ಸುಳ್ಯವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಈ ಸಂದರ್ಭ ರೂರಲ್ ಮಿರರ್ ವತಿಯಿಂದ ಜನಮನದ ಅಭಿಪ್ರಾಯ ಸಂಗ್ರಹ ಮಾಡಿತ್ತು. ಈ ಮಾಹಿತಿ ಪ್ರಕಾರ ಈ ಬಾರಿ ಸುಳ್ಯದ ಕಣ ಕುತೂಹಲ ಮೂಡಿಸಿದೆ. ಆಸಕ್ತಿದಾಯಕ ಅಂಶ ಬೆಳಕಿಗೆ ಬಂದಿದೆ. ನೋಟಾದ ಕಡೆಗೂ ಮತದಾರರು ಇಲ್ಲಿ ಮನಸ್ಸು ಮಾಡಿದ್ದಾರೆ.
ಜನಮನದ ಅಭಿಪ್ರಾಯದಲ್ಲಿ ಒಟ್ಟು 14462 ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಶೇ.35.36 ಭಾಗೀರಥಿ ಮುರುಳ್ಯ ಪರವಾಗಿ, ಶೇ.30.74 ಜಿ ಕೃಷ್ಣಪ್ಪ ಪರವಾಗಿ ಶೇ. 24.46 ಸುಮನಾ ಬೆಳ್ಳಾರ್ಕರ್ ಅವರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಂದರ ಮೇರ ಅವರು ಶೇ.3.8 ಹಾಗೂ ನೋಟಾ ಪರವಾಗಿ ಶೇ.4.25 ಅಭಿಪ್ರಾಯ ವ್ಯಕ್ತವಾಗಿದೆ.
ಸುಳ್ಯದಲ್ಲಿ ಈ ಬಾರಿ ವಿಶೇಷವಾಗಿ ನೋಟಾದ ಕಡೆಗೆ ಒಲವು ಹೆಚ್ಚಿರುವುದು ಕೂಡಾ ಬೆಳಕಿಗೆ ಬಂದಿರುವ ಅಂಶವಾಗಿದೆ. ಉಳಿದಂತೆ ಇತರ ಅಭ್ಯರ್ಥಿಗಳು ಕೂಡಾ ಅಲ್ಪ ಅಭಿಮತವನ್ನು ಹೊಂದಿರುವುದು ಕಂಡುಬಂದಿದೆ.
ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…
ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…
ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…
ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…
ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…