ರಾಮ ಮಂದಿರದ ಬಗ್ಗೆ ಇದು ತಿಳಿದಿರಲಿ…| 1992 ರಿಂದ 2024 ರವರೆಗೆ…..

January 15, 2024
3:18 PM

ಜನವರಿ 22, ಇಡೀ ವಿಶ್ವವೇ ಭಾರತದತ್ತ ಕಾತುರದಿಂದ ಕಾಯುತ್ತಿರುವ ದಿನ.  ಕೋಟ್ಯಾಂತರ ಹಿಂದುಗಳ(Hindus) ಕನಸು‌ ನನಸಾದ ದಿನ. 14 ವರ್ಷ ವನವಾಸ ಮುಗಿಸಿ ನಾಡಿಗೆ ವಾಪಾಸಾದ ಶ್ರೀ ರಾಮನನ್ನು(Shri Rama) ಮರಳಿ ನಾಡಿನಾದ್ಯಂತ ಸ್ವಾಗತಿಸಿದ ಸಂಭ್ರಮ ಮತ್ತೆ ಅಯೋಧ್ಯೆಯಲ್ಲಿ(Ayodya) ಮರುಕಳಿಸುತ್ತಿದೆ. ರಾಮಲಲ್ಲಾನ(Ramlalla) ಪ್ರತಿಷ್ಠಾಪನಾ ದಿನವಿದು. ಅಯೋಧ್ಯೆ ರಾಮಮಂದಿರ(Rama mandir) ಕಟ್ಟಲು ದೇಶದ ನಾನಾ ಭಾಗಗಳಿಂದ ನಾನಾ ತರದ ಉಡುಗೊರೆಗಳನ್ನು(Gifts) ನೀಡಲಾಗುತ್ತಿದೆ. ಜನ ತಮ್ಮದೇ ರೀತಿಯ ಭಕ್ತಿಯನ್ನು ತೋರುತ್ತಿದ್ದಾರೆ.  ರಾಮಮಂದಿರ ಹೋರಾಟದ ಸಂಕ್ಷಿಪ್ತ ವಿವರ ಹೀಗೆ ಇದೆ..

– ರಾಮ ರಥಯಾತ್ರೆ ಶುರುವಾದದ್ದು 1992
– ರಾಮ ಜನ್ಮಭೂಮಿಗೆ ಹುತಾತ್ಮರಾದವರು 2000 ಹಿಂದೂ ಕರಸೇವಕರು..
– ರಾಮ ಮಂದಿರದ ಒಟ್ಟು ಜಾಗ 70ಎಕರೆ, ಸುಪ್ರಿಂ ಕೋರ್ಟ್ ಆದೇಶದ ಮೂಲಕ ಪಡೆದಿದ್ದು 2.7ಎಕರೆ ಜಾಗ

– ಸುಪ್ರೀಂ ಮಂದಿರ ಕಟ್ಟಲು ಆದೇಶ ಬಂದಿದ್ದು 2019
– ರಾಮ ಮಂದಿರ ಕಟ್ಟಲು ಶಂಕುಸ್ಥಾಪನೆ 2020
– ರಾಮ ಮಂದಿರದ ಮೊದಲ ಹಂತ ಸಂಪೂರ್ಣ2024
– ರಾಮಲಾಲ ( ಬಾಲ ರಾಮ) ಪ್ರಾಣ ಪ್ರತಿಷ್ಠಾಪನೆ 22 ಜನವರಿ 2024
– ರಾಮ ಮಂದಿರಕ್ಕೆ ಭಾರತೀಯರು ಕೊಟ್ಟ ದೇಣಿಗೆ ಒಟ್ಟು ಸುಮಾರು 5300 ಕೋಟಿ
– ಉತ್ತರದ ಪ್ರದೇಶದಿಂದ 2100 ಕೆಜಿ ತೂಕದ ಅಷ್ಟದಾತುಗಳ ಗಂಟೆ
– ತೆಲಂಗಾಣದಿಂದ 9 ಕೆ ಜಿ ತೂಕದ ಬಂಗಾರದ ಪಾದುಕೆಗಳು

– ಸೂರತ್ ಬಂಗಾರದ ವ್ಯಾಪಾರಿಯಿಂದ 5000 ಅಮೇರಿಕನ್ ವಜ್ರಗಳಿಂದ ತಯಾರಾದ ನೆಕ್ಲೇಸ್
– ನೇಪಾಳದ ಜನಕನ ಊರಿನಿಂದ 3000 ವಿವಿಧ ಬೆಳ್ಳಿ ಬಂಗಾರದ ಉಡುಗೊರೆಗಳು
– ಉತ್ತರ ಪ್ರದೇಶದ ಬೀಗದ ವ್ಯಾಪಾರಿಯಿಂದ 400ಕೆಜಿ ತೂಕದ 10 ಅಡಿಯ ಬೀಗ
– ಉತ್ತರ ಪ್ರದೇಶದ ತರಕಾರಿ ವ್ಯಾಪಾರಿಯಿಂದ 8 ದೇಶಗಳ ಸಮಯ ತೋರಿಸುವ ಬೃಹತ್ ಗಡಿಯಾರ

– ಅಹಮದಾಬಾದ್ ನಿಂದ 11.5 ಕೆಜಿ ಬೆಳ್ಳಿ ಬಂಗಾರ ಮಿಶ್ರಿತ ಬಿಲ್ಲು ಬಾಣ
– ಗುಜರಾತಿನಿಂದ 108ಅಡಿಯ 3614 ಕೆಜಿ ತೂಕದ ಕಿಲೋ ಮೀಟರ್ ಗಳಷ್ಟು ಸುವಾಸನೆ ಬೀರುವ ಒಂದೆ ಅಗರಬತ್ತಿ
– ಗುಜಾರಾತಿನಿಂದ ಒಟ್ಟು 5500 ಕೆಜಿಯಲ್ಲಿ ಕಂಚಿನ 7 ಧ್ವಜ ಸ್ಥಂಭಗಳು ಸಿದ್ದವಾಗಿವೆ

– ನಾಗಪುರದ ಬಾಣಸಿಗನಿಂದ 7000 ಕೆಜಿ ರಾಮ ಹಲ್ವಾ
– ತಿರುಪತಿಯಿಂದ 1 ಲಕ್ಷ ಲಡ್ಡು ಪ್ರಸಾದ
– ಮಥುರಾದಿಂದ 200 ಕೆಜಿ ಲಡ್ಡು ಪ್ರಸಾದ
– ವಡೋದರಾದ ಕೃಷಿಕನಿಂದ 1100 ಕೆಜಿ ಪಂಚದಾತು ದೀಪ 851 ಕೆ ಜಿ ತುಪ್ಪ ಹಿಡಿಸುವ 8 ಅಡಿ ಅಗಲ 9 ಅಡಿ ಉದ್ದದ ಜ್ಯೋತಿ
– ಕರ್ನಾಟಕದಿಂದ ವಿಶ್ವವೇ ಕೈ ಮುಗಿಯುವ ರಾಮಲಾಲ ವಿಗ್ರಹ

Source : Digital Media

Various gifts are being given from different parts of the country to build Ayodhya Rama Mandir. People are showing their own kind of devotion.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!
March 4, 2026
10:20 PM
by: ಮಿರರ್‌ ಡೆಸ್ಕ್
ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!
March 4, 2026
12:01 PM
by: ಮಿರರ್‌ ಡೆಸ್ಕ್
ನೈಸರ್ಗಿಕ ಕೃಷಿಯಿಂದ ರೈತರ ಆದಾಯ ಹೆಚ್ಚಳ
March 4, 2026
10:56 AM
by: ಮಿರರ್‌ ಡೆಸ್ಕ್
ಭಾರತದಲ್ಲಿ ಮಳೆಗಾಲದ ತೀವ್ರತೆ ಹೆಚ್ಚಳ | ತಾಪಮಾನ ಏರಿಕೆಯಿಂದ ‘ಸೂಪರ್ ಚಾರ್ಜ್’ ಆಗುತ್ತಿರುವ ಮಾರುತ
March 4, 2026
7:27 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror