ಮಧುಮೇಹವನ್ನು (diabetics)ಮೆಟ್ಟಿ ನಿಲ್ಲಬಹುದು. ಆದರೆ ಅದಕ್ಕೆ ಬೇಕಾದ್ದು ತಿಳುವಳಿಕೆ. ಮಧುಮೇಹ ಎಂದರೆ ಏನು ಮತ್ತು ಅದರ ಸ್ವರೂಪ ಏನು ಎಂದು ಗೊತ್ತಿದ್ದರೆ ಮಧುಮೇಹ ರೋಗವೂ(decease) ಅಲ್ಲ; ಅಪಾವಸ್ಥೆಯೂ ಅಲ್ಲ. ಬದಲಾಗಿ ಮಧುಮೇಹ ಎಂಬುದು ಆರೋಗ್ಯದೆಡೆಗೆ ಪ್ರಯಾಣಿಸುವಂತೆ ನಿಸರ್ಗವು ದೇಹದ(body) ಮುಖಾಂತರ ನಮಗೆ ಕೊಡುವ ಪರಮ ದೈವಿಕ ಸಂದೇಶವಾಗಿರುತ್ತದೆ.
ಆ ಸಂದೇಶವು ನಮಗೆ ಕೊಡುವ ಸೂಚನೆಗಳೆಂದರೆ:
ಆದ್ದರಿಂದ ಮಧುಮೇಹ ಎಂಬುದು ಒಂದು ದೈವಿಕ ಸಂದೇಶವಾಗಿರುವುದರಿಂದ ಹೆದರದೆ “ಓ ದೇವರೇ, ನಿನ್ನ ಸಂದೇಶವನ್ನು ನಾನು ಪಾಲಿಸುತ್ತೇನೆ. ನನ್ನನ್ನು ಕಾಪಾಡು!” ಎಂಬ ಪ್ರಾರ್ಥನೆಯೊಡನೆ ನೈಸರ್ಗಿಕ ಜೀವನ ಎಂಬ ದೈವಿಕ ಸಂದೇಶದ ಪಾಲನೆಗೆ ತೊಡಗಬೇಕು ನನ್ನ ಪ್ರಕಾರ ಮಧುಮೇಹದಲ್ಲಿ ಐದು ವಿಧ. ಅದರಲ್ಲಿ ಶುಗರ್ ಒಂದು. ವ್ಯಕ್ತಿಯ ದೇಹದಲ್ಲಿ ನಂಜು ಹೆಚ್ಚಾದರೆ ರಕ್ತ ಕಣಗಳು ವಿಷಯುಕ್ತವಾಗಿ ನಾರ್ಮಲ್ ವ್ಯಕ್ತಿಗಿಂತ ರಕ್ತ ಸ್ವಲ್ಪ ದಪ್ಪ ವಾಗಿರುತ್ತದೆ. ಪ್ಯಾಂಕ್ರಿಯಾಸ್ನ ಮೇಲೆ ಇರುವ ರಕ್ತನಾಳದಲ್ಲಿ ಹರಿಯುವ ರಕ್ತ ನಾಳ ಕೆಲಸ ನಿಲ್ಲಿಸಲು ಪ್ರಾರಂಭ ಮಾಡುತ್ತದೆ. ನಿಧಾನವಾಗಿ ಶುಗರ್ ಶುರುವಾಗುತ್ತದೆ. ನಂತರ ಸಕ್ಕರೆ ಬಳಕೆ ಇದನ್ನು ಇನೂ ಹದಗೆಡಿಸುತ್ತದೆ. ಮಾಂಸದ ಅಹಾರ, ತುಪ್ಪ, ಕೊಬ್ಬಿನ ಅಂಶ ಇವುಗಳು ಶುಗರನು ಬೇಗನೆ ಹೆಚ್ಚಿಸುತ್ತದೆ. ಮನಸ್ಸಿನ ಮಾತ್ಸರ್ಯ ಶುಗರ್ಗೆ ಒಂದು ಕಾರಣ .
ಹಿಂದೆಲ್ಲ ಇದಕ್ಕೆ ಅಷ್ಟು ಆಸ್ಪದವೇ ಇರಲಿಲ್ಲ. ಶ್ರಮದ ಜೀವನ ಇರುವುದರಲ್ಲಿ ತೃಪ್ತಿ ಇದೆಲ್ಲ ಶುಗರ್ ಬಾರದಿರಲು ಸುಲಭ ವಿಧಾನ. ಮದ್ದಾಲೆ ಮದ್ದರಸ ಶುದ್ಧಿಕರಣವಾದ ಅಶ್ವಗಂಧ, ಬಾವಂಚಿ, ವೀಳ್ಯದೆಲೆ, ಬೇವು, ಮಾವು, ತ್ರಿಫಲಾ, ಮಂಜಿಷ್ಠಾ, ಕುಟಕೀ, ಅಮೃತ ಸತ್ವ, ಬೇವು, ಚಂದನ, ದೇವದಾರು, ಅರಿಶಿಣ, ಮರದರಿಶಿಣ, ನೆಲನೆಲ್ಲಿ, ಕೆನ್ನಾರಿಗಡ್ಡೆ, ಸೋಮಲತಾ ನೇರಳೆ ಮಧುನಾಶಿನಿ ಬಿಲ್ವ ಕುಟಜ ಗೋಕ್ಷುರ ಏಕನಾಥ ಮುಂತಾದ ಅನೇಕ ಗಿಡ ಮೂಲಿಕೆ ಉಪಯೋಗಿಸಿ ತಯಾರಿಸಿದ ಮೆಡಿಸಿನ್ ಒಳ್ಳೆ ಫಲ ನೀಡುತ್ತದೆ. ಶುಗರ್ ಇದೆ ಎಂದು ತಿಳಿದ ತಕ್ಷಣವೇ ಒಂದು ಟ್ಯಾಬ್ಲೆಟ್ ತೆಗೆದು ಕೊಳ್ಳದೇ ನನ್ನಲ್ಲಿ ಬಂದರೆ ಆರು ತಿಂಗಳು ಮೆಡಿಸಿನ್ ಕೊಟ್ಟು ನಂತರ ನನ್ನ ಮೆಡಿಸಿನ್ ನಿಲ್ಲಿಸಿ. ನಿಮಗೆ ಜೀವನದ ಕೊನೆಯವರೆಗೂ ಮಾತ್ರೆ ಇಲ್ಲದೇ ಇರುವಂತೆಯೇ ವ್ಯವಸ್ಥೆ ಆಗುತ್ತದೆ. ಆದರೆ ಒಂದು ತಿಂಗಳು ಬೇರೆ ಯಾವುದೇ ಮೆಡಿಸಿನ್ ಸೇವನೆ ನಂತರ ನನ್ನಲ್ಲಿ ಬಂದರೆ ಗುಣಪಡಿಸಲು ತುಂಬಾನೇ ಸಮಯ ಬೇಕಾಗುತ್ತದೆ.
ಇದರಲ್ಲಿ ಕೆಲವು ಸುಲಭ ವಿಧಾನ: ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶುಗರ್ ಹತೋಟಿಗೆ ಬರುತ್ತದೆ. ನಂತರ ಮಾತ್ರೆ ನಿಲ್ಲಿಸಿ ಮೇಲೆ ಹೇಳಿದ ಮೆಡಿಸಿನ್ ಮುಂದುವರಿಸಿ ನಾಲ್ಕು ತಿಂಗಳಲ್ಲಿ ಸ್ವೀಟ್ ತಿಂದರೂ ಶುಗರ್ ಹತೋಟಿಯಲ್ಲಿ ಇಡಬಹುದು. ಕರಿಬೇವು ಒಂದು ಒಳ ಮುಷ್ಠಿ ಒಂದು ಚಮಚ ಕಹಿ ಜೀರಿಗೆ ಪುಡಿ ಮಿಕ್ಸಿ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ಮೆಂತ್ಯ ಪುಡಿ ಒಂದು ಚಮಚ ಮೊಸರು ಅರ್ಧ ಕಪ್ ನಲ್ಲಿ ಸೇರಿಸಿ ಸೇವಿಸಿದರೂ ಶುಗರ್ ಹತೋಟಿಗೆ ಬರುತ್ತದೆ.
ಭಾರತದ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಈಗ 73 ಬೆಳೆಗಳು ಮತ್ತು 436…
ICAR 16 ಹೊಸ ಜಾನುವಾರು ಮತ್ತು ನಾಯಿ ತಳಿಗಳಿಗೆ ರಾಷ್ಟ್ರೀಯ ನೋಂದಣಿ ನೀಡಿದ್ದು,…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…
ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…
ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…
ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…