ದ ರೂರಲ್ ಮಿರರ್.ಕಾಂ ನಲ್ಲಿ “ಹೊಸರುಚಿ” ಯ ಮೂಲಕ ಹಲಸು ಅಡುಗೆಯ ಮೂಲಕ ಗಮನ ಸೆಳೆದಿದ್ದು ದಿವ್ಯ ಮಹೇಶ್ ಅವರಿಗೆ “ಪಾಕಪ್ರವೀಣೆ” ಎಂಬ ಪ್ರಶಸ್ತಿ ಈಚೆಗೆ ಲಭ್ಯವಾಗಿದೆ. “ಆಹಾರಸ್ನೇಹಿ” ಎಂಬ ಪೇಜಿನಲ್ಲಿ 700 ಕ್ಕೂ ಮಿಕ್ಕಿದ ವಿವಿಧ ಅಡುಗೆ ತಯಾರಿಯ ಬಗ್ಗೆ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಈಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು. ನಮ್ಮ ಅಡುಗೆ ಅರಮನೆ ಪೇಜ್ ನಲ್ಲಿ ಕೂಡಾ 800 ಕ್ಕು ಅಧಿಕ ರೆಸಿಪಿ ಗಳನ್ನು ನೀಡುವ ಮೂಲಕ ಗಮನ ಸೆಳೆದಿದ್ದರು. ವಿವಿಧ ಬಗೆಯ ಅಡುಗೆಯ ಮೂಲಕ ಗಮನಸೆಳೆದಿರುವ ದಿವ್ಯ ಮಹೇಶ್ ಅವರಿಗೆ ಫುಡ್ ಡೆಕೋರೇಟಿವ್ ರಾಣಿ, ಉತ್ತಮ ಸಾರಥಿ , ಜಾಗೇರಿ ಕಾಂ, ನೆಸ್ಲೇ ಕಂಪನಿ , ಹಾಗೇ ಹಲಸಿನ ರೆಸಿಪಿ ಪೋಸ್ಟ್ ನಲ್ಲಿ ಕೂಡ ಬಹುಮಾನ ಗಳು ಲಭಿಸಿವೆ. ದ ರೂರಲ್ ಮಿರರ್.ಕಾಂ ನಲ್ಲಿ ಕಳೆದ ಸುಮಾರು 50 ದಿನಗಳಿಂದ ಹಲಸು ಅಡುಗೆ ಮನೆಗೆ ಎಂಬ ವಿಷಯದ ಹಿನ್ನೆಲೆಯಲ್ಲಿ ನಿರಂತರವಾಗಿ ಹಲಸು ರೆಸಿಪಿಗಳನ್ನು ಬರೆಯುತ್ತಿದ್ದಾರೆ. ಎಳೆ ಹಲಸು, ಹಲಸು, ಹಲಸಿನ ಹಣ್ಣು, ಹಲಸಿನ ಬೀಜ, ನೀರುಸೊಳೆ ಹೀಗೆ ಹಲಸು ಅಡುಗೆ ಮನೆಗೆ ಪ್ರವೇಶಿಸುವ ಹಾಗೂ ಆಹಾರವಾಗಿ ಹೇಗೆಲ್ಲಾ ಬಳಕೆ ಮಾಡಬಹುದು ಎಂಬುದರ ಬಗ್ಗೆ ಬರೆಯುತ್ತಿದ್ದಾರೆ.
ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…
ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ತೇವಾಂಶ ಸಂರಕ್ಷಣೆ, ಬೀಜೋಪಚಾರ ಹಾಗೂ ಕಡಿಮೆ…
ಬ್ರಿಟನ್ನಲ್ಲಿ ಮೇ–ಜೂನ್ ಉಷ್ಣ ಅಲೆಗಳಿಂದ 2,700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸಾವುಗಳಲ್ಲಿ…
ನೈಸರ್ಗಿಕ ಕೃಷಿ ಮತ್ತು ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ ರಾಜಸ್ಥಾನ ಸರ್ಕಾರ 32 ಸಂಸ್ಥೆಗಳೊಂದಿಗೆ…