ಹಬ್ಬ ಹರಿದಿನಗಳು, ಕಾರ್ಯಕ್ರಮಗಳು ಪರಿಸರಕ್ಕೆ ಧಕ್ಕೆ ತರದಿರಲಿ | ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ

August 16, 2024
12:25 PM

ನಾವು ಸ್ವಾತಂತ್ರ್ಯ ದಿನಾಚರಣೆಯನ್ನು(Independence day) ದೇಶದ ಸ್ವ್ಯಾತಂತ್ರ್ಯಕ್ಕಾಗಿ ಮಡಿದ ಹೋರಾಟಗಾರರಿಗೆ ನಮನ ಸಲ್ಲಿಸಲು ಮಾಡುತ್ತಿದ್ದೇವೆಯಾ..? ಇಲ್ಲಾ ನಮ್ಮ ಪ್ರಕೃತಿಯನ್ನು ಹಾಳು ಮಾಡಲು ಮಾಡುತ್ತಿದ್ದೇವಾ ಅನ್ನುವ ಅನುಮಾನ ಮೂಡುತ್ತದೆ. ಮುಂಬರುವ ದಿನಗಳಲ್ಲಿ ನಾಡಹಬ್ಬ, ಗಣ್ಯಾತಿಗಣ್ಯರು ಮಾಡುವ ಕಾರ್ಯಕ್ರಮ, ಸಾಮೂಹಿಕವಾಗಿ ಮಾಡುವ ಯಾವುದೇ ಕಾರ್ಯಕ್ರಮಗಳಲ್ಲಿ ಅದಕ್ಕಾಗಿ ಬಳಸುವ, ದಾನ, ಮಂಟಪಗಳು, ಚಿತ್ರಗಳು, ಸರ್ಕಾರೀ ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿ, ಕಣ್ಣಿಗ ಕಾಣುವಂತೆ ಚಿತ್ರಸಹಿತ, ಪ್ಲಾಸ್ಟಿಕ್, ರಬ್ಬರ್ ಇತರೆ ತ್ಯಾಜ್ಯದಿಂದಾಗುವ ತೊಂದರೆಗಳ ವಿವರಣೆ ಇರುವ ಫಲಕ ಕಡ್ಡಾಯ ಮಾಡಬೇಕು.

ಈ ಮಾಹಿತಿಯನ್ನು ಓದಿದ ಕೆಲವೇ ಕೆಲವರಾದರು ಸಹೖದಯಿಗಳು, ಕಾರ್ಯುಪ್ರವೃತ್ತರಾದರೆ ಸಾಕು. ಒಬ್ಬರಿಂದ ಒಬ್ಬರನ್ನು ಜಾಗೃತಗೊಳಿಸಲು ಸಾಧ್ಯವಾದರೆ ಆ ಜಾಗೃತದಿಂದಾಗುವ ಮುಂದಿನ ಕಾರ್ಯ ಸದಾ ಸಾಕಾರದೆಡೆ ಇರುತ್ತದೆ. ಇದು ಸರಿ ಎನಿಸಿದರೆ, ಇದಕ್ಕೆ ಪೂರಕವಾದ ಚಿತ್ರಗಳು, ಸೂಕ್ತ ಸಾಕ್ಷಚಿತ್ರಗಳನ್ನು ಕಲೆಹಾಕಿ, ಸಂಭಂದ ಪಟ್ಟ ಅಧಿಕಾರಿಗಳಿಗೆ ಸವಿವರ, ಸಚಿತ್ರಸಹಿತ, ದೂರು ನೀಡಿ. ಹಾನಿ ಕಾರಕ ವಸ್ತುಗಳನ್ನಳ ತಯಾರಿಕೆ ಖಡ್ಡಾಯವಾಗಿ ನಿಲ್ಲಿಸಲು, ಬಳಕೆಗೆ ನಿರ್ದೇಶನಗಳನ್ನು ಹೇರಲು ಪತ್ರಮುಕೇನ ಆಗ್ರಹಿಸೋಣ. ಆಂದೋಲನಗಳನ್ನು ಮಾಡೋಣ, ತಯಾರಿಕಾ ಘಟಕಗಳೆದುರು ಸತ್ಯಾಗ್ರಹ ಮಾಡೋಣ. ಮಾರಾಟಗಾರರಿಗೆ ಮಾರದಂತೆ ತಾಕೀತು ಮಾಡೋಣ.

ಇದಕ್ಕಾಗಿ ಸಹಕರಿಸಲು, ಸಲಹೆ, ಸಲಕರಣೆಗೆ, ಸಹಭಾಗಿತ್ವಕ್ಕೆ ಕೈಜೋಡಿಸಿ, ಆದಿ ಇಂದ ಅಂತ್ಯದವರೆಗೆ ಕೈ ಕೊಡದೆ, ಕೈ ಬಿಡದೆ ಸರಪಳಿಯಂತೆ, ತಡೆ ಗೋಡೆಗಳಂತೆ ನಿಂತು ನಿಭಾಯಿಸುವುದಕ್ಕೆ ಬದ್ದರಾಗಿ ಬನ್ನಿ. ನಮ್ಮಿಂದಾದ ಅಳಿಲು ಸೇವೆ ಒಬ್ಬರಿಗೆ ಒಂದು ಕ್ಷಣ ಹಾಯಾಗಿದೆ ಎಂದೆನಿಸಿದರೂ ನಮ್ಮ ಕಾರ್ಯ, ಜೀವನ ಸಾರ್ಥಕವಾದಂತೆ.
ಬನ್ನಿ ಕೖ ಜೋಡಿಸಿ, ನಡೆಸಿ, ವಿಪುಲವಾದ ಫಲ ನೀಡಲು ಪಣತೊಟ್ಟು ನಿಲ್ಲಿ…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ
September 11, 2026
4:00 PM
by: ಸಾಯಿಶೇಖರ್ ಕರಿಕಳ
ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು
September 11, 2026
10:42 AM
by: ದ ರೂರಲ್ ಮಿರರ್.ಕಾಂ
ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?
September 10, 2026
10:45 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror