ವಿದೇಶದಿಂದ ಬಂದರು ಮೂಲಕ ಆಗಮನವಾದ 8.61 ಕೋಟಿ ರೂ ಮೌಲ್ಯದ ಅಡಿಕೆ ಆಮದಿಗೆ ತಡೆ | ಮಣಿಪುರದಲ್ಲಿ 18.72 ಲಕ್ಷ ರೂಪಾಯಿ ಮೌಲ್ಯ ಅಡಿಕೆ ಕಳ್ಳಸಾಗಾಣಿಕೆಗೆ ತಡೆ |

February 9, 2023
9:56 AM

ಕಳೆದ ಕೆಲವು ಸಮಯಗಳಿಂದ ಅಡಿಕೆಯು ಅಸ್ಸಾಂ ಮೂಲಕ ವಾಹನಗಳಲ್ಲಿ ಕಳ್ಳಸಾಗಾಣಿಕೆಯಾಗಿ ಭಾರತದ ಮಾರುಕಟ್ಟೆಗೆ ಪ್ರವೇಶ ಮಾಡುತ್ತಿತ್ತು, ಇದೀಗ ಬೃಹತ್‌ ಪ್ರಮಾಣದ ಅಡಿಕೆ ಬಂದರು ಮೂಲಕ ಆಗಮಿಸುತ್ತಿರುವುದು  ಬೆಳಕಿಗೆ ಬಂದಿದೆ. ಸುಮಾರು 8.61 ಕೋಟಿ ರೂಪಾಯಿ ಮೌಲ್ಯದ ಒಟ್ಟು 114.372 ಮೆಟ್ರಿಕ್‌ ಟನ್‌ಗಳಷ್ಟು  ಅಡಿಕೆಯನ್ನು ಡಿಆರ್‌ಐ ವಶಪಡಿಸಿಕೊಂಡಿವೆ. ಇದೇ ವೇಳೆ ಮಣಿಪುರದ ಸೇನಾಪತಿ ಜಿಲ್ಲೆಯಿಂದ ನಾಗಾಲ್ಯಾಂಡ್‌ನ ವಾಣಿಜ್ಯ ಕೇಂದ್ರವಾದ ದಿಮಾಪುರ್‌ಗೆ  ಸಾಗಿಸಬೇಕಿದ್ದ ಸುಮಾರು 18.72 ಲಕ್ಷ ರೂಪಾಯಿ ಮೌಲ್ಯದ 2880 ಕೆಜಿ ಅಡಿಕೆಯನ್ನುಯ ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ ಅಡಿಕೆ ಆಮದು ತಂಡ ಮತ್ತೆ ಸಕ್ರಿಯವಾಗಿರುವುದು  ಬೆಳಕಿಗೆ ಬಂದಿದೆ.

Advertisement
Advertisement

ವಿವಿಧ ಕಡೆಗಳಿಂದ ಕಂಟೈನರ್‌ಗಳಲ್ಲಿ ಬೃಹತ್ ಪ್ರಮಾಣದಲ್ಲಿ  ಅಡಿಕೆಯನ್ನು ಭಾರತಕ್ಕೆ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಡಿಆರ್‌ ಐ ಕಾರ್ಯಾಚರಣೆ ನಡೆಸಿತ್ತು. ಬಾರ್ಲಿ, ಪ್ರಾಣಿ ಆಹಾರ ಎಂದು ತಪ್ಪಾಗಿ ನಮೂದಿಸಿ ಅಡಿಕೆ ಸಾಗಾಣಿಕೆ ಮಾಡಲಾಗುತ್ತಿತ್ತು. ಟ್ಯುಟಿಕೋರಿನ್ ಮತ್ತು ಚೆನ್ನೈ ಬಂದರಿನ ಮೂಲಕ ಒಟ್ಟು ಐದು ಕಂಟೈನರ್‌ಗಳನ್ನು ತಡೆಹಿಡಿದು ತನಿಖೆ ನಡೆಸುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಒಟ್ಟು 114.372 ಮೆಟ್ರಿಕ್‌ ಟನ್‌ಗಳಷ್ಟು ಕಳ್ಳಸಾಗಣೆ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಾ 5 ಕಂಟೈನರ್‌ಗಳ ಆಮದು ಚೆನ್ನೈ ಮೂಲದ ವ್ಯಕ್ತಿಯಿಂದ ಮಾಡಲ್ಪಟ್ಟಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಹಿಂದೆ‌ ಡಿಆರ್‌ಐಯು ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ 232.349 ಮೆಟ್ರಿಕ್‌ ಟನ್ ಅಡಿಕೆಯನ್ನು ವಶಪಡಿಸಿಕೊಂಡಿದೆ. 2022-23ರಲ್ಲಿ 143 ಕೋಟಿ ಮೌಲ್ಯದ ಸುಮಾರು 3670.19 ಮೆ.ಟನ್ ಅಡಿಕೆಯನ್ನು ಡಿಆರ್‌ಐನ ವಿವಿಧ ಘಟಕಗಳು ವಶಪಡಿಸಿಕೊಂಡಿವೆ.

ಇದೇ ವೇಳೆ ಮಣಿಪುರದ ಸೇನಾಪತಿ ಜಿಲ್ಲೆಯಿಂದ ನಾಗಾಲ್ಯಾಂಡ್‌ನ ವಾಣಿಜ್ಯ ಕೇಂದ್ರವಾದ ದಿಮಾಪುರ್‌ಗೆ ಸಾಗಿಸಬೇಕಿದ್ದ  ಸುಮಾರು 18.72 ಲಕ್ಷ ರೂಪಾಯಿ ಮೌಲ್ಯದ 2880 ಕೆಜಿ ಅಡಿಕೆಯ ಅಕ್ರಮ ಸಾಗಣೆಯನ್ನು ಅಸ್ಸಾಂ ರೈಫಲ್ಸ್ ಪತ್ತೆ ಮಾಡಿದೆ. ಅಸ್ಸಾಂ ಗಡಿ ತಲುಪಿದ ಬಳಿಕ ತಲೆ ಹೊರೆ ಹಾಗೂ ಸಣ್ಣ ವಾಹನಗಳ ಮೂಲಕ ಭಾರತದ ಮಾರುಕಟ್ಟೆಗೆ ಅಡಿಕೆ ಸಾಗಾಟ ಮಾಡಲಾಗುತ್ತಿತ್ತು, ಈ ಪ್ರಕರಣವನ್ನು ಅಸ್ಸಾಂ ರೈಫಲ್ಸ್‌ ಪತ್ತೆ ಮಾಡಿದೆ. ಜನವರಿ 12 ರಂದು ಮಣಿಪುರದಲ್ಲಿ ಸುಮಾರು 66.30 ಲಕ್ಷ ರೂಪಾಯಿ ಮೌಲ್ಯದ 5 ಟ್ರಕ್‌ಗಳ ಅಡಿಕೆ ವಶಪಡಿಸಿಕೊಳ್ಳುವುದರೊಂದಿಗೆ 10 ಜನರನ್ನು ವಶಕ್ಕೆ ತೆಗೆದುಕೊಂಡಿತ್ತು. ಇದೀಗ ಮತ್ತೆ ನಡೆಸಿದ ಕಾರ್ಯಾಚರಣೆಯಲ್ಲಿ 2880 ಕೆಜಿ ಅಡಿಕೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಜೂನ್ 1 : ಯಕ್ಷಗುರು ಪಾಲೆಚ್ಚಾರು ಗೋವಿಂದ ನಾಯಕರಿಗೆ ‘ಈಶಾವಾಸ್ಯ ಪ್ರಶಸ್ತಿ’ | ಗೋವಿಂದ ಗಾಥೆ’ ಕೃತಿ ಅನಾವರಣ
May 31, 2025
9:45 PM
by: The Rural Mirror ಸುದ್ದಿಜಾಲ
ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಮೀ ಸಾರ್ವಕಾಲಿಕ ದಾಖಲೆ ಮಳೆ
May 31, 2025
9:31 PM
by: The Rural Mirror ಸುದ್ದಿಜಾಲ
ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿ
May 31, 2025
9:17 PM
by: The Rural Mirror ಸುದ್ದಿಜಾಲ
ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆ | ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆ
May 31, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group