Advertisement
Opinion

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ | ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ |

Share

ಬರಗಾಲ(Drought) ಬಂದಾಗ ಬಾಯಿ ಬಡಿಕೊಳ್ಳುವವರೇ ಹೆಚ್ಚು. ನೀರಿಲ್ಲ, ಸೆಕೆ, ಮಳೆ ಇಲ್ಲ, ಬೆಳೆಗಳಿಗೆ ನೀರಿಲ್ಲ ಎಂದು ತಲೆಮೇಲೆ ಮೇಲ ಕೈ ಹೊತ್ತು ಕುಳಿತುಕೊಳ್ಳುವ ಮಂದಿ ಅದಕ್ಕೆ ಬೇಕಾದ ಮುಂಜಾಗೃತ ಕ್ರಮಗಳನ್ನು(Precaution) ತೆಗೆದುಕೊಳ್ಳುವುದಿಲ್ಲ. ಪ್ರತಿ ವರ್ಷ ಬೀಳುವ ಮಳೆಯ ನೀರನ್ನು(Rain water) ಹಿಡಿದಿಡಿಯುವ ಕ್ರಮಗಳನ್ನು ಕೈಗೊಂಡರೆ ಈ ಯಾವ ಸಮಸ್ಯೆಗಳು ಎದುರಾಗುವುದಿಲ್ಲ.

Advertisement
Advertisement
Advertisement
Advertisement

ನಗರಗಳೆಲ್ಲ ಕಾಂಕ್ರೀಟ್‌ ಮಯವಾಗಿ ಮಳೆ ನೀರು ಅಂತರ್ಜಲ(Underground water) ಸೇರಲು ಯಾವ ಮಾರ್ಗಗಳು ಇಲ್ಲ. ನೆಲಕ್ಕೆ ಬಿದ್ದ ನೀರೆಲ್ಲಾ ಸುಮ್ಮನೆ ಹರಿದು ಚರಂಡಿ(Drainage) ಸೇರುತ್ತದೆ. ಮಳೆ ಕೊಯ್ಲು ಮುಖ್ಯವಾದ ಕ್ರಮ. ಆದರೆ ಅದನ್ನು ಅನುಸರಿಸುವವರು ಕೇವಲ ಬೆರಳೆಣೀಕೆ ಮಂದಿ ಮಾತ್ರ. ಅದೇ ರೀತಿ ಜಮೀನುಗಳಲ್ಲಿ ಮಳೆ ನೀರನ್ನು ಹಿಡಿದಿಡುಯುವ ಕಾರ್ಯವನ್ನು ಮಾಡಿದರೆ ರೈತರಿಗೆ(Farmer) ಬರಗಾಲದಂತ ಸಮಸ್ಯೆಗಳಿಂದ ಅರ್ದದಷ್ಟು ತಪ್ಪಿಸಿಕೊಳ್ಳಬಹುದು. ಈ ಬಗ್ಗೆ  ಡಾ. ಎಂ. ಬಿ. ಪಟ್ಟಣಶೆಟ್ಟಿ, ವಿಜಯಪುರ ಒಂದೊಳ್ಳೆ ವಿವರವನ್ನು ನೀಡುತ್ತಾರೆ.

Advertisement

ಒಂದು ಮಿಲಿ ಮೀಟರ್ (mm) ಮಳೆಯಾದರೆ, ಒಂದು ಎಕರೆ ಪ್ರದೇಶದಲ್ಲಿ ಸುಮಾರು 4,000 ಲೀಟರ್ ನೀರು ಬಂದಂತಾಯ್ತು (ಒಂದು ಎಕರೆ ಅಂದರೆ 4000 ಚದುರ ಮೀಟರ್). ನಮ್ಮ ವಿಜಯಪುರ ಜಿಲ್ಲೆಯ ಸರಾಸರಿ ವಾರ್ಷಿಕ ಮಳೆ ಪ್ರಮಾಣ 570 mm, ಅಂದರೆ, ಒಂದು ಎಕರೆ ಪ್ರದೇಶದಲ್ಲಿ ಸುಮಾರು 22,80,000 ಲೀಟರ್ ನೀರು ಮಳೆಯಿಂದ ದೊರೆಯತ್ತದೆ.

ಆದರೆ, ಸರಾಸರಿ ಸುಮಾರು ಶೇಕಡಾ 50 ರಷ್ಟು ನೀರು, ಸರಿಯಾದ ಮಣ್ಣು & ನೀರಿನ ಸಂರಕ್ಷಣಾ ಕ್ರಮಗಳಿಲ್ಲದ ಕಾರಣ ಜಮೀನ ಹೊರಗಡೆ ಹರಿದುಹೋಗುತ್ತದೆ. ಅದರ ಜೊತೆಗೆ ಅಪಾರ ಪ್ರಮಾಣದಲ್ಲಿ ಫಲವತ್ತಾದ ಮಣ್ಣೂ ಸಹ ಕೊಚ್ಚಿಕೊಂಡು ಹೋಗಿ, ಕಾಲಕ್ರಮೇಣ ಭೂಮಿ ಬರಡಾಗುತ್ತದೆ. ಶೇಕಡಾ 25 ರಷ್ಟು ನೀರು ಆವಿಯಾಗಿ ಹೋಗುತ್ತದೆ. ಇನ್ನು ನಮ್ಮ ಬೆಳೆಗಳಿಗೆ ಮತ್ತು ಅಂತರಜಲ ಮರುಪೂರಣಕ್ಕೆ ದೊರೆಯುವದು ಒಟ್ಟು ಬಿದ್ದ ಮಳೆಯಲ್ಲಿ ಕೇವಲ ಶೇಕಡಾ 25 ರಷ್ಟು ಮಾತ್ರ. ಆದ್ದರಿಂದಲೇ ಅಂತರಜಲದ ಮಟ್ಟ ದಿನೆದಿನೇ ಕುಸಿಯುತ್ತಿರುವುದು ಮತ್ತು ಬೋರವೆಲ್ ಗಳು & ಬಾವಿಗಳು ಒಣಗುತ್ತಿರುವುದು.

Advertisement

ಬಿದ್ದ ಮಳೆನೀರನ್ನು ಅಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುವದು ಬಹಳ ಅವಶ್ಯಕ. ಬಿದ್ದ ಮಳೆಯಲ್ಲೇ ನಾವು ಕೃಷಿ ಮಾಡುವದು ಅನಿವಾರ್ಯ. ಆದ್ದರಿಂದ, ಮಣ್ಣು ಮತ್ತು ನೀರಿನ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವದು ಅತ್ಯವಶ್ಯಕವಾಗಿದೆ. (ಮೇಲೆ ತಿಳಿಸಿದ ಪ್ರಮಾಣಗಳು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸ್ವಲ್ಪ ಹೆಚ್ಚುಕಡಿಮೆ ಆಗಬಹುದು).

ಬರಹ :
ಡಾ. ಎಂ. ಬಿ. ಪಟ್ಟಣಶೆಟ್ಟಿ
, ವಿಜಯಪುರ.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ

ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ  ಸುಮಾರು 250…

15 hours ago

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ

ರಾಜ್ಯದ ಕಾಡಂಚಿನ ಪ್ರದೇಶದಲ್ಲಿ  ಮಾನವ ಮತ್ತು  ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…

15 hours ago

ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ಜಾರಿಗೆ ರಾಜ್ಯ ರೈತ ಸಂಘಟನೆಗಳ ಮನವಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…

15 hours ago

ಗ್ರೇಟರ್ ಹೆಸರಗಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಶುದ್ಧ ಪರಿಸರಕ್ಕೆ ಸಹಕಾರಿ | ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ

ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…

15 hours ago

ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ

ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…

15 hours ago