ಉಡುಪಿಯಲ್ಲಿ ಜರುಗಿದ ಯಕ್ಷಗಾನ ಸಮ್ಮೇಳನದಲ್ಲಿ ನಾ. ಕಾರಂತ ಪೆರಾಜೆಯವರ ಯಕ್ಷಗಾನ ಕುರಿತ ಬರಹಗಳ ಗುಚ್ಛ ದೊಂದಿ ಅನಾವರಣಗೊಂಡಿತು. ಒಟ್ಟು ಹದಿನೆಂಟು ಪುಸ್ತಕಗಳು ಸಮ್ಮೇಳನದಲ್ಲಿ ಬಿಡುಗಡೆಗೊಂಡವು.
ಸಮ್ಮೇಳನಾಧ್ಯಕ್ಷರೊಂದಿಗಿನ ಮಾತುಕತೆ, ದಶಾವತಾರಿ ಕೆ. ಗೋವಿಂದ ಭಟ್ಟರ ಸಂದರ್ಶನ, ಕರುಣ ರಸದ ಸಾಮರ್ಥ್ಯ, ಗೊಂಬೆಗಳು ತಂದ ಸಾಂಸ್ಕೃತಿಕ ಮೌಲ್ಯಗಳು.. ಹೀಗೆ ವಿಷಯ ವೈವಿಧ್ಯಗಳು ದೊಂದಿಯ ಹೂರಣಗಳು. ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪುಸ್ತಕದ ಪ್ರಕಾಶಕರು. ನಾ. ಕಾರಂತರ ಸಾಮಗ ಪಡಿದನಿ ಕೃತಿಗೆ ಈ ಹಿಂದೆ ಯಕ್ಷಗಾನ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪ್ರಾಪ್ತವಾಗಿರುವುದು ಉಲ್ಲೇಖನೀಯ. ದೊಂದಿ ಪುಸ್ತಕವು ನಾ.ಕಾರಂತ ಅವರ 49 ನೇ ಕೃತಿಯಾಗಿದೆ.
Advertisement

Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

