Opinion

ಕಣಜಗಳ ನೈಸರ್ಗಿಕ ನಿಯಂತ್ರಣ ನಿಮಗೆ ಗೊತ್ತೆ? | ಇದು ನೈಸರ್ಗಿಕ ಕೀಟ ನಿಯಂತ್ರಕಗಳಾಗಿ ಕೆಲಸ ಮಾಡುತ್ತೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಣಜ, ಆನೆ ಕಡಜಿರ, ಹಾರ್ನೆಟ್ ಎಂದೆಲ್ಲಾ ಕರೆವ ಇವು ಸಂಘ ಜೀವಿ, ಇದರ ಗೂಡನ್ನು ಕಂಡರಂತೂ ಭಯಗೊಂಡು ಗೂಡಿನತ್ತ ಸುಳಿಯದೆ ದೂರ ಹೋಗುತ್ತಾರೆ. ಕಾರಣ ಇದರ ಕಡಿತ ವಿಪರೀತ ಉರಿ ನೋವು ಸೆಳೆತಗಳಿಂದ ಕೂಡಿರುತ್ತದೆ ಇದರ ಹಿಂಬಾಗದ ಕೊಂಡಿಯಿಂದ ವಿಷ ಚುಚ್ಚಿದರೆ ಮುಗಿಯಿತು ಗಂಟೆಗಟ್ಟಲೆನೋವನ್ನು ತಾಳಲು ರೆಡಿ ಆಗಬೇಕು. ಇಂತಹ ಕಣಜಗಳ ಗೂಡುಗಳು ಮನೆ ಹೊಲಗಳ ಅಕ್ಕ ಪಕ್ಕ ಎಲ್ಲಿಯೇ ಕಂಡುಬಂದರೂ ಮೊದಲು ಅವುಗಳನ್ನು ನಮ್ಮಲ್ಲಿ ಬೆಂಕಿಯಿಂದ ಸುಟ್ಟು ಹಾಕುತ್ತಾರೆ.

Advertisement

ಕಣಜಗಳು ಇತರ ಕೀಟ ಹಾಗು ಲಾರ್ವಾಗಳನ್ನು ಭಕ್ಷಣೆ ಮಾಡುವುದರ ಮೂಲಕ ನೈಸರ್ಗಿಕ ಕೀಟ ನಿಯಂತ್ರಕಗಳಾಗಿ ಕೆಲಸ ಮಾಡುತ್ತದೆ, ಕೆಲ ದೇಶಗಳಲ್ಲಿ ಇವುಗಳ ಗೂಡಿನಿಂದ ಸಾಂಪ್ರದಾಯಕ ಔಷಧಿ ತಯಾರಿಸುತ್ತಾರೆ ಎಂಬ ಪ್ರತೀತಿ ಇದೆ, ಇದರ ವಿಷವನ್ನು ಔಷಧಿ ತಯಾರಿಕೆಯಲ್ಲಿ ಬಳಸಬಹುದೇ ಎಂದು ಸಂಶೋಧನೆಗಳು ನಡೆಯುತ್ತಿವೆ. ಕಣಜಗಳ ಗೂಡುಗಳು ಮನೆ ಅಕ್ಕಪಕ್ಕ ಇದ್ದರೆ ಹೊಗೆ ಹಾಕಿ ಓಡಿಸಿ ಇಲ್ಲವೆ ರಾತ್ರಿ ವೇಳೆ ಗೂಡನ್ನು ಚೀಲಗಳಲ್ಲಿ ತುಂಬಿ ಬೇರೆಡೆ ಸಾಗಿಸಿ, ಇಲ್ಲವೆ ರಸಾಯನಿಕಗಳನ್ನು ಸಿಂಪಡಿಸಿ ಹುಳುಗಳ ಸಮೇತ ಗೂಡನ್ನು ನಾಶ ಮಾಡಿ ಎಂಬ ಮಾಹಿತಿ ಎಲ್ಲಾ ಕಡೆ ಸಿಗುತ್ತದೆ, ಆದರೆ ಕೆಲವು ಸಸ್ಯಗಳನ್ನು ಬಳಸಿ ಈ ಕಣಜಗಳನ್ನು ನೈಸರ್ಗಿಕವಾಗಿ ಹೇಗೆ ಓಡಿಸಬಹುದು ಎಂಬ ವಿಧಾನ ನೋಡೋಣ.

ಕೆಲ ಸಸ್ಯಗಳು ಕಣಜಗಳ ನೈಸರ್ಗಿಕ ಪ್ರತಿರೋದಕಗಳಾಗಿವೆ, ಅವುಗಳಲ್ಲಿ ನಮ್ಮಲ್ಲಿ ಬೆಳೆವ ಮುಳ್ಳು ಕೆಂಜಿಗೆ ,ಈಜಿ ಮುಳ್ಳು ಕೆಂಚಿಗೆ, ಕೊಮ್ಮೆ ಎಂದೆಲ್ಲಾ ಕರೆವ ಇದರ ಇಂಗ್ಲೀಷ್ ಹೆಸರು Hultholia mimosoides. ಈ ಮುಳ್ಳು ಗಿಡದ ಸೊಪ್ಪನ್ನು ತಂದು ರಾತ್ರಿ ವೇಳೆ (ರಾತ್ರಿ ವೇಳೆ ಕಣಜಗಳ ಚಟುವಟಿಕೆ ಇರುವುದಿಲ್ಲ) ಗೂಡಿನ ಸಮೀಪ ಇಟ್ಟರೆ ನಿಮ್ಮ ಕೆಲಸ ಮುಗಿಯಿತು 15-20 ದಿನಗಳಲ್ಲಿ ಕಣಜಗಳು ತಮ್ಮ ಗೂಡಿನಲ್ಲಿರುವ ಮೊಟ್ಟೆ ಲಾರ್ವಾಗಳನ್ನು ಬೆಳೆಸಿಕೊಂಡು ಪಲಾಯನ ಮಾಡುತ್ತವೆ. ಹಾಗೇಯೇ ದೊಡ್ಡ ಪತ್ರೆ, ನಿಂಬೆ ಹುಲ್ಲು. ಇವು ಕೂಡ ಕಣಜಗಗಳ ನೈಸರ್ಗಿಕ ಪ್ರತಿರೋಧಕಗಳಾಗಿವೆ, ಇವುಗಳನ್ನು ಮನೆಯ ಅಕ್ಕ ಪಕ್ಕ ಬೆಳೆಸುವುದರಿಂದ ಕಣಜಗಳು ಗೂಡು ನಿರ್ಮಿಸದಂತೆ ತಡೆಯಬಹುದು. ಈ ಕಣಜಗಳ ಪೀಡನೆ ಹೆಚ್ಚುವುದಕ್ಕೆ ನಿಸರ್ಗದ ಏರುಪೇರುಗಳೆ ಕಾರಣ ಇರಬಹುದು, ಇದರ ಬಗೆಗೆ ಮಾಹಿತಿ ಎಲ್ಲಿಯೂ ಸಿಗುತ್ತಿಲ್ಲ ಒಟ್ಟಿನಲ್ಲಿ ಇವುಗಳ ಗೂಡನ್ನು ಕಂಡ ಕಂಡಲ್ಲಿ ಸುಟ್ಟು ಹಾಕದೆ ನೈಸರ್ಗಿಕವಾಗಿ ಓಡಿಸುವ ಪ್ರಯತ್ನ ಮಾಡೋಣ.

ಬರಹ :
ನಾಗರಾಜ್ ಬೆಳ್ಳೂರು

(ವ್ಯಾಟ್ಸಪ್‌ ಮೂಲಕ)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮೇ.9 | ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯ ನಾಟಕ | ಸಂತೋಷದಿಂದ ನಗಲು ಒಂದು ವೇದಿಕೆ

ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಹೊಸತನದ ಶೋರೂಮ್ ಅನಾವರಣದ ಅಂಗವಾಗಿ ಮೇ 9…

1 hour ago

ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |

ಮುಳಿಯ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ…

1 hour ago

ಧ್ರುವ ಯೋಗ ಯಾವುದರ ಸಂಕೇತ..? | ಯಾವ ರಾಶಿಯವರಿಗೆ ಸದ್ಯ ಈ ಯೋಗ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 hour ago

ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ…

12 hours ago

ರಾಜ್ಯದ 6 ಜಿಲ್ಲೆಗಳಲ್ಲಿ ಶೀಥಲೀಕರಣ ಘಟಕ ನಿರ್ಮಾಣ

ರಾಜ್ಯದ 6 ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗುವಂತೆ ಶೀಥಲೀಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದು…

12 hours ago

ಕೇಂದ್ರದ ಬೆಂಬಲಕ್ಕಾಗಿ  ವಿಶೇಷ ಜಾಥಾ | ಪಕ್ಷಾತೀತವಾಗಿ  ಬೆಂಬಲ

ದೇಶದ  ಸೈನಿಕರಿಗೆ ಗೌರವ ಸಲ್ಲಿಸಿ  ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ  ನಾಳೆ…

13 hours ago