ಸುದ್ದಿಗಳು

ಕೃಷಿ ಕ್ಷೇತ್ರದಲ್ಲಿ ಡ್ರೋನ್ ಕೇವಲ ಕೀಟನಾಶಕ ಸಿಂಪಡಣೆಗೆ ಮಾತ್ರವಲ್ಲ; ಸಾವಯವ ಮತ್ತು ನೈಸರ್ಗಿಕ ಕೃಷಿಯಲ್ಲಿ ಇದರ ಪಾತ್ರ ಅಗಾಧ – ಸರ್ಕಾರ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೃಷಿ ವಲಯದಲ್ಲಿ ಇತ್ತೀಚೆಗೆ ಡ್ರೋನ್‌ನ ಬಳಕೆ ಕೇವಲ ಕೀಟನಾಶಕ ಸಿಂಪಡಣೆಗೆ ಮಾತ್ರ ಬಳಕೆಯಾಗ್ತಿಲ್ಲ. ಅದನ್ನು ಮೀರಿ ಸಾವಯವ ಮತ್ತು ನೈಸರ್ಗಿಕ ಕೃಷಿಯಲ್ಲಿಯೂ ತನ್ನ ಅಪಾರ ವ್ಯಾಪ್ತಿಯನ್ನು ಹೊಂದಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಹೇಳಿದ್ದಾರೆ.

Advertisement

ಕಳೆದ ಒಂದೂವರೆ ವರ್ಷಗಳಲ್ಲಿ ಭಾರತದಲ್ಲಿ ಡ್ರೋನ್ ಉದ್ಯಮವು 6 ರಿಂದ 8 ಪಟ್ಟು ಬೆಳೆದಿದೆ. ದೇಶದಲ್ಲಿ ಸ್ಥಾಪಿಸಲಾದ ಡ್ರೋನ್ ಮೂಲಸೌಕರ್ಯ “ಅತ್ಯಂತ ದೃಢವಾಗಿದೆ” ಮತ್ತು ಕೃಷಿಯಲ್ಲಿ ಅತ್ಯಮೂಲ್ಯ ಸ್ಥಾನ ಪಡೆದಿರುವ ಡ್ರೋನ್‌ಗಳ ಬಗ್ಗೆ ಭಾರತದಲ್ಲಿ ನಡೆದ ಕೇಸ್ ಸ್ಟಡಿಗಳ ಬಗ್ಗೆ G20 ಸಭೆಯಲ್ಲಿ ಪ್ರದರ್ಶಿಸಲಾಗುತ್ತದೆ.

2030ರ ವೇಳೆಗೆ ಡ್ರೋನ್‌ಗಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಡುವುದು ಭಾರತದ ಗುರಿಯಾಗಿದೆ. ಇದಕ್ಕಾಗಿ ಉತ್ಪಾದನಾ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (ಪಿಎಲ್‌ಐ) ಸೇರಿದಂತೆ ಉದ್ಯಮ ಸ್ನೇಹಿ ನೀತಿ ಜಾರಿಯಲ್ಲಿದೆ ಎಂದು ಸಚಿವರು  ತಿಳಿಸಿದರು. ಲಕ್ನೋದಲ್ಲಿ ನಡೆದ ಮೊದಲ ಜಿ-20 ಕೃಷಿ ಪ್ರತಿನಿಧಿಗಳ ಸಭೆಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, “ಡ್ರೋನ್‌ಗಳನ್ನು ಕೇವಲ ಒಂದೇ ರೇಖೆಗಳ ಮೂಲಕ ನೋಡಬೇಡಿ. ಡ್ರೋನ್‌ಗಳ ಬಳಕೆಯಲ್ಲಿ ಬಹುಮುಖ ಮತ್ತು ವೈವಿಧ್ಯತೆ  ಅಗಾಧವಾಗಿದೆ.”

ಕೃಷಿಯಲ್ಲಿ ಡ್ರೋನ್ ಬಳಕೆ ಕೇವಲ ಕೀಟನಾಶಕ ಸಿಂಪಡಣೆಗೆ ಸೀಮಿತವಾಗಬಾರದು. ಇದನ್ನು ಕ್ಯಾಡಾಸ್ಟ್ರಲ್ ಮ್ಯಾಪಿಂಗ್ ಮತ್ತು ಕೃಷಿ ಭೂಮಿಯ ಸಮೀಕ್ಷೆಯಲ್ಲಿ ಬಳಸಬಹುದು ಎಂದು ಅವರು ಹೇಳಿದರು. ಸಾವಯವ ಕೃಷಿಯ ಬಳಕೆಯಲ್ಲಿ ಡ್ರೋನ್ ಅಪ್ಲಿಕೇಶನ್‌ನ ಸಹ ಅದ್ಭುತವಾಗಿದೆ. ನೈಸರ್ಗಿಕ ಕೃಷಿಯಲ್ಲಿಯೂ ಸಹ, ಡ್ರೋನ್‌ಗಳ ಅಪ್ಲಿಕೇಶನ್‌ಗೆ ಅಪಾರ ಅವಕಾಶವಿದೆ” ಎಂದು ಸಿಂಧಿಯಾ ಉಲ್ಲೇಖಿಸಿದರು.

ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲು ಮತ್ತು ಭೂಮಿಯನ್ನು ಉಳಿಸಲು ಸರ್ಕಾರವು ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ದೊಡ್ಡ ರೀತಿಯಲ್ಲಿ ಉತ್ತೇಜಿಸುತ್ತಿದೆ. ಪ್ರಸ್ತುತ ಸಾವಯವ ಕೃಷಿಯಲ್ಲಿ ಮಧ್ಯಪ್ರದೇಶ ಮುಂಚೂಣಿಯಲ್ಲಿದೆ. ಕೃಷಿಯಲ್ಲಿ ಡ್ರೋನ್‌ಗಳನ್ನು ಕೀಟನಾಶಕಗಳನ್ನು ಸಿಂಪಡಿಸಲು ಮಾತ್ರ ಅನುಮತಿಸಲಾಗಿದೆ.ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಅಪ್ಲಿಕೇಶನ್‌ಗಳು ಹೊರಹೊಮ್ಮುತ್ತವೆ ಎಂದು ಪ್ರತಿಪಾದಿಸಿದರು.

ಭಾರತವು ಇನ್ನು ಮುಂದೆ ಇನ್ನೋಬ್ಬರನ್ನು ಅವಲಂಬಿಸಲು ಇಚ್ಚಿಸಲ್ಲ ಮತ್ತು ಪ್ರಪಂಚದಲ್ಲಿ ಅನ್ವೇಷಿಸದ ಕ್ಷೇತ್ರಗಳಲ್ಲಿ ದೇಶವು ಅಗ್ರಸ್ಥಾನದಲ್ಲಿರಬೇಕು ಎಂಬ ದೃಢಸಂಕಲ್ಪದಲ್ಲಿ ಪ್ರಧಾನಿಯವರಿದ್ದಾರೆ.  ಡ್ರೋನ್ ಅಂತಹ ಒಂದು ಕ್ಷೇತ್ರವಾಗಿದೆ ಎಂದು ಅವರು ಹೇಳಿದರು. ಅಗ್ರಿಕಲ್ಚರ್ ವರ್ಕಿಂಗ್ ಗ್ರೂಪ್ (AWG)ನ ಮೊದಲ G20 ಕೃಷಿ ಪ್ರತಿನಿಧಿಗಳ ಸಭೆಯ, ಮೂರು ದಿನಗಳ ಈವೆಂಟ್, ಫೆಬ್ರವರಿ 15ರಂದು ಮುಕ್ತಾಯಗೊಳ್ಳಲಿದೆ.

ಸಭೆಯಲ್ಲಿ ನಾಲ್ಕು ಪ್ರಮುಖ ಆದ್ಯತೆಯ ಕ್ಷೇತ್ರಗಳ ಮೇಲೆ ಚರ್ಚಿಸಲಾಯಿತು. ಆಹಾರ ಭದ್ರತೆ ಮತ್ತು ಪೋಷಣೆ, ಹವಾಮಾನ ಸ್ಮಾರ್ಟ್ ವಿಧಾನದೊಂದಿಗೆ ಸುಸ್ಥಿರ ಕೃಷಿ, ಅಂತರ್ಗತ ಕೃಷಿ ಮೌಲ್ಯ ಸರಪಳಿ ಮತ್ತು ಆಹಾರ ಪೂರೈಕೆ ವ್ಯವಸ್ಥೆ ಮತ್ತು ಕೃಷಿ ಪರಿವರ್ತನೆಯ ಡಿಜಿಟಲೀಕರಣ. ಜಿ20 ಕೃಷಿ ಕಾರ್ಯಕಾರಿ ಗುಂಪಿನ ಮುಂದಿನ ಸಭೆಗಳು ಚಂಡೀಗಢ, ವಾರಣಾಸಿ ಮತ್ತು ಹೈದರಾಬಾದ್‌ನಲ್ಲಿ ನಡೆಯುವ ಸಾಧ್ಯತೆಯಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ

ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…

5 hours ago

ರಬ್ಬರ್ ತೋಟಗಳ ಮಾಹಿತಿ ಸಂಗ್ರಹ | ರಬ್ಬರ್ ತೋಟಗಳ ಜಿಯೋ-ಮ್ಯಾಪಿಂಗ್

ನೈಸರ್ಗಿಕ ರಬ್ಬರ್ ಮತ್ತು ಅದರ ಉತ್ಪನ್ನಗಳು ಅರಣ್ಯನಾಶ ಮುಕ್ತ ನಿಯಮಗಳಿಗಾಗಿ ಯುರೋಪಿಯನ್ ಒಕ್ಕೂಟ…

5 hours ago

ಹವಾಮಾನ ವರದಿ | 25-04-2025 | ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ |

ಮುನ್ಸೂಚನೆಯಂತೆ ಮೇ 1 ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಆರಂಭವಾಗುವ ಸಾಧ್ಯತೆಗಳಿವೆ.

12 hours ago

ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ

ಖಾಸಗಿಯವರಿಂದ ಒತ್ತುವರಿಯಾಗಿರುವ  ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ…

18 hours ago

ಭಾರತದಿಂದ ಅಫ್ಘಾನಿಸ್ತಾನಕ್ಕೆ 4.8 ಟನ್ ಜೀವರಕ್ಷಕ ಲಸಿಕೆ ರವಾನೆ

ಭಾರತವು 4.8 ಟನ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆಕಳುಹಿಸುವ ಮೂಲಕ ಮಾನವೀಯ ನೆರವು ನೀಡಿದೆ. ಇದರಲ್ಲಿ…

19 hours ago

ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ

ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ…

19 hours ago