲ, ಮೊದಲು ನಾನು ಬದಲಾಗುವ ಕನಸು, ನಾನು ಸತ್ಯವಾಗುವ ಕನಸು ಜಾಗೃತವಾಗಬೇಕು ಎಂದ ಧೀರೇನ್‌ ಪರಮಲೆ, ಬದಲಾವಣೆಯ ಪ್ರಯತ್ನ ನಿರಂತರ, ಯಾವತ್ತೂ ಸಂಧಿಕಾಲದಲ್ಲಿ ಗೊಂದಲ ಇರುವುದು  ಹಿಂದೆಯೂ ಕಂಡುಬಂದಿದೆ. ಆ ಗೊಂದಲಗಳಿಂದ ಒಂದು ಬ್ರೇಕ್‌ ಡೌನ್‌ ಆಗಬೇಕಾಗುತ್ತದೆ ನಂತರವೇ ಹೊಸ ಯುಗ ಪ್ರಾರಂಭ ಇಂತಹ ಅನೇಕ ಸಂಗತಿಗಳನ್ನು  ಅರವಿಂದ ಮಹರ್ಷಿಗಳು ತಾನು ಅನುಭವಿಸಿ ಬರೆದಿದ್ದಾರೆ ಎಂದು  ಹೇಳಿದರು.

Advertisement

ಸಭಾಧ್ಯಕ್ಷತೆಯನ್ನು ವಹಿಸಿದ್ದ ವಿಧಾನಪರಿಷತ್‌ ಮಾಜಿ ಸದಸ್ಯ , ಗಾಂಧಿ ವಿಚಾರ ವೇದಿಕೆಯ ಮಾತೃಸಮಿತಿ ಉಪಾಧ್ಯಕ್ಷ ವಿನಯಚಂದ್ರ ಕಿಲಂಗೋಡಿ ಮಾತನಾಡಿ, ಅರವಿಂದ ಮಹರ್ಷಿಗಳ ಚಿಂತನೆಗಳು ಸಮಾಜಕ್ಕೆ ಹೊಸದಿಕ್ಕು ನೀಡಿತ್ತು. ಅರವಿಂದರು ಅಂತರ್ಯುಗದ ಬಗ್ಗೆ ಹೇಳಿದ್ದರು. ಸತ್ಯಯುಗದ ಪರಿವರ್ತನೆ, ಸಾಕ್ಷಾತ್ಕಾರದ ಬಗ್ಗೆ ಅರವಿಂದರು ತಿಳಿಸಿದ್ದರು ಎಂದರು.

ವೇದಿಕೆಯಲ್ಲಿ  ಮಾತೃಸಮಿತಿ ಉಪಾಧ್ಯಕ್ಷ ಅಚ್ಚುತ ಮಲ್ಕಜೆ , ರಫೀಕ್‌ ಐವತ್ತೊಕ್ಲು, ಧರ್ಮಪಾಲ ಗೌಡ ಜಾಕೆ ಉಪಸ್ಥಿತರಿದ್ದರು.

ಇದೇ ಸಂದರ್ಭ ಸೇವಾ ಕಾರ್ಯಗಳಿಗಾಗಿ ರಜಿತ್‌ ಭಟ್‌ ಪಂಜ ದಂಪತಿಗಳು ಹಾಗೂ ಯುವತೇಜಸ್ಸು ಟ್ರಸ್ಟ್‌ಗೆ ಕೃತಜ್ಞತೆ ಸಲ್ಲಿಸಲಾಯಿತು. ಗಾಂಧಿ ವಿಚಾರ ವೇದಿಕೆಯ ಪಂಜ ವಲಯ ಅಧ್ಯಕ್ಷರನ್ನಾಗಿ ಭೀಶ್ಮಕ್‌ ಜಾಕೆ ಅವರನ್ನು ಘೋಷಣೆ ಮಾಡಲಾಯಿತು.  ಗಾಂಧಿ ವಿಚಾರ ವೇದಿಕೆಯ ಉದ್ದೇಶ ಹಾಗೂ ಸಂಘಟನೆಯ ಬಗ್ಗೆ ಅರವಿಂದ ಚೊಕ್ಕಾಡಿ ಮಾಹಿತಿ ನೀಡಿದರು.

Advertisement

ಧರ್ಮಪಾಲ ಗೌಡ ಜಾಕೆ ಸ್ವಾಗತಿಸಿ , ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮೀಶ ಗಬ್ಲಡ್ಕ ಪ್ರಸ್ತಾವನೆಗೈದರು. ಗಾಂಧಿ ವಿಚಾರ ವೇದಿಕೆಯ ಮಾತೃಸಮಿತಿ ಉಪಾಧ್ಯಕ್ಷ  ರಫೀಕ್‌ ಐವತ್ತೊಕ್ಲು ವಂದಿಸಿದರು. ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ನಿರೂಪಿಸಿದರು. ಉಪನ್ಯಾಸದ ವಿಡಿಯೋ ಇಲ್ಲಿದೆ…..

 

 

Advertisement

 

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪುಟ್ಟ ಚಿಟ್ಟೆ | ಭಾವ ತಟ್ಟಿದ ದಿಟ್ಟೆ
May 16, 2025
12:40 PM
by: ದ ರೂರಲ್ ಮಿರರ್.ಕಾಂ
ಮೀನುಗಾರಿಕೆ ವಲಯದ ಪ್ರಗತಿ ಕುರಿತು ಪರಿಶೀಲನಾ ಸಭೆ | ಸಾಗರ ಆಹಾರೋತ್ಪನ್ನಗಳ ರಫ್ತು ಪ್ರಮಾಣ  ಹೆಚ್ಚಳಕ್ಕೆ ಸೂಚನೆ
May 16, 2025
7:23 AM
by: The Rural Mirror ಸುದ್ದಿಜಾಲ
ಕೃಷಿಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿದೆ | ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ |
May 16, 2025
7:16 AM
by: The Rural Mirror ಸುದ್ದಿಜಾಲ
ಮೇ 18 ರ ನಂತರ ರಾಹು ಕಾಟದಿಂದ ಈ 5 ರಾಶಿಯವರಿಗೆ ಕಷ್ಟಗಳು
May 16, 2025
7:12 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group