ದೇಹದ ಮೇಲೆ ನೋವು ನಿವಾರಕ ಮಾತ್ರೆಗಳ ಪರಿಣಾಮಗಳು | ನಿಮ್ಮ ಆರೋಗ್ಯದ ಮೇಲೆ ಕಾಡಲಿದೆ ಗಂಭೀರ ಸಮಸ್ಯೆ |

June 13, 2024
3:28 PM

ಇಂದಿನ ಜೀವನವು ತುಂಬಾ ಒತ್ತಡದಿಂದ(Stress life) ಕೂಡಿದೆ. ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ(Work) ನಿರತರಾಗಿರುತ್ತಾರೆ, ಈ ಬಿಡುವಿಲ್ಲದ ಜೀವನಶೈಲಿಯಿಂದಾಗಿ(Life style), ಯಾರಿಗೂ ಸಂಪೂರ್ಣವಾಗಿ ವಿಶ್ರಾಂತಿ(Rest) ಪಡೆಯಲು ಸಮಯವಿಲ್ಲ, ಆದ್ದರಿಂದ ಅವರು ವಿವಿಧ ರೋಗಗಳನ್ನು(Decease) ಎದುರಿಸುತ್ತಾರೆ. ಕೆಲವೊಮ್ಮೆ ಈ ನೋವುಗಳು(Pain) ಅಸಹನೀಯವಾಗುತ್ತವೆ ಮತ್ತು ಸಮಯದ ಕೊರತೆಯಿಂದಾಗಿ ನೋವು ನಿವಾರಕಗಳನ್ನು(Pain killer) ತೆಗೆದುಕೊಳ್ಳಬೇಕಾಗುತ್ತದೆ, ಇದರಿಂದ ಅವರು ತಮ್ಮ ಮುಂದಿನ ಕೆಲಸವನ್ನು ಮುಂದುವರಿಸಬಹುದು. ಆದರೆ ಈ ಮಾತ್ರೆಗಳನ್ನು(Tablet) ಸೇವಿಸುವುದರಿಂದ ಶಾಶ್ವತ ಪರಿಹಾರವಲ್ಲ. ಇದು ತಾತ್ಕಾಲಿಕವಾಗಿದೆ ಮತ್ತು ಕಲಾಂತರದಲ್ಲಿ ಈ ನೋವು ನಿವಾರಕಗಳಿಂದ ಕೆಟ್ಟ ಅಡ್ಡ ಪರಿಣಾಮಗಳನ್ನು(Side effect) ಉಂಟುಮಾಡಬಹುದು ಎಂದು ಅನೇಕ ಜನರಿಗೆ ತಿಳಿದಿಲ್ಲ.

ಜನರು ಏಕೆ ಹೆಚ್ಚು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ? : ನಮಗೆ ನೋವು ಉಂಟಾದಾಗ ಮತ್ತು ನೋವು ಅಸಹನೀಯವಾದಾಗ, ನೋವನ್ನು ನಿವಾರಿಸಲು ನಾವು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತೇವೆ. ಈ ಮಾತ್ರೆಗಳು ತ್ವರಿತ ಉಪಶಮನವನ್ನು ನೀಡುತ್ತವೆ ಮತ್ತು ನಿಧಾನವಾಗಿ ನಾವು ಈ ಮಾತ್ರೆಗಳಿಗೆ ಒಗ್ಗಿಕೊಳ್ಳುತ್ತೇವೆ, ನಾವು ಈ ಮಾತ್ರೆಗಳನ್ನು ಸೇವಿಸುವುದನ್ನು ಮುಂದುವರೆಸಿದರೆ, ಅದು ಮುಂದೆ ನಮಗೆ ಅಪಾಯಕಾರಿಯಾಗಬಹುದು.

ನೋವು ನಿವಾರಕ ಮಾತ್ರೆಗಳು ಕಾರಣವಾಗುತ್ತವೆ ನಷ್ಟ :

  • ಅತಿಯಾಗಿ ನೋವು ನಿವಾರಕಗಳನ್ನು ಸೇವಿಸುವುದರಿಂದ ನಾವು ವಯಸ್ಸಾದವರಂತೆ ಕಾಣುತ್ತೇವೆ.
  • ಖಾಲಿ ಹೊಟ್ಟೆಯಲ್ಲಿ ಇಂತಹ ಮಾತ್ರೆಗಳನ್ನು ಎಂದಿಗೂ ಸೇವಿಸಬೇಡಿ. ಇದು ಪಿತ್ತರಸವನ್ನು ಹೆಚ್ಚಿಸುತ್ತದೆ ಮತ್ತು ಅಲ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹುಣ್ಣು ಇದ್ದರೆ, ಅದು ಹೊಟ್ಟೆಯಲ್ಲಿ ರಂಧ್ರವನ್ನು ಉಂಟು ಮಾಡುತ್ತದೆ ಮತ್ತು ತುರ್ತು ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಅಂತಹ ಸಮಯದಲ್ಲಿ ಜೀವಕ್ಕೆ ಅಪಾಯವಿದೆ.
  • ಇದರಿಂದ ಕಿಡ್ನಿ ಸಮಸ್ಯೆ ಉಂಟಾಗಬಹುದು. ಅಲ್ಲದೆ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಉಂಟಾಗುತ್ತವೆ
  • ಇಂತಹ ಮಾತ್ರೆಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ನಮಗೆ ನರ್ವಸ್, ನಿದ್ರಾಹೀನತೆ, ಚಡಪಡಿಕೆ ಕೂಡ ಹೆಚ್ಚುತ್ತದೆ. – ನೋವು ನಿವಾರಕಗಳನ್ನು ಅತಿಯಾಗಿ ಸೇವಿಸುವುದರಿಂದ ರಕ್ತದೊತ್ತಡವೂ ಕಡಿಮೆಯಾಗುತ್ತದೆ.

ಕೆಲವು ವಿಶೇಷ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನೀವು ನೋವು ನಿವಾರಕಗಳನ್ನು ತೆಗೆದುಕೊಳ್ಳಬಹುದು: ತಿಂದ 30 ನಿಮಿಷಗಳ ನಂತರ ಈ ಮಾತ್ರೆಗಳನ್ನು ತೆಗೆದುಕೊಳ್ಳಿ.

  • ಸಾಧ್ಯವಾದಷ್ಟು ಕಡಿಮೆ ನೋವು ನಿವಾರಕಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ.
  • ನೋವು ನಿರಂತರವಾಗಿ ಮತ್ತು ಅಸಹನೀಯವಾಗಿದ್ದರೆ, ವೈದ್ಯರನ್ನು ಸಂಪರ್ಕಿಸಿ.
  • ನೋವು ನಿವಾರಕಗಳನ್ನು ಯಾವಾಗಲೂ ನೀರಿನೊಂದಿಗೆ ತೆಗೆದುಕೊಳ್ಳಬೇಕು.
  • ನೋವು ನಿವಾರಕ ಮಾತ್ರೆಗಳನ್ನು ಯಾವಾಗಲೂ ವೈದ್ಯರ ಸಲಹೆಯೊಂದಿಗೆ ತೆಗೆದುಕೊಳ್ಳಬೇಕು.

ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜಾಗತಿಕ ತಾಪಮಾನ ಏರಿಕೆ ಎಚ್ಚರಿಕೆ – 1 ಡಿಗ್ರಿ ತಾಪಮಾನ ಹೆಚ್ಚಾದರೆ ಭಾರತದ ಭತ್ತದ ಇಳುವರಿ 6.6% ಕುಸಿಯುವ ಸಾಧ್ಯತೆ
August 3, 2026
9:25 PM
by: ದ ರೂರಲ್ ಮಿರರ್.ಕಾಂ
ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ
August 3, 2026
8:43 PM
by: ದ ರೂರಲ್ ಮಿರರ್.ಕಾಂ
ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ
August 3, 2026
5:45 PM
by: ದ ರೂರಲ್ ಮಿರರ್.ಕಾಂ
ಭಾರಿ ಮಳೆ ಎಚ್ಚರಿಕೆ: ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿಗೆ ಆರೆಂಜ್ – ಎಲ್ಲೋ ಅಲರ್ಟ್‌ | ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
August 3, 2026
4:38 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror