ಜೀವಂತ ಪ್ರಾಣಿಗಳನ್ನು ಮೂಟೆಯಂತೆ ಸಾಗಾಣಿಕೆ ಮಾಡುವ ಕ್ರೌರ್ಯ ನಿಲ್ಲಲಿ | ದೇಸಿ ಹಸುಗಳು ಸ್ವಾಭಿಮಾನದಿಂದ ಬಾಳುವಂತಾಗಬೇಕಿದೆ |

March 29, 2024
10:20 PM

ಇತ್ತೀಚಿಗೆ ಎರಡು ವಿಭಿನ್ನ ವೀಡಿಯೋ ಚಿತ್ರಿಕೆಯನ್ನ ಮಾಧ್ಯಮದಲ್ಲಿ ನೋಡಿದೆ. ಒಂದು ಗೋಸಾಗಾಣಿಕೆಯನ್ನ(Cow transporting) ಪೆಟ್ರೋಲ್ ಟ್ಯಾಂಕರ್(Petrol tanker) ನಲ್ಲಿ ಮಾಡುವ ವೀಡಿಯೋ ಮತ್ತೊಂದು ಜೈನ ದಿಗಂಬರ ಸ್ವಾಮೀಜಿಗಳು ತಮ್ಮ ಮಂತ್ರಶಕ್ತಿಯ ಮೂಲಕ ಸ್ಮೃತಿ ತಪ್ಪಿದ ಹಸುವನ್ನು ಎಬ್ಬಿಸುವ ಚಿತ್ರಿಕೆ…

Advertisement

ಜೈನ ಸ್ವಾಮೀಜಿ ಗಳ ಮಂತ್ರ ಶಕ್ತಿಯ ಪವಾಡ ವಿನಾಶದ ಪ್ರಪಾತದ ಆಳಕ್ಕೆ ಕುಸಿದು ಬಿದ್ದ ನಮ್ಮ ದೇಸಿ ತಳಿಯ ಹಸುಗಳನ್ನು ಮೇಲೆತ್ತಿ ನಮ್ಮ ದೇಸಿ ಹಸುಗಳು ಸ್ವಾಭಿಮಾನದಿಂದ ಬಾಳುವಂತಾಗಬೇಕಿದೆ…!! ಹಸುಗಳನ್ನು ಅತ್ಯಂತ ಅಮಾನುಷವಾಗಿ ಯಾವುದೋ ಜಡ ವಸ್ತುವಿನಂತೆ ಟ್ಯಾಂಕರ್ ಲಾರಿಗಳಲ್ಲಿ ತುಂಬಿಕೊಂಡು ಹೋಗುವ ಪ್ರಯೋಗಶೀಲತೆ, ಹೊಸ ಆಲೋಚನೆ ನಮ್ಮ ದೇಸಿ ಹಸುಗಳ ಸಲಹಿ ಸಾಕಲು ಬೇಕಿದೆ.

ನಮ್ಮ ದೇಸಿ ತಳಿಯ ಹಸುಗಳ ಗವ್ಯೋತ್ಪನ್ನಗಳಿಗೆ ಗೌರವಯುತ ಬೆಲೆ ತರುವ ಸಾಮಾಜಿಕ ಮತ್ತು ಸರ್ಕಾರದ ಕಾಳಜಿ ಏರ್ಪಡಲಿ… ಈ ಜೀವಂತ ಪ್ರಾಣಿಗಳನ್ನು ಮೂಟೆಯಂತೆ ಸಾಗಾಣಿಕೆ ಮಾಡುವ ಕ್ರೌರ್ಯ ನಿಲ್ಲಲಿ… ಗೋವುಳಿಯುವ ವಿಚಾರದಲ್ಲಿ ಜೈನ ಮುನಿವರ್ಯರ ಮಂತ್ರ ಶಕ್ತಿಯ ಪವಾಡ ಆಗಿ ದೇಸಿ ಗೋವುಗಳು ಸ್ವಾಭಿಮಾನದಿಂದ ಬೀಗಿ ಬಾಳಲೆಂದು ಬಯಸೋಣ..

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಹವಾಮಾನ ವರದಿ | 21-04-2026 | ಕರಾವಳಿ-ಮಲೆನಾಡಿನಲ್ಲಿ ಮಳೆ ಜೋರಾಗಲಿದೆ, ಉತ್ತರ ಒಳನಾಡಿಗೂ ಗುಡುಗು ಮಳೆ..!
April 21, 2026
3:17 PM
by: ಸಾಯಿಶೇಖರ್ ಕರಿಕಳ
ವಿದ್ಯುತ್ ದರ ಶಾಕ್..! ಸಣ್ಣ ಕೈಗಾರಿಕೆಗಳಿಗೆ ಭಾರೀ ಹೊರೆ – ಉಮಾ ರೆಡ್ಡಿ ಎಚ್ಚರಿಕೆ
April 21, 2026
7:35 AM
by: ಮಿರರ್‌ ಡೆಸ್ಕ್
ಮುಳಬಾಗಿಲಿನಲ್ಲಿ ಹೋಟೆಲ್ ಮೇಲೆ ದಾಳಿ : 30 ಲೀಟರ್ ಹಳೆಯ ತುಪ್ಪ ಜಪ್ತಿ, ದಂಡ
April 21, 2026
7:31 AM
by: ಮಿರರ್‌ ಡೆಸ್ಕ್
ರೈತರಿಗೆ ಗುಡ್ ನ್ಯೂಸ್..! ತೊಗರಿ ಖರೀದಿ ಅವಧಿ ಮೇ 15ರವರೆಗೆ ವಿಸ್ತರಣೆ
April 21, 2026
7:24 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror