Opinion

ಯೌವನದಲ್ಲೇ ಕೂದಲು ಬೆಳ್ಳಗಾಗಿವೆಯೇ? | ಹೇರ್‌ ಡೈ ಅಥವಾ ಕೂದಲಿನ ಬಣ್ಣವಿಲ್ಲದೆ, ಕೂದಲು ಕಡುಗಪ್ಪಾಗಿಸುವ ಉಪಾಯಗಳು ಇಲ್ಲಿವೆ..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲಿ 1 ರಿಂದ 2 ವ್ಯಕ್ತಿಗಳು ಬೂದು ಕೂದಲಿನ ಸಮಸ್ಯೆಯಿಂದ(White Hair) ಬಳಲುತ್ತಿದ್ದಾರೆ. ಕೂದಲು(Hair) ಬಿಳಿಯಾಗುವುದು ಆರೋಗ್ಯದ(Health) ಮೇಲೆ ಹೆಚ್ಚು ಪರಿಣಾಮ ಬೀರದಿದ್ದರೂ, ಈ ಬದಲಾವಣೆಗಳು ಮಾನಸಿಕ ಆರೋಗ್ಯದ(Mental health) ಮೇಲೆ ಪರಿಣಾಮ ಬೀರುತ್ತವೆ. ಕೂದಲು ಬಿಳಿಯಾಗುವುದರಿಂದ ವಯಸ್ಸಿಗೆ ಮುಂಚೆಯೇ ನಾವು ವಯಸ್ಸಾದವರಂತೆ(Premature) ಕಾಣುತ್ತೇವೆಯೇ, ಜನರು ಏನು ಅಂದುಕೊಳ್ಳುತ್ತಾರೆ ಇತ್ಯಾದಿ ವಿಚಾರಗಳು ಮನಸ್ಸಿನಲ್ಲಿ ಬಂದು ವ್ಯಕ್ತಿಯ ಆತ್ಮವಿಶ್ವಾಸ ಕಡಿಮೆಯಾಗುತ್ತದೆ.

Advertisement

ಕೂದಲು ಕಪ್ಪಾಗಿಸಲು ಹೇರ್ ಡೈ ಒಂದು ವಿಕಲ್ಪವಿದ್ದರೂ, ಅನೇಕ ಜನರು ಹೇರ್ ಡೈ ಬಳಸಲು ಇಷ್ಟಪಡುವುದಿಲ್ಲ. ಕೆಲವು ಸರಳ ಮನೆಮದ್ದುಗಳನ್ನು ಮಾಡುವುದರ ಮೂಲಕ ನೀವು ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಇದು ನೈಸರ್ಗಿಕವಾಗಿ ನಿಮ್ಮ ಕೂದಲನ್ನು ರಾಸಾಯನಿಕಗಳಿಗೆ ಒಡ್ಡಿಕೊಳ್ಳದೆ ಕಪ್ಪಾಗಿಸುತ್ತದೆ. (ನೈಸರ್ಗಿಕವಾಗಿ ಕಪ್ಪು ಕೂದಲು ಪಡೆಯುವುದು ಹೇಗೆ)

ಖಾಲಿ (ಕಪ್ಪು) ಚಹಾ… ಕೂದಲಿನ ಬಣ್ಣವನ್ನು ಬದಲಾಯಿಸುವಲ್ಲಿ ಚಹಾದ ಪರಿಣಾಮವನ್ನು ಸಹ ಕಾಣಬಹುದು. ಬೂದು ಕೂದಲಿನ ಸಮಸ್ಯೆಗೆ ಕಪ್ಪು ಚಹಾವನ್ನು ಬಳಸಲು, ಒಂದು ಲೋಟ ನೀರಿನಲ್ಲಿ ಕಪ್ಪು ಚಹಾವನ್ನು ಕುದಿಸಿ. ಈ ನೀರನ್ನು ತಣ್ಣಗಾಗಿಸಿ ನಿಮ್ಮ ಕೂದಲಿಗೆ ಹಚ್ಚಿ. ಕೂದಲಿಗೆ ಹಚ್ಚಿದ ನಂತರ ಅರ್ಧ ಘಂಟೆಯವರೆಗೆ ಬಿಡಿ. ಇದರ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಬಿಳಿ ಕೂದಲು ಕಪ್ಪಾಗಲು ವಾರಕ್ಕೊಮ್ಮೆ ಈ ಪರಿಹಾರವನ್ನು ಮಾಡಿ.

ಮೆಂತ್ಯ… ಮೆಂತ್ಯವನ್ನು ಪುಡಿ ಮಾಡಿ. ಈ ಪುಡಿಯಲ್ಲಿ 3 ರಿಂದ 4 ನೆಲ್ಲಿಕಾಯಿ ರಸ ಮತ್ತು ತೆಂಗಿನ ಎಣ್ಣೆಯನ್ನು ಬೆರೆಸಿ ಪೇಸ್ಟ್ ಮಾಡಿ. ಈ ಹೇರ್ ಮಾಸ್ಕ್ ಅನ್ನು ನಿಮ್ಮ ತಲೆಗೆ ಹಚ್ಚಿ ಮತ್ತು ಒಂದು ಗಂಟೆಯ ನಂತರ ತೊಳೆಯಿರಿ. ಉತ್ತಮ ಪರಿಣಾಮಕ್ಕಾಗಿ, ವಾರಕ್ಕೊಮ್ಮೆ ಈ ಹೇರ್ ಮಾಸ್ಕ್ ಅನ್ನು ಅನ್ವಯಿಸಿ. ಕೂದಲಿನ ಮೇಲೆ ಉತ್ತಮ ಪರಿಣಾಮ ಕಂಡುಬರುತ್ತದೆ.

ಕರಿಬೇವು… ಕೂದಲನ್ನು ಕಪ್ಪಾಗಿಸಲು ಕರಿಬೇವಿನ ಎಲೆಗಳನ್ನು ತುಂಬಾ ಸುಲಭವಾಗಿ ಬಳಸಬಹುದು. ಕರಿಬೇವಿನ ಎಲೆಗಳನ್ನು ಬಳಸಲು, 2 ಚಮಚ ನೆಲ್ಲಿಕಾಯಿ ಪುಡಿಯನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಬ್ರಾಹ್ಮಿ ಪುಡಿಯನ್ನು ಸೇರಿಸಿ. ಕರಿಬೇವಿನ ಎಲೆಗಳನ್ನು ಪುಡಿಮಾಡಿ ಮತ್ತು ಈ ಮಿಶ್ರಣದಲ್ಲಿ ಬೆರೆಸಿ. ಕೂದಲಿಗೆ ಸರಿಯಾಗಿ ಹಚ್ಚಲು ಇದರಲ್ಲಿ ಸ್ವಲ್ಪ ನೀರನ್ನು ಬೆರೆಸಬಹುದು. ನೀರಿನೊಂದಿಗೆ ಬೆರೆಸಿದಾಗ, ಈ ಮುಖವಾಡವು ಕೂದಲಿನ ಮೇಲೆ ಅನ್ವಯಿಸಲು ಅನುಕೂಲವಾಗುತ್ತದೆ. ಇದನ್ನು ನಿಮ್ಮ ಕೂದಲಿನ ಮೇಲೆ ಸುಮಾರು ಒಂದು ಗಂಟೆ ಬಿಡಿ. ನಂತರ ತೊಳೆಯಿರಿ.

ತೆಂಗಿನ ಎಣ್ಣೆ… ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಸರಿಯಾಗಿ ಹಚ್ಚುವುದರಿಂದ ಬೂದು ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಂಬೆ ರಸ ಮತ್ತು ಹುರಿದು ಪುಡಿ ಮಾಡಿದ ಕಲೋಂಜಿ (ಕೃಷ್ಣ ಜೀರಿಗೆ) ಬೀಜಗಳೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚುವ ಮೊದಲು ಬೆಚ್ಚಗಾಗಿಸಿ. ನಂತರ ಅದನ್ನು ಬೇರಿನಿಂದ ತುದಿಗೆ ಹಚ್ಚಿಕೊಳ್ಳಿ. ನಿಮ್ಮ ಕೂದಲಿನ ಮೇಲೆ 1 ರಿಂದ 2 ಗಂಟೆಗಳ ಕಾಲ ಬಿಡಿ. ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಈ ಮಿಶ್ರಣ ಕೂದಲು ತೊಳೆಯುವ ಮೊದಲು ಅನ್ವಯಿಸಬಹುದು. ಹಾಗಾಗಿ ಕೂದಲು ನೈಸರ್ಗಿಕವಾಗಿ ಕಪ್ಪಾಗಲು ಪ್ರಾರಂಭಿಸುತ್ತದೆ. ಈ ಮೇಲಿನ ಉಪಾಯಗಳೊಂದಿಗೆ ಗುಡ್ಡದ ನೆಲ್ಲಿಕಾಯಿ ರಸ ಮತ್ತು ಅಲೋವೆರಾ ರಸ ಇವುಗಳನ್ನು ನಿಯಮಿತವಾಗಿ ಸೇವಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಬರಹ : ಕುಮಾರ್ ಚೋಪ್ರಾ, ಡಾ. ಸುನಿಲ್ ಇನಾಮದಾರ, ಕನ್ನಡಕ್ಕೆ: ಡಾ. ಕುಲಕರ್ಣಿ ಪಿ. ಎ.

Recently, 1 to 2 people in every household are suffering from the problem of gray hair. Although graying of hair does not have much impact on health, these changes affect mental health. Due to graying of hair, we look premature, what people think about us etc. comes to mind and the self-confidence of the person decreases.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 27-04-2025 | ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆ | ಎ.28 ರಿಂದ ಮಳೆಯ ಪ್ರಮಾಣ ಕಡಿಮೆ |

ಈಗಿನಂತೆ ಎಪ್ರಿಲ್ 29 ಅಥವಾ 30ರಿಂದ ಕರಾವಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ…

10 hours ago

ಬದುಕು ಪುರಾಣ | ಅದು ‘ಎಚ್ಚರ’ದ ರೇಖೆ!

ಬದುಕಿನ ಯಾನಕ್ಕೆ ಪಾಲಕರು ರೇಖೆಯನ್ನು ಎಳೆದು ತೋರಿಸುತ್ತಾರೆ. ಅದು ಭವಿಷ್ಯದ ಕೈತಾಂಗು. ರಕ್ಷಣೆ…

12 hours ago

ಕಣ್ಣಿಗೆ ಬಟ್ಟೆ ಕಟ್ಟಿ 6 ನಿಮಿಷದಲ್ಲಿ 112 ವಸ್ತುಗಳನ್ನು ಗುರುತಿಸಿದ ಬಾಲಕಿ | ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ |

ಹನುಮಸಾಗರ ಗ್ರಾಮದ ಏಳು ವರ್ಷದ ಪ್ರದ್ವಿಕಾ ಕಣ್ಣಿಗೆ ಬಟ್ಟೆ ಕಟ್ಟಿ6 ನಿಮಿಷದಲ್ಲಿ 112…

12 hours ago

ಸಾರ್ವಜನಿಕರಲ್ಲಿ ಮಲೇರಿಯಾ ಕುರಿತು ಅರಿವು ಮೂಡಿಸಲು ಜಾಗೃತಿ

ಸಾರ್ವಜನಿಕರಲ್ಲಿ ಮಲೇರಿಯಾ ಕಾಯಿಲೆ ಕುರಿತು ಅರಿವು ಮೂಡಿಸಬೇಕೆಂಬುವುದು ಜಾಥದ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬರೂ…

13 hours ago

50 ವರ್ಷಗಳಲ್ಲಿ ಶೇ 8 ರಷ್ಟು ಜನರ ಭಾಷೆಗಳು ಜಗತ್ತಿನ ಮೇಲೆ ಅಧಿಪತ್ಯ ಸಾಧಿಸುವ ಅಪಾಯ | ಡಾ. ಪುರುಷೋತ್ತಮ ಬಿಳಿಮಲೆ ಎಚ್ಚರಿಕೆ

ಜಾಗತಿಕರಣದ ಆಕ್ರಮಣದಿಂದ ಜನಸಮುದಾಯಗಳ ಪಾರಂಪರಿಕ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಪರಿಣಾಮಕಾರಿ ಪ್ರಯತ್ನ…

13 hours ago

ಯುದ್ಧ……

ಅವಶ್ಯವಾದರೆ ದೇಶದ ರಕ್ಷಣೆಗಾಗಿ ಯಾವ ತ್ಯಾಗಕ್ಕಾದರೂ ಸಿದ್ದರಾಗೋಣ. ಆದರೆ ಹುಚ್ಚುತನದ ಭಾವನಾತ್ಮಕ ಅಭಿಪ್ರಾಯಗಳಿಗೆ…

13 hours ago