ಅಕ್ರಮವಾಗಿ ಅಡಿಕೆ ಆಮದು ಮತ್ತು ಕಳ್ಳಸಾಗಣೆ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಕ್ರಮಗಳು ಮುಂದುವರಿದಿರುವ ನಡುವೆ, ನಾಗಾಲ್ಯಾಂಡ್ನ ದಿಮಾಪುರ ಕಸ್ಟಮ್ಸ್ ಇಲಾಖೆ ಜಪ್ತಿ ಮಾಡಿದ್ದ ₹2.22 ಕೋಟಿ ಮೌಲ್ಯದ 33,600 ಕೆ.ಜಿ. ಅಡಿಕೆ ಪ್ರಕರಣದಲ್ಲಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಜೂನ್ 18 ರಂದು ನೀಡಿದ ಆದೇಶದಲ್ಲಿ, ಗುಹವಾಟಿ ಹೈಕೋರ್ಟ್ ದಿಮಾಪುರ ಕಸ್ಟಮ್ಸ್ ಇಲಾಖೆ ಕೈಗೊಂಡಿದ್ದ ಜಪ್ತಿ ಕ್ರಮ ಕಾನೂನುಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಅಡಿಕೆ ಕಳ್ಳಸಾಗಣೆ ಪ್ರಕರಣಗಳಲ್ಲಿ ಕಸ್ಟಮ್ಸ್ ಇಲಾಖೆಗೆ ಇರುವ ಅಧಿಕಾರವನ್ನು ನ್ಯಾಯಾಲಯ ಮತ್ತೊಮ್ಮೆ ದೃಢಪಡಿಸಿದೆ.
ಪ್ರಕರಣವು 2025ರ ನವೆಂಬರ್ ತಿಂಗಳಲ್ಲಿ ನಡೆದಿತ್ತು. ಗಡಿ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಅಡಿಕೆ ಸಾಗಾಟದ ಬಗ್ಗೆ ದೊರೆತ ಮಾಹಿತಿಯ ಆಧಾರದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಅಸ್ಸಾಂ ನೋಂದಣಿ ಹೊಂದಿದ್ದ ಲಾರಿಯನ್ನು ತಡೆದು ಪರಿಶೀಲಿಸಿದ್ದರು. ಲಾರಿಯಲ್ಲಿ 480 ಚೀಲಗಳಲ್ಲಿ 33.6 ಟನ್ ಅಡಿಕೆ ಪತ್ತೆಯಾಗಿತ್ತು. ಆದರೆ ಸಾಗಾಟಕ್ಕೆ ಸಂಬಂಧಿಸಿದ ಬಿಲ್, ಇ-ವೇ ಬಿಲ್ ಅಥವಾ ಇತರೆ ದಾಖಲೆಗಳನ್ನು ಚಾಲಕ ನೀಡಲು ವಿಫಲವಾಗಿದ್ದನು ಎಂದು ವರದಿಯಾಗಿದೆ.
ನಂತರ ಅಡಿಕೆ ಮಾಲೀಕತ್ವ ಹೊಂದಿದ್ದ ಖಾಸಗಿ ಕಂಪನಿಯು ನ್ಯಾಯಾಲಯದ ಮೆಟ್ಟಿಲೇರಿದ್ದು, ಇದು ದೇಶೀಯ ವ್ಯಾಪಾರದ ಸರಕು ಎಂದು ವಾದಿಸಿತ್ತು. ಆದರೆ ಸರಕುಗಳ ಪ್ರಮಾಣ, ದಾಖಲೆಗಳ ಕೊರತೆ, ಚಾಲಕರ ವರ್ತನೆ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅಡಿಕೆ ಕಳ್ಳಸಾಗಣೆ ಹೆಚ್ಚಿರುವ ಹಿನ್ನೆಲೆಯನ್ನು ಪರಿಗಣಿಸಿ ಕಸ್ಟಮ್ಸ್ ಅಧಿಕಾರಿಗಳಿಗೆ ಸರಕು ವಶಪಡಿಸಿಕೊಳ್ಳಲು ಸಮಂಜಸ ಕಾರಣವಿತ್ತು ಎಂದು ನ್ಯಾಯಾಲಯ ಹೇಳಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ವಶಪಡಿಸಿಕೊಂಡಿದ್ದ ಲಾರಿಯನ್ನು ಸೂಕ್ತ ದಾಖಲೆ ಪರಿಶೀಲನೆಯ ನಂತರ ಅದರ ಕಾನೂನುಬದ್ಧ ಮಾಲೀಕರಿಗೆ ಬಿಡುಗಡೆ ಮಾಡಲು ನ್ಯಾಯಾಲಯ ಸೂಚಿಸಿದೆ. ಈ ತೀರ್ಪು ಅಡಿಕೆ ಕಳ್ಳಸಾಗಣೆ, ಅಕ್ರಮ ಆಮದು ವಿರುದ್ಧದ ಕಾರ್ಯಾಚರಣೆಗಳಿಗೆ ಬಲ ನೀಡುವ ಜೊತೆಗೆ, ದಾಖಲೆಗಳಿಲ್ಲದೆ ಸಾಗಾಟ ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ.
ಈ ಸುದ್ದಿಗೆ ನಿಮ್ಮ ನಿಮ್ಮ ಅಭಿಪ್ರಾಯವೇನು..? ಪ್ರತಿಕ್ರಿಯೆ ಇಲ್ಲಿ ನೀಡಿ…..
The Kohima Bench of the Gauhati High Court has upheld the seizure of 33,600 kg of areca nut worth ₹2.22 crore by Dimapur Customs in a suspected smuggling case. The court ruled that Customs authorities acted within their powers under the Customs Act and that the absence of transport documents, along with regional smuggling concerns, justified the seizure.
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ…
ಕರ್ನಾಟಕದಲ್ಲಿ ಮಳೆ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರ್ಣಾವಧಿ ಕೃಷಿ ಸಚಿವರನ್ನು ತಕ್ಷಣ ನೇಮಿಸಬೇಕು…
ವಿಶ್ವ ಯೋಗ ದಿನದ ಅಂಗವಾಗಿ ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್…
ದೇಶದಲ್ಲಿ ಮುಂಗಾರು ಮಳೆ ಕೊರತೆ 40%ಕ್ಕೆ ಏರಿಕೆಯಾಗಿದ್ದು, ಪ್ರಮುಖ ಕೃಷಿ ಪ್ರದೇಶಗಳಲ್ಲಿ ಮೋಡಗಳ…
ಕೇರಳ ಸರ್ಕಾರ ರಬ್ಬರ್ ಬೆಂಬಲ ಬೆಲೆಯನ್ನು ₹200ರಿಂದ ₹250ಕ್ಕೆ ಹೆಚ್ಚಿಸಿದೆ. ಮಾರುಕಟ್ಟೆ ಬೆಲೆ…
ಮೂರು ವರ್ಷಗಳಲ್ಲಿ ದೇಶದ ಅರಣ್ಯ ಪ್ರದೇಶಗಳಲ್ಲಿ 28 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲು…