ಬೆಳೆಗಳಿಗೆ ಶಕ್ತಿಯ ಸಾರ ಮೊದಲ ಮಳೆ, ಗುಡುಗು, ಸಿಡಿಲು | ನೈಸರ್ಗಿಕವಾಗಿ ಸಿಗುತ್ತದೆ ಭರಪೂರ ಇಂಗಾಲ, ಸಾರಜನಕ

May 22, 2023
11:51 AM

ಇತ್ತೀಚಿನ ಡಿಜಿಟಲ್ ಯುಗದಲ್ಲಿ  ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ಬಗೆಯ ಮಾಹಿತಿಗಳು ರೈತರಿಗೆ ಲಭ್ಯವಾಗುತ್ತದೆ. ಅದರಲ್ಲೂ ವಾಟ್ಸ್ ಅಪ್ ಗಳಲ್ಲಿ ಅನೇಕ ರೈತರ ತಮ್ಮ ಕೃಷಿ ಅನುಭವ, ತಾವು‌ ಮಾಡುವ ಕೃಷಿ, ತಾವು ಬಳಸುವ ಗೊಬ್ಬರ, ಸಾವಯವ ಕೃಷಿ, ವೈಜ್ಞಾನಿಕ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಹೀಗೆ ವಾಟ್ಸ್ ಆಪ್ ನಲ್ಲಿ ಕೃಷಿಕರೊಬ್ಬರು ಹಂಚಿಕೊಂಡ ಮಾಹಿತಿಯನ್ನು ನೀವು ಓದಿ ನೋಡಿ.

ಇಂದು ನಮ್ಮ ಊರಿನಲ್ಲಿ ಗುಡುಗು ಮಿಂಚು ಸಮೇತ 2 ಗಂಟೆ ಬಾರಿ ಮಳೆ ಬಂದಿದೆ. ಅದರ ಪರಿಣಾಮವಾಗಿ ನಮ್ಮ ಭೂಮಿಗೆ ಪ್ರತಿ ಎಕರೆಗೆ ಸುಮಾರು 30 ಕೆಜಿ ಯೂರಿಯಾ ಗೊಬ್ಬರ ಲಭಿಸಿದಂತಾಗಿದೆ.ಈ ಮಾತು 100 ರಷ್ಟು ಸತ್ಯಾ ಈ ಮಾತನ್ನು ನಾನು ಹೇಳುತ್ತಿಲ್ಲ ನಮ್ಮ ಪರಂಪರೆ ಮತ್ತು ವಿಜ್ಞಾನ ಹೇಳುತ್ತದೆ

ಪಾರಂಪರಿಕವಾಗಿ ನಮ್ಮ ಹಿರಿಯರು ಹೇಳುತ್ತಿದ್ದರು ರೋಣಿ ಮಳೆಯಾದರೆ ಓಣಿ ತುಂಬಾ ಕಾಳು ಎಂದು .
ಈ ಮಾತು ನಿಜ ಇದರಲ್ಲಿ ವಿಜ್ಞಾನವಿದೆ. ವಾತಾವರಣದಲ್ಲಿ ಶೇಕಡಾ 75 ಭಾಗ ಸಾರಜನಕ ಇದೆ 21ಭಾಗ ಆಮ್ಲಜನಕ ಇದೆ ಇವು ಎರೆಡರ ಮದ್ಯೆ ಮಿಂಚು ಬಂದರೆ ಅದು ನೈಟ್ರೇಟ್ ಆಮ್ಲವಾಗಿ ಬದಲಾಗುತ್ತದೆ ಆ ಆಮ್ಲ ಮಳೆ ನೀರಿನಲ್ಲಿ ಬೆರೆತರೆ ಅವುಗಳ ನಡುವೆ ರಾಸಾಯನಿಕ ಕ್ರಿಯೆ ನೆಡೆದು ಆರ್ಗ್ಯಾನಿಕ್ ನೈಟ್ರೋಜನ್ (ಸಾವಯವ ಸಾರಜನಕ) ಅಂದರೆ ನಾವು ಅಂಗಡಿಗಳಿಂದ ತರುವ ಯೂರಿಯಾ ಗೊಬ್ಬರ ಮಳೆ ನೀರಿನಲ್ಲಿ ಬೆರೆತು ಭೂಮಿಗೆ ಒದಗುತ್ತದೆ .

ಯಾರ ಭೂಮಿಯಲ್ಲಿ ಸಾವಯವ ಇಂಗಾಲ ಇದೆಯೋ ಅಥವಾ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆಯೋ ಅಂಥವರ ಭೂಮಿಗೆ ಮೇಲೆ ಹೇಳಿದ ಹಾಗೆ ಪ್ರತಿ ಎಕರೆಗೆ 30 ಕೆಜಿ ಯೂರಿಯಾ ದೊರಕುತ್ತದೆ.

ಹಾಗಾಗಿ ರೈತ ಮಿತ್ರರಲ್ಲಿ ಒಂದು ವಿನಂತಿ ನಮ್ಮ ಜಮೀನಿನಲ್ಲಿ ಇಂಗಾಲದ ಪ್ರಮಾಣವನ್ನು ಹೆಚ್ಚಿಸಲು ಅಥವಾ ನೀರು ಹಿಡಿದು ಇಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಆದಷ್ಟು ರಾಸಾಯನಿಕ ಬಳಕೆ ಕಡಿಮೆ ಮಾಡಿ..

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕಲಬುರ್ಗಿಯಲ್ಲಿ ಧಾರಾಕಾರ ಮಳೆ | ವಿವಿದೆಡೆ ಜನಜೀವನ ಅಸ್ತವ್ಯಸ್ಥ | ಮತ್ತೆ ಮಳೆಯಬ್ಬರ
September 23, 2025
7:46 AM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು | ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನಗರ ಪರ್ಯಟನೆ
September 23, 2025
7:36 AM
by: The Rural Mirror ಸುದ್ದಿಜಾಲ
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
September 22, 2025
7:04 PM
by: ದ ರೂರಲ್ ಮಿರರ್.ಕಾಂ
ನವರಾತ್ರಿ – ದಸರಾ | ಶಕ್ತಿ ತತ್ತ್ವದ ವಿಜ್ಞಾನ ಮತ್ತು ಸಂಸ್ಕೃತಿ
September 22, 2025
7:35 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror

Join Our Group