Advertisement
Opinion

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ | ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ |

Share

ಬರಗಾಲ(Drought) ಬಂದಾಗ ಬಾಯಿ ಬಡಿಕೊಳ್ಳುವವರೇ ಹೆಚ್ಚು. ನೀರಿಲ್ಲ, ಸೆಕೆ, ಮಳೆ ಇಲ್ಲ, ಬೆಳೆಗಳಿಗೆ ನೀರಿಲ್ಲ ಎಂದು ತಲೆಮೇಲೆ ಮೇಲ ಕೈ ಹೊತ್ತು ಕುಳಿತುಕೊಳ್ಳುವ ಮಂದಿ ಅದಕ್ಕೆ ಬೇಕಾದ ಮುಂಜಾಗೃತ ಕ್ರಮಗಳನ್ನು(Precaution) ತೆಗೆದುಕೊಳ್ಳುವುದಿಲ್ಲ. ಪ್ರತಿ ವರ್ಷ ಬೀಳುವ ಮಳೆಯ ನೀರನ್ನು(Rain water) ಹಿಡಿದಿಡಿಯುವ ಕ್ರಮಗಳನ್ನು ಕೈಗೊಂಡರೆ ಈ ಯಾವ ಸಮಸ್ಯೆಗಳು ಎದುರಾಗುವುದಿಲ್ಲ.

ನಗರಗಳೆಲ್ಲ ಕಾಂಕ್ರೀಟ್‌ ಮಯವಾಗಿ ಮಳೆ ನೀರು ಅಂತರ್ಜಲ(Underground water) ಸೇರಲು ಯಾವ ಮಾರ್ಗಗಳು ಇಲ್ಲ. ನೆಲಕ್ಕೆ ಬಿದ್ದ ನೀರೆಲ್ಲಾ ಸುಮ್ಮನೆ ಹರಿದು ಚರಂಡಿ(Drainage) ಸೇರುತ್ತದೆ. ಮಳೆ ಕೊಯ್ಲು ಮುಖ್ಯವಾದ ಕ್ರಮ. ಆದರೆ ಅದನ್ನು ಅನುಸರಿಸುವವರು ಕೇವಲ ಬೆರಳೆಣೀಕೆ ಮಂದಿ ಮಾತ್ರ. ಅದೇ ರೀತಿ ಜಮೀನುಗಳಲ್ಲಿ ಮಳೆ ನೀರನ್ನು ಹಿಡಿದಿಡುಯುವ ಕಾರ್ಯವನ್ನು ಮಾಡಿದರೆ ರೈತರಿಗೆ(Farmer) ಬರಗಾಲದಂತ ಸಮಸ್ಯೆಗಳಿಂದ ಅರ್ದದಷ್ಟು ತಪ್ಪಿಸಿಕೊಳ್ಳಬಹುದು. ಈ ಬಗ್ಗೆ  ಡಾ. ಎಂ. ಬಿ. ಪಟ್ಟಣಶೆಟ್ಟಿ, ವಿಜಯಪುರ ಒಂದೊಳ್ಳೆ ವಿವರವನ್ನು ನೀಡುತ್ತಾರೆ.

ಒಂದು ಮಿಲಿ ಮೀಟರ್ (mm) ಮಳೆಯಾದರೆ, ಒಂದು ಎಕರೆ ಪ್ರದೇಶದಲ್ಲಿ ಸುಮಾರು 4,000 ಲೀಟರ್ ನೀರು ಬಂದಂತಾಯ್ತು (ಒಂದು ಎಕರೆ ಅಂದರೆ 4000 ಚದುರ ಮೀಟರ್). ನಮ್ಮ ವಿಜಯಪುರ ಜಿಲ್ಲೆಯ ಸರಾಸರಿ ವಾರ್ಷಿಕ ಮಳೆ ಪ್ರಮಾಣ 570 mm, ಅಂದರೆ, ಒಂದು ಎಕರೆ ಪ್ರದೇಶದಲ್ಲಿ ಸುಮಾರು 22,80,000 ಲೀಟರ್ ನೀರು ಮಳೆಯಿಂದ ದೊರೆಯತ್ತದೆ.

ಆದರೆ, ಸರಾಸರಿ ಸುಮಾರು ಶೇಕಡಾ 50 ರಷ್ಟು ನೀರು, ಸರಿಯಾದ ಮಣ್ಣು & ನೀರಿನ ಸಂರಕ್ಷಣಾ ಕ್ರಮಗಳಿಲ್ಲದ ಕಾರಣ ಜಮೀನ ಹೊರಗಡೆ ಹರಿದುಹೋಗುತ್ತದೆ. ಅದರ ಜೊತೆಗೆ ಅಪಾರ ಪ್ರಮಾಣದಲ್ಲಿ ಫಲವತ್ತಾದ ಮಣ್ಣೂ ಸಹ ಕೊಚ್ಚಿಕೊಂಡು ಹೋಗಿ, ಕಾಲಕ್ರಮೇಣ ಭೂಮಿ ಬರಡಾಗುತ್ತದೆ. ಶೇಕಡಾ 25 ರಷ್ಟು ನೀರು ಆವಿಯಾಗಿ ಹೋಗುತ್ತದೆ. ಇನ್ನು ನಮ್ಮ ಬೆಳೆಗಳಿಗೆ ಮತ್ತು ಅಂತರಜಲ ಮರುಪೂರಣಕ್ಕೆ ದೊರೆಯುವದು ಒಟ್ಟು ಬಿದ್ದ ಮಳೆಯಲ್ಲಿ ಕೇವಲ ಶೇಕಡಾ 25 ರಷ್ಟು ಮಾತ್ರ. ಆದ್ದರಿಂದಲೇ ಅಂತರಜಲದ ಮಟ್ಟ ದಿನೆದಿನೇ ಕುಸಿಯುತ್ತಿರುವುದು ಮತ್ತು ಬೋರವೆಲ್ ಗಳು & ಬಾವಿಗಳು ಒಣಗುತ್ತಿರುವುದು.

ಬಿದ್ದ ಮಳೆನೀರನ್ನು ಅಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುವದು ಬಹಳ ಅವಶ್ಯಕ. ಬಿದ್ದ ಮಳೆಯಲ್ಲೇ ನಾವು ಕೃಷಿ ಮಾಡುವದು ಅನಿವಾರ್ಯ. ಆದ್ದರಿಂದ, ಮಣ್ಣು ಮತ್ತು ನೀರಿನ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವದು ಅತ್ಯವಶ್ಯಕವಾಗಿದೆ. (ಮೇಲೆ ತಿಳಿಸಿದ ಪ್ರಮಾಣಗಳು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸ್ವಲ್ಪ ಹೆಚ್ಚುಕಡಿಮೆ ಆಗಬಹುದು).

ಬರಹ :
ಡಾ. ಎಂ. ಬಿ. ಪಟ್ಟಣಶೆಟ್ಟಿ
, ವಿಜಯಪುರ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

20 hours ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

21 hours ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

21 hours ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

1 day ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

1 day ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

2 days ago