ದೆಹಲಿಯಲ್ಲೊಂದು ಚುನಾವಣಾ ಗಲಾಟೆ

January 30, 2025
11:14 AM
ನೀರು ಕಲುಷಿತವಾಗಿರುವ ಬಗ್ಗೆ ಆರೋಪ-ಪ್ರತ್ಯಾರೋಪ ಇರುವ ಬಗ್ಗೆ ಚುನಾವಣೆ ವಿಷಯವಾಗಿರುವಾಗ, ಮಾಧ್ಯಮಗಳಲ್ಲಿ ಸುದ್ದಿಯಾಗುವ ಸಂದರ್ಭ ವಾಸ್ತವದ ಬಗ್ಗೆ ಅರಿಯಲು ಮಾಧ್ಯಮಗಳು ಏಕೆ ನೀರನ್ನು ಪರೀಕ್ಷೆಗೆ ಒಳಪಡಿಸಿಲ್ಲ.

ಹರ್ಯಾಣ ಸರಕಾರ ಯಮುನಾ ನದಿಗೆ ಉದ್ದಿಶ್ಯಪೂರ್ವಕವಾಗಿ ಅಮೋನಿಯಾ ಹೆಚ್ಚು ಬೆರೆಯುವಂತೆ ಮಾಡ್ತಾ ಇದೆ.ಹಾಗಾಗಿ ಆ ನೀರನ್ನು ಬಳಸಿದ ದೆಹಲಿಯ ಜನರಿಗೆ ಆರೋಗ್ಯ ಸಮಸ್ಯೆ ಬರಲಿದೆ ಅಂತ ಅರವಿಂದ ಕೇಜ್ರೀವಾಲರ ಆರೋಪ.

Advertisement

ಹಾಗೇನೂ ಆಗಿಲ್ಲ ಎಂಬುದರ ಪ್ರದರ್ಶನಕ್ಕಾಗಿ ಹರ್ಯಾಣದ ಮುಖ್ಯಮಂತ್ರಿಯವರು ಎರಡು ರಾಜ್ಯಗಳ ಗಡಿಯಲ್ಲಿ ಯಮುನಾ ನದಿಯ ನೀರು ಕುಡಿದು ತೋರಿಸಿದ ವಿಡಿಯೋ ಪ್ರದರ್ಶನಕ್ಕೆ.

ನೀರು ಕುಡಿದ ನಾಟಕ ಅವರು ಮಾಡಿದ್ದು ಅಂತ ಇವರ ಪ್ರತ್ಯಾರೋಪ. ಮಾಧ್ಯಮಗಳಲ್ಲಂತೂ ಇದರದ್ದೇ ಸುದ್ದಿ,ಚರ್ಚೆ,ವಾಗ್ವಾದ. ನನಗೆ ಅರ್ಥವಾಗದ್ದು ,ದೆಹಲಿ / ಹರ್ಯಾಣ ರಾಜ್ಯದ ಗಡಿಯಲ್ಲಿನ ನೀರಿನ ರಾಸಾಯನಿಕ ಪರೀಕ್ಷೆ ಯಾವುದೇ ಮಾಧ್ಯಮ ಯಾಕೆ ಮಾಡಿಲ್ಲ ಅಂತ.ಅದು ಮತ್ತು ಅದರ ಜೊತೆ ದೆಹಲಿ ರಾಜ್ಯದ ಇನ್ನೊಂದು ಬದಿಯಲ್ಲಿನ ನದಿ ನೀರನ್ನು ಅಮೋನಿಯಾ ರಾಸಾಯನಿಕದ ಪ್ರಮಾಣಕ್ಕಾಗಿ ಪರೀಕ್ಷೆ ಮಾಡಿಸಿದ್ದರೆ ಸಮಸ್ಯೆ ಕ್ಷಣ ಮಾತ್ರದಲ್ಲಿ ಪರಿಹಾರವಾಗುತ್ತಿತ್ತಲ್ಲಾ ಅಂತ.  ಅಂದ ಹಾಗೆ ದೆಹಲಿ ರಾಜ್ಯ ದಾಟಿದ ಬಳಿಕ ಯಮುನಾ ನದಿ ಯಾವ ರಾಜ್ಯದಲ್ಲಿ ಹರಿದು ಹೋಗುತ್ತಿದೆ? ಅಲ್ಲಿ ನದಿ ನೀರಿನ ಪರಿಸ್ಥಿತಿ ಹೇಗಿದೆ?

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ರಮೇಶ್‌ ದೇಲಂಪಾಡಿ

ರಮೇಶ್‌ ದೇಲಂಪಾಡಿ ಅವರು ಕೃಷಿಕರು. ಪ್ರಯೋಗಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಅಡಿಕೆ, ತೆಂಗು, ತಾಳೆ, ರಬ್ಬರ್‌ ಇವರ ಪ್ರಮುಖ ಕೃಷಿ. ಅಡಿಕೆ ಬೇರುಹುಳ, ಅಡಿಕೆ ಹಳದಿ ಎಲೆರೋಗ ಸೇರಿದಂತೆ ಕೃಷಿ ಸಂಬಂಧಿತ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ

ಗೆಲ್ಲುವುದಕ್ಕೂ-ಸೋಲುವುದಕ್ಕೂ ಈಗ ಸೋಶಿಯಲ್‌ ಮೀಡಿಯಾ ಸಾಕು..!
April 8, 2025
7:31 AM
by: ಮಹೇಶ್ ಪುಚ್ಚಪ್ಪಾಡಿ
ಬೃಹಸ್ಪತಿ ಅಂದರೆ ಜ್ಞಾನವಂತ
April 6, 2025
8:00 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಎಳೆಯ ಹಲಸಿನ ಕಾಯಿ ಪಕೋಡ
April 5, 2025
8:00 AM
by: ದಿವ್ಯ ಮಹೇಶ್
ಪುಟ್ಟ ಕಿಂಡಿಯಿಂದ ದೊಡ್ಡ ಕಿಟಕಿಯತ್ತ
April 3, 2025
8:30 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

You cannot copy content of this page - Copyright -The Rural Mirror

Join Our Group