ದ ರೂರಲ್ ಮಿರರ್.ಕಾಂ ನಲ್ಲಿ “ಹೊಸರುಚಿ” ಯ ಮೂಲಕ ಹಲಸು ಅಡುಗೆಯ ಮೂಲಕ ಗಮನ ಸೆಳೆದಿದ್ದು ದಿವ್ಯ ಮಹೇಶ್ ಅವರಿಗೆ “ಪಾಕಪ್ರವೀಣೆ” ಎಂಬ ಪ್ರಶಸ್ತಿ ಈಚೆಗೆ ಲಭ್ಯವಾಗಿದೆ. “ಆಹಾರಸ್ನೇಹಿ” ಎಂಬ ಪೇಜಿನಲ್ಲಿ 700 ಕ್ಕೂ ಮಿಕ್ಕಿದ ವಿವಿಧ ಅಡುಗೆ ತಯಾರಿಯ ಬಗ್ಗೆ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಈಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು. ನಮ್ಮ ಅಡುಗೆ ಅರಮನೆ ಪೇಜ್ ನಲ್ಲಿ ಕೂಡಾ 800 ಕ್ಕು ಅಧಿಕ ರೆಸಿಪಿ ಗಳನ್ನು ನೀಡುವ ಮೂಲಕ ಗಮನ ಸೆಳೆದಿದ್ದರು. ವಿವಿಧ ಬಗೆಯ ಅಡುಗೆಯ ಮೂಲಕ ಗಮನಸೆಳೆದಿರುವ ದಿವ್ಯ ಮಹೇಶ್ ಅವರಿಗೆ ಫುಡ್ ಡೆಕೋರೇಟಿವ್ ರಾಣಿ, ಉತ್ತಮ ಸಾರಥಿ , ಜಾಗೇರಿ ಕಾಂ, ನೆಸ್ಲೇ ಕಂಪನಿ , ಹಾಗೇ ಹಲಸಿನ ರೆಸಿಪಿ ಪೋಸ್ಟ್ ನಲ್ಲಿ ಕೂಡ ಬಹುಮಾನ ಗಳು ಲಭಿಸಿವೆ. ದ ರೂರಲ್ ಮಿರರ್.ಕಾಂ ನಲ್ಲಿ ಕಳೆದ ಸುಮಾರು 50 ದಿನಗಳಿಂದ ಹಲಸು ಅಡುಗೆ ಮನೆಗೆ ಎಂಬ ವಿಷಯದ ಹಿನ್ನೆಲೆಯಲ್ಲಿ ನಿರಂತರವಾಗಿ ಹಲಸು ರೆಸಿಪಿಗಳನ್ನು ಬರೆಯುತ್ತಿದ್ದಾರೆ. ಎಳೆ ಹಲಸು, ಹಲಸು, ಹಲಸಿನ ಹಣ್ಣು, ಹಲಸಿನ ಬೀಜ, ನೀರುಸೊಳೆ ಹೀಗೆ ಹಲಸು ಅಡುಗೆ ಮನೆಗೆ ಪ್ರವೇಶಿಸುವ ಹಾಗೂ ಆಹಾರವಾಗಿ ಹೇಗೆಲ್ಲಾ ಬಳಕೆ ಮಾಡಬಹುದು ಎಂಬುದರ ಬಗ್ಗೆ ಬರೆಯುತ್ತಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…
ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…
ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…
ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…
ಜಾಗತಿಕ ತಾಪಮಾನ ಪ್ರತಿ 1 ಡಿಗ್ರಿ ಏರಿದರೆ ಭಾರತದ ಭತ್ತದ ಇಳುವರಿ ಶೇ.6.6ರಷ್ಟು…
ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…