ಉಕ್ರೇನ್ನಲ್ಲಿ ಯುದ್ಧ ನಡೆಯುತ್ತಿದ್ದರೂ ಆಂಧ್ರಪ್ರದೇಶ ಮೂಲದ ಯೂಟ್ಯೂಬರ್ ಹಾಗೂ ವೈದ್ಯ ಡಾ. ಗಿರಿಕುಮಾರ್ ಪಾಟೀಲ್ ಅಲ್ಲೇ ಇದ್ದಾರೆ. ಅವರು ಸಾಕಿರುವ ಚಿರತೆಗಳನ್ನು ಬಿಟ್ಟು ಬರುತ್ತಿಲ್ಲ.ತಾನು ಸತ್ತರೂ, ಬದುಕಿದರೂ ಚಿರತೆಗಳೊಂದಿಗೆ ಎಂದು ಹೇಳಿದ್ದಾರೆ.
ಗಿರಿ ಕುಮಾರ್ ಪಾಟೀಲ್ ಅವರು ಆಂಧ್ರಪ್ರದೇಶದ ತನುಕು ಮೂಲದವರು. ಉಕ್ರೇನ್ ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಯೂಟ್ಯೂಬ್ ನಲ್ಲಿ ಜಾಗ್ವಾರ್ ಕುಮಾರ್ ಎಂದು ಎಲ್ಲರಿಗೂ ಪರಿಚಿತರಾಗಿದ್ದಾರೆ. ಇದೀಗ ಉಕ್ರೇನ್ ರಷ್ಯಾ ಯುದ್ಧ ನಡೆಯುತ್ತಿದೆ. ಅನೇಕರು ಅವರವರ ದೇಶಗಳಿಗೆ ತೆರಳಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನೂ ಸಾಕಷ್ಟು ಸಂಖ್ಯೆಯಲ್ಲಿ ಕರೆ ತರಲಾಗಿದೆ. ಈ ವೈದ್ಯರು ಮಾತ್ರಾ ಭಾರತಕ್ಕೆ ಬರಲು ಅವಕಾಶ ಇದ್ದರೂ ಬರಲು ಒಪ್ಪಿಲ್ಲ. ಉಕ್ರೇನ್ನಿಂದ ಹೊರಟರೆ, ಇಲ್ಲಿ ಚಿರತೆಗಳು ಹಸಿವಿನಿಂದ ಸಾಯುವುದು ಖಾತ್ರಿ. ಅವುಗಳಿಗೆ ಇಲ್ಲಿ ಆಹಾರ ನೀಡುವವರು ಯಾರೂ ಇಲ್ಲ, ಆದ್ದರಿಂದ ಈ ಪರಿಸ್ಥಿತಿಯಲ್ಲಿ ನಾನು ಅವುಗಳನ್ನು ಬಿಟ್ಟು ಹೋಗುವುದಿಲ್ಲ ಎಂದು ಘೋಷಿಸಿದ್ದಾರೆ.
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…